ಅಂಬೇಡ್ಕರ ಭಾವಚಿತ್ರವನ್ನು ಎಲ್ಲ ಕೋರ್ಟಗಳಲ್ಲಿ ಇರಿಸುವ ನಿರ್ಧಾರ ಸಂತಸದಾಯಕ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಅಗಷ್ಟ-15 ಸ್ವಾತಂತ್ರ್ಯ ದಿನ ಹಾಗೂ ನವೆಂಬರ 26 ರ ಸಂವಿಧಾನ ದಿನ ಹಾಗೂ ಜನೇವರಿ-26 ರ ಗಣರಾಜ್ಯೋತ್ಸವ ದಿನಗಳಂದು ಸಂವಿಧಾನ ಶಿಲ್ಪಿ ಡಾ: ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರವನ್ನು ಎಲ್ಲ ಕೋರ್ಟಗಳಲ್ಲಿ ಇರಿಸುವ ಹೈಕೋರ್ಟ ನಿರ್ಧಾರ ಸಂತಸ ತಂದಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ಈ ಕುರಿತು ಪ್ರತ್ರಿಕಾ ಪ್ರಕಟಣೆ ನೀಡಿರುವ ಅವರು, ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ನ್ಯಾಯ ಒದಗಿಸಿದಂತಾಗಿದೆ.  ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಪ್ರಧಾನ ಪೀಠದಲ್ಲಿ ನಡೆದ ಆಡಳಿತಾತ್ಮಕ ಫುಲಕೋರ್ಟ, ಸಭೆಯಲ್ಲಿ ಈ ಕುರಿತಂತೆ ನಿರ್ಣಯ ಕೈಗೊಂಡಿರುವದು ಖುಷಿ ವಿಚಾರವಾಗಿದೆ.  ಆದ್ದರಿಂದ ತಮಗೆಲ್ಲರಿಗೂ ಅನಂತ ಅನಂತ ಕೃತಜ್ಞತೆಗಳು ಎಂದು ರಮೇಶ ಜಿಗಜಿಣಗಿ ಅವರು ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌