ಎರಡನೇ ಬಾರಿ ಎಂ ಎಲ್ ಸಿ ಆಗಿ ಸುನೀಲಗೌಡ ಪಾಟೀಲ ಪ್ರಮಾಣ ವಚನ ಸ್ವೀಕಾರ- ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್ ಮುಖಂಡರಿಂದ ಶುಭ ಕೋರಿಕೆ

ಬೆಂಗಳೂರು: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಎರಡನೇ ಬಾರಿಗೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನ ಪರಿಷತ ಚುನಾವಣೆಯಲ್ಲಿ ಕಾಂಗ್ರೆಸ್‍ ಅಭ್ಯರ್ಥಿ ಸುನೀಲಗೌಡ ಪಾಟೀಲ ಮೊದಲ ಸುತ್ತಿನಲ್ಲಿಯೇ 3000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ, ಎರಡನೇ ಬಾರಿಗೆಆಯ್ಕೆಯಾಗಿದ್ದರು.  ಪ್ರಮಾಣ ವಚನ ಸ್ವೀಕರಿಸಿದ ನಂತರ ಸುನೀಲಗೌಡ ಪಾಟೀಲ ಸಭಾಪತಿ ಬಸವರಾಜ ಹೊರಟ್ಟಿ ಅವರ ಆಶೀರ್ವಾದ ಪಡೆದರು.

 

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್‍ ಸಮಿತಿ ಅಧ್ಯಕ್ಷ ಪ್ರೊ. ರಾಜು ಆಲಗೂರ, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‍ ಸಮಿತಿ ಅಧ್ಯಕ್ಷ ಎಸ್. ಜಿ. ನಂಜಯ್ಯನಮಠ, ಸುನೀಲಗೌಡ ಪಾಟೀಲ ಅವರ ಪತ್ನಿ ರೇಣುಕಾ, ಪುತ್ರಿ ಸಾನ್ವಿ, ಪುತ್ರ ಸಿದ್ದಂತಗೌಡ, ಮಾಜಿ ಸಚಿವ ಎಂ. ಬಿ. ಪಾಟೀಲ್‍ ಅವರ ಪುತ್ರ ಬಸನಗೌಡ ಎಂ. ಪಾಟೀಲ ಹಾಗೂ ಕುಟುಂಬದ ಸದಸ್ಯರು ಸೇರಿದಂತೆ, ಮುಖಂಡರಾದ ಸೋಮನಾಥ ಕಳ್ಳಿಮನಿ, ನಾಗರಾಜ ಹದ್ಲಿ, ಡಾ. ಗಂಗಾಧರ ಸಂಬಣ್ಣಿ, ಅಶೋಕ ಮನಗೂಳಿ, ಅಬ್ದುಲ ಹಮಿದ್ ಮುಶ್ರಿಫ್, ಸುರೇಶ ಘೊಣಸಗಿ, ಅರುಣ ಮಾಚಪ್ಪನವರ, ಕಾಂತಾ ನಾಯಕ, ಟಪಾಲ ಎಂಜಿನಿಯರ್, ಸಂಗಮೇಶ ಬಬಲೇಶ್ವರ, ಅಶೋಕ ಮನಗೂಳಿ ಸುಭಾಷ ಛಾಯಾಗೋಳ, ಕಾಂತಾ ನಾಯಕ ಸೇರಿದಂತೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಅಲ್ಲದೇ, ಪ್ರಮಾಮ ವಚನ ಕಾರ್ಯಕ್ರಮದ ನಂತರ ಶುಭಾಷಯ ಕೋರಿ ಶುಭ ಹಾರೈಸಿದರು.

Leave a Reply

ಹೊಸ ಪೋಸ್ಟ್‌