ಸಿದ್ದೇಶ್ವರ ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿ ಹಜರತ್ ಮುರ್ತುಜಾ ಖಾದ್ರಿ ದರ್ಗಾದಲ್ಲಿ ಯಾಸೀನ ಜವಳಿ ಮತ್ತೀತತರಿಂದ ವಿಶೇಷ ಪ್ರಾರ್ಥನೆ

ವಿಜಯಪುರ: ನಡೆದಾಡುವ ದೇವರೆಂದೇ ಹೆಸರಾಗಿರುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಯಾಸೀನ ಜವಳಿ ಮತ್ತು ಇತರರು ವಿಜಯಪುರ ನಗರದ ಹಜರತ್ ಮುರ್ತುಜಾ ಖಾದ್ರಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಾಸೀನ ಜವಳಿ, ನಡೆದಾಡುವ ದೇವರಾದ ಶ್ರೀ ಸಿದ್ಧೇಶ್ವರ ಶ್ರೀಗಳು ಬೇಗನೇ ಗುಣಮುಖರಾಗಲಿ.  ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮಿದ ಕುಡುಗೆ ನಿರಂತವರವಾಗಿರಲಿ.  ಪ್ರವಚನಗಳ ಮೂಲಕ ಅವರು ನಾಡಿನ ಜನತೆಗೆ ನೀಡುತ್ತಿರುವ ಸಂದೇಶಗಳು ಮುಂದುರವರೆಯಬೇಕು.  ಈ ಹಿನ್ನೆಲೆಯಲ್ಲಿ ತಾವು ಅಲ್ಪಸಂಖ್ಯಾತರ ವತಿಯಿಂದ ವಿಶೇಷ ಪ್ರಾರ್ಥನೆ ಕೈಗೊಂಡಿರುವುದಾಗಿ ತಿಳಿಸಿದರು.  ಅಲ್ಲದೇ, ನಾಡಿನ ಜನರೆಲ್ಲರೂ ಸೇರಿಕೊಂಡು ಶ್ರೀಗಳು ತಕ್ಷಣ ಗುಣರಾಗಲೆಂದು ಪ್ರಾರ್ಥನೆ ಮಾಡಬೇಕೆಂದು ಜನರಲ್ಲಿ ವಿನಂತಿ ಮಾಡಿಕೊಂಡರು.

Leave a Reply

ಹೊಸ ಪೋಸ್ಟ್‌