ಸಂಜಯ ಪಾಟೀಲ ಕನಮಡಿ ಕೇಂದ್ರ ಭಾರತೀಯ ಕೃಷಿ ವಿಜ್ಞಾನ ಪರಿಷತ್ತಿಗೆ ನಾಮನಿರ್ದೇಶನ

ವಿಜಯಪುರ: ಬಿಜೆಪಿ ಯುವ ಮುಖಂಡ ಸಂಜಯ ಪಾಟೀಲ ಕನಮಡಿ ಅವರನ್ನು ಕೇಂದ್ರ ಸರಕಾರದ ಭಾರತೀಯ ಕೃಷಿ ವಿಜ್ಞಾನ ಪರಿಷತ್ತಿಗೆ(ಐಸಿಎಆರ್) ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದವರಾಗಿರುವ ಸಂಜಯ ಪಾಟೀಲ ಕನಮಡಿ ಅವರನ್ನು ಪುಣೆಯಲ್ಲಿರುವ ಐ ಸಿ ಎ ಆರ್-ಎನ್ ಆರ್‌ ಸಿ ದ್ರಾಕ್ಷಿ ವಿಭಾಗಕ್ಕೆ ಅಧಿಕಾರೇತರ ಸದಸ್ಯರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ವಿಜಯಪುರ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

 

Leave a Reply

ಹೊಸ ಪೋಸ್ಟ್‌