ಸತತವಾಗಿ 61 ಗಂಟೆ ಹಗಲು ರಾತ್ರಿ ಟ್ರ್ಯಾಕ್ಟರ್ ಚಲಾಯಿಸಿ ಭೂತಾಯಿ ಮಡಿಲಲ್ಲಿ ವಿನೂತನ ಸಾಧನೆ ಮಾಡಿದ ಮಣ್ಣಿನ ಮಗ

ವಿಜಯಪುರ: ರೈತರೆಂದರೆ ಅವರೇ ಬೇರೆ ಅವರ ಶ್ರಮವೇ ಬೇರೆ.  ಭೂತಾಯಿಯ ಸೇವೆ ಎಂದರೆ ಅವರಿಗೆ ಎಂದೂ ದಣಿವಾಗುವುದಿಲ್ಲ.  ಆಯಾಸ ಎನಿಸುವುದಿಲ್ಲ.  ತಾಯಿಯ ಮಡಿನಲ್ಲಿರುವಷ್ಟೇ ಸಂತಸ ಅವರಿಗೆ ಸಿಗುತ್ತದೆ.  ಅದರಲ್ಲೂ ತಮ್ಮ ದಿನ ನಿದ್ಯದ ಕೆಲಸಗಳಿಂದಲೇ ಉತ್ತರ ಕರ್ನಾಟಕ ಅನ್ನದಾತರು ಸದಾ ಒಂದಿಲ್ಲೋಂದು ಸಾಧನೆ ಮಾಡುತ್ತಿರುತ್ತಾರೆ.  ತಾವು ಮಾಡುವ ಕೆಲಸ ಸಾಧನೆ ಅಥವಾ ಹೊಸ ಮೈಲುಗಲ್ಲು ಎಂದು ಪರಿಗಣಿಸಲಾಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಅವರಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ.  ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಕಾಯಕದಲ್ಲಿ ನಿರತರಾಗಿರುತ್ತಾರೆ. ಇಂಧದ್ದೆ […]

ಮಹಿಳಾ ವಿವಿಗೆ ಅಕ್ಕಮಹಾದೇವಿ ನಾಮಕರಣ ಮಾಡಿದ ಶ್ರೇಯಸ್ಸು ಎಂ. ಬಿ. ಪಾಟೀಲ ಮತ್ತು ಕಾಂಗ್ರೆಸ್ಸಿಗೆ ಸಲ್ಲಬೇಕು- ಬಿಜೆಪಿಗೆ ಅಲ್ಲ- ಸಚಿವ ಕಾರಜೋಳಗೆ ಮಾಜಿ ಶಾಸಕ ಆಲಗೂರ ಪ್ರತ್ಯುತ್ತರ

ವಿಜಯಪುರ: ಬಸವ ನಾಡು ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ನಾಮಕರಣ ಮಾಡಲು ಮಾಜಿ ಸಚಿವ ಎಂ. ಬಿ. ಪಾಟೀಲ ಮತ್ತು ಕಾಂಗ್ರೆಸ್ ಸರಕಾರ ಕಾರಣವೇ ಹೊರತು ಬಿಜೆಪಿ ಅಲ್ಲ ಎಂದು ಮಾಜಿ ಶಾಸಕ ಮತ್ತು ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಹೇಳಿದ್ದಾರೆ. ವಿಜಯಪುದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ನಾಮಕರಣವನ್ನು ಬಿಜೆಪಿ ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ.  ಈ ವಿವಿ ನಾಮಕರಣ […]

ಸೂರ್ಯ ನಮಸ್ಕಾರ ಮೂಲಕ ಆರೋಗ್ಯ ಮನೋಬಲ ವೃದ್ಧಿಗೆ ಸಂಕಲ್ಪ ಮಾಡಿದ ಹೆಂಗಳೆಯರು

ವಿಜಯಪುರ: ಮಹಿಳೆಯರು ಸದಾ ತಂತಮ್ಮ ದಿನನಿತ್ಯದ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ.  ಬಹುತೇಕ ಹೆಂಗಸರು ಮನೆ ಕೆಲಸ, ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಅವರ ಇಡೀ ದಿನ ಕಳೆದು ಬಿಡುತ್ತದೆ.  ಇನ್ನೂ ಕೆಲವರು ಉದ್ಯೋಗ ಮಾಡುತ್ತ ಕುಟುಂಬ ನಿರ್ವಹಣೆ ಮಾಡುತ್ತಾರೆ. ವಿಶ್ರಾಂತಿ ಮತ್ತು ಇತರ ಆರೋಗ್ಯವರ್ಧಕ ಕ್ರಿಯಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳವವರು ಇರುತ್ತಾರೆ.  ಆದರೆ, ಅಂಥ ಹೆಂಗಳೆಯರ ಸಂಖ್ಯೆ ತೀರ ಕಡಿಮೆ.  ಹೋಗೆ ಸದಾ ಒಂದಿಲ್ಲೊಂದು ಕೆಲಸಗಳಲ್ಲಿ ವ್ಯಸ್ಥರಾಗಿರುವ ವನಿತೆಯರು ಗಣರಾಜ್ಯೋತ್ಸವದ ದಿನ ಸಂಜೆ ಸ್ವಲ್ಪ ರಿಲ್ಯಾಕ್ಸ್ ಆದರು.  ಬಸವ […]