ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತಮ ಬಜೆಟ್ ಮಂಡಿಸಿದ್ದಾರೆ- ಉಮೇಶ ಕಾರಜೋಳ

ವಿಜಯಪುರ: ಉತ್ತರ ಪ್ರದೇಶ ಮತ್ತು ಪಂಜಾಬ ಚುನಾವಣೆಯನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಜನಪ್ರಿಯ ಯೋಜನೆಗಳನ್ನು ಘೋಷಿಸದೇ ಜನರ ಪರವಾಗಿ ಬಜೆಟ್ ಮಂಡನೆ ಮಾಡುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅತ್ಯುತ್ತಮವಾದ ಕೊಡುಗೆ ನೀಡಿದ್ದಾರೆ ಎಂದು ಬಿಜೆಪಿ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.

ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕೇವಲ ಚುನಾವಣೆ ದೃಷ್ಟಿಕೋನದಿಂದ ಬಜೆಟ್ ಮಂಡನೆ ಮಾಡುತ್ತಾರೆ ಎಂಬ ವಿಪಕ್ಷಗಳಿಗೆ ಸೊಪ್ಪು ಹಾಕದೇ ಜನಪರ ಹಾಗೂ ದೇಶದ ಅಭಿವೃದ್ಧಿ ದೃಷ್ಟಿಕೋನವಿರಿಸಿ ಕೇಂದ್ರ ಹಣಕಾಸು ಸಚಿವೆ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಾತೃಭಾಷೆಯಲ್ಲಿ ಡಿಜಿಟಲ್ ಪಾಠಕ್ಕೆ ಒತ್ತು, ಆರೋಗ್ಯ ಕ್ಷೇತ್ರಕ್ಕೆ ತಾಂತ್ರಿಕ ಸ್ಪರ್ಶ, ಒನ್ ನೇಷನ್-ಒನ್ ರಿಜಿಸ್ಟೆçÃಷನ್, ಜಮೀನುಗಳ ದಾಖಲೆಗಳ ಡಿಜಟೀಲಿಕರಣಕ್ಕೆ ಆದ್ಯತೆ ಹೀಗೆ ಅನೇಕ ಉತ್ತಮ ಅಂಶಗಳು ಬಜೆಟ್‌ನಲ್ಲಿವೆ. ಸಹಕಾರ ಸಂಘಗಳ ಬಲವರ್ಧನೆ, ತೆರಿಗೆ ಹೊರೆ ಹಾಕದಿರುವ ಎಲ್ಲ ವಿಷಯಗಳಿಂದ ಈ ಬಜೆಟ್ ಪರಿಪೂರ್ಣವಾಗಿದೆ, ದೂರದೃಷ್ಟಿಯಿಂದ ಕೂಡಿದ ಬಜೆಟ್ ಇದಾಗಿದೆ ಎಂದು ಉಮೇಶ ಕಾರಜೋಳ ಹೇಳಿದ್ದಾರೆ.

Leave a Reply

ಹೊಸ ಪೋಸ್ಟ್‌