ಇಂದು, ನಾಳೆ ವಜ್ರ ಹನುಮಾನ ನಗರ ರೇಲ್ವೆ ಗೇಟ್ ಮೂಲಕ ಸಂಚಾರ ಬಂದ್- ಪರ್ಯಾಯ ಮಾರ್ಗ ಅನಿವಾರ್ಯ

ವಿಜಯಪುರ: ಕಾಮಗಾರಿ ಹಿನ್ನೆಲೆಯಲ್ಲಿ ಶನಿವಾರ(ಇಂದು) ಮತ್ತು ರವಿವಾರ ಎರಡು ದಿನ ವಿಜಯಪುರ ನಗರದ ವಜ್ರಹನುಮಾನ ರೇಲ್ವೆ ಗೇಟ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

ಎರಡು ದಿನ ಬೆ. 8 ರಿಂದ ರಾತ್ರಿ 8ರ ವರೆಗೆ ರೇಲ್ವೆ ಗೇಟ್ ಬಂದ್ ಮಾಡಲಾಗುತ್ತದೆ ಎಂದು ನೈರುತ್ಯ ರೇಲ್ವೆ ವಲಯ ಸೀನಿಯರ್ ಸೇಕ್ಷನ್ವೆಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೀಗಾಗಿ ಬಾಗಲಕೋಟೆ ಕಡೆಗೆ ತೆರಳಬೇಕಾದ ಜನರು ಇದಕ್ಕೆ ಪರ್ಯಾಯ ಮಾರ್ಗದಲ್ಲಿ‌ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ವಹ್ರ ಹನುಮಾನ ರೇಲ್ವೆ ಗೇಟ್ ಪಕ್ಕದಲ್ಲಿರುವ ರಸ್ತೆಯ ಮೂಲಕ ತೆರಳಿ ಬೇಗಂ ತಾಲಾಬ್ ಕಡೆಯಿಂದ ಬರುವ ರಸ್ತೆಯ ಮೇಲ್ಸೇತುವೆ ಮೂಲಕ ಬಾಗಲಕೋಟೆಗೆ ತೆರಳಲು ಸಂಚರಿಸಬಹುದಾಗಿದೆ.

ಈಗಾಗಲೇ ಕಳೆದ ಹಲವಾರು ತಿಂಗಳಿಂದ ಇಬ್ರಾಹಿಂಪೂರ ಬಳಿ ರೇಲ್ವೆ ಮೇಲ್ಸೆತುವ ಕಾಮಗಾರಿ ನಡೆಯುತ್ತಿರುವುದರಿಂದ ಮನಗೂಳಿ ಅಗಸಿಯಿಂದ ಆಲಮಟ್ಟಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ರೇಲ್ವೆ ಗೇಟ್ ಬಳಿ ಬಂದ್ ಆಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ಎರಡು ದೊನ ಇಬ್ರಾಹಿಂಪೂರ ರೇಲ್ವೆ ಸ್ಟೇಷನ್ ಬಳಿಯ ವಜ್ರ ಹನುಮಾನ ನಗರ ರೇಲ್ವೆ ಗೇಟ್ ಕೂಡ ಬಂದ್ ಆಗಿರುವುದು ಸಾರ್ವಜನಿಕರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

Leave a Reply

ಹೊಸ ಪೋಸ್ಟ್‌