ರಾಜ್ಯ ಲಿಂಗಾಯತ ನೌಕರರ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಎಂ. ಬಿ. ಪಾಟೀಲ

ವಿಜಯಪುರ: ರಾಜ್ಯ ಲಿಂಗಾಯತ ನೌಕರರ ಸಂಘದ 2022ನೇ ವರ್ಷದ ಕ್ಯಾಲೆಂಡರನ್ನು ಮಾಜಿ ಸಚಿವ, ಶಾಸಕ ಎಂ. ಬಿ. ಪಾಟೀಲ ಅವರು ವಿಜಯಪುರ ನಗರದ ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಲಿಂಗಾಯತ ನೌಕರರ ಸಂಘವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಲಿಷ್ಟವಾಗಿ ಬೆಳೆಯಲಿ ಮತ್ತು ದಿನದರ್ಶಿಕೆಯು ಬಸವ ತತ್ವದ ನಿಜಾಚರಣೆಗಳನ್ನು ಒಳಗೊಂಡಿದ್ದು ಉಪಯುಕ್ತ, ಸಂಗ್ರಹಿಸಿಡಬಲ್ಲ ಮಾಹಿತಿಗಳಿಂದ ತುಂಬಿದೆ. ಇದನ್ನು ಬಹಳ ಸಂತೋಷದಿಂದ ಬಿಡುಗಡೆಗೊಳಿಸಿದ್ದೇನೆ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ರಾಜ್ಯ ಲಿಂಗಾಯತ ನೌಕರರ ಸಂಘದ ರಾಜ್ಯಾಧ್ಯಕ್ಷ ಶಿವರಾಜ ಕಪಲಾಪುರೆ, ಯುವ ಲಿಂಗಾಯತ ಮುಖಂಡರು, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಬಸವರಾಜ ಕುಮಸಗಿ ಸಾಹುಕಾರ, ರಾಜ್ಯ ಖಜಾಂಚಿ ವಿಜಯಕುಮಾರ ಮಲಶೆಟ್ಟಿ, ಬೀದರ ಜಿಲ್ಲಾಧ್ಯಕ್ಷ ರಾಮಶೆಟ್ಟಿ ಕೆಂಚಾ ರಾಜ್ಯ ಸಂಘಟನಾ ಕಾರ್ಯದರ್ಶಿ ಶರಣಬಸವ ಲಂಗೋಟಿ, ವಿಜಯಪುರ ಜಿಲ್ಲಾಧ್ಯಕ್ಷ ಸುಧಾಕರ ಬಿರಾದಾರ ಇಂಡಿ, ಬೀದರ ತಾಲೂಕು ಅಧ್ಯಕ್ಷ ಸಂಗರಾಯಪ್ಪ ಬಿರಾದಾರ, ಜಿಲ್ಲಾ ಸಹಕಾರ್ಯದರ್ಶಿ ರಾಜಕುಮಾರ ಬಿರಾದಾರ, ಔರಾದ ತಾಲೂಕಿನ ಉಪಾಧ್ಯಕ್ಷ ದಯಾನಂದ ಮನಮಿ, ವಿಜಯಪುರದ ಗುರು ಪಾಟೀಲ, ಮಲ್ಲು ಖೇಡಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌