ಬೆಂಗಳೂರಿನಲ್ಲಿ ಅಬಕಾರಿ ಪೊಲೀಸರ ಕಾರ್ಯಾಚರಣೆ- ಇಬ್ಬರ ಬಂಧನ, ರೂ. 2 ಲಕ್ಷ ಮೌಲ್ಯದ ಗಾಂಜಾ ವಶ

ಬೆಂಗಳೂರು: ಎರಡು ಪ್ರತ್ಯೇಕ ಕಡೆ ಧಾಳಿ ನಡೆಸಿರುವ ಬೆಂಗಳೂರಿನ ಮಹಾದೇವಪುರ ಅಬಕಾರಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ ರೂ. 2 ಲಕ್ಷ ಮೌಲ್ಯದ ಒಟ್ಟು 1.92 ಕೆಜಿ ಒಣಗಿದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಅಬಕಾರಿ ಜಂಟಿ ಆಯುಕ್ತ ಜೆ. ಗಿರಿ ಮತ್ತು ಉಪ ಆಯುಕ್ತ ಬಸವರಾಜ ಸಂದಿಗವಾಡ ಮಾರ್ಗದರ್ಶನದಲ್ಲಿ ಮಹದೇವಪುರ ಅಬಕಾರಿ ಠಾಣೆಯ ಇನ್ಸಪೆಕ್ಟರ್ ಎ. ಎ. ಮುಜಾವರ ಮತ್ತು ಸಿಬ್ಬಂದಿ ಈ ಧಾಳಿ ನಡೆಸಿದ್ದಾರೆ.

ದೊಡ್ಡನೆಕ್ಕುಂಡಿಯ ಎರಡು ಕಡೆ ಈ ಧಾಳಿ ನಡೆದಿದ್ದು, ಆಂಧ್ರ ಪ್ರದೇಶದ ಚೆಮಲಾ ಅಭಿಲೇಶ ಮತ್ತು ನೆಲ್ಲೂರಿನ ತುಮ್ಮಲಪೆಂಟ ದಿವಾಕರ ಎಂಬುವನ್ನು ಈ ಪ್ರಕರಣಗಳ ಸಂಬಂಧ ಬಂಧಿಸಿದ್ದಾರೆ.

ಈ ಕುರಿತು ಎನ್ ಡಿ ಪಿ ೆಸ್ ಕಾಯಿದೆಯಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Leave a Reply

ಹೊಸ ಪೋಸ್ಟ್‌