ಕಾಂಗ್ರೆಸ್ ತುಕಡೆ ಗ್ಯಾಂಗ್ ಗಳ ಮೂಲಕ ಹಿಜಾಬ್, ಕೇಸರಿ ಶಾಲುಗಳಂಥ ವಿವಾಧ ಸೃಷ್ಠಿಸಿ ದೇಶದಲ್ಲಿ ಅಸ್ಥಿರತೆ ತರಲು ಪ್ರಯತ್ನಿಸುತ್ತಿದೆ- ಶಾಸಕ ಯತ್ನಾಳ ಆರೋಪ

ವಿಜಯಪುರ: ದೇಶದಲ್ಲಿ ಕಾಂಗ್ರೆಸ್ ಟುಕ್ಟೆ ಗ್ಯಾಂಗ್ ಗಳ ಮೂಲಕ ಹಿಜಾಬ್, ಕೇಸರಿ ಶಾಲ್ ನಂಥ ವಿವಾದಗಳನ್ನು ಸೃಷ್ಠಿಸಿ ದೇಶದಲ್ಲಿ ಅಸ್ಥಿರತೆ ಉಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಗಳ ಹಿಂದೆ ಕಾಂಗ್ರೆಸ್ಸಿದೆ.  ಈ ಮೂಲಕ ಕಾಂಗ್ರೆಸ್ಸಿನ ತುಕಡೆ ತುಕಡೆ ಗ್ಯಾಂಗ್ ಗಳು ದೇಶದಲ್ಲಿ ಅಸ್ಥಿರತೆ ತರಲು ಪ್ರಯತ್ನಸುತ್ತಿವೆ ಎಂದು ಆರೋಪಿಸಿದರು.

ದೇಶದಲ್ಲಿ ಅಶಾಂತಿ ಮೂಡಿಸಲು ಕಾಂಗ್ರೆಸ್ ನ ತುಕಡೆ ತುಕಡೆ ಗ್ಯಾಂಗ್ ಉದ್ದೇಶ ಹೊಂದಿವೆ.  ದೇಶದಲ್ಲಿ ಅಸ್ಥಿರತೆಯನ್ನಯ ತರಬೇಕೆಂದು ನಡೆದ ಪ್ರಕ್ರಿಯೆ ಇದಾಗಿದೆ.  ಇದು ರಾಜ್ಯದಲ್ಲಿ ಅವಶ್ಯಕತೆಯಿರಲಿಲ್ಲ.  ಶಿಕ್ಷಣ ಕಲಿಯುವವರು ಶಿಕ್ಷಣ ಕಲಿಯಲು ಹೋಗುತ್ತಾರೆ.  ಅವರಿಗೆ ಹಿಜಾಬ್ ಮತ್ತು ಕೇಸರಿ ಶಾಲು ಅವಶ್ಯಕತೆಯಿಲ್ಲ.  ಇದು ಉದ್ದೇಶಪೂರ್ವಕಾವಿ ನಡೆದಿದೆ,  ಇದರ ಹಿಂದೆ ಕಾಂಗ್ರೆಸ್ ಶಕ್ತಿಯಿದೆ.  ಇದರ ಜೊತೆಗೆ ದೇಶ ವಿರೋಧಿಗಳ ಸಂಘಟನೆಗಳ ಬೆಂಬಲವಿದೆ ಎಂದು ವಾಗ್ದಾಳಿ ನಡೆಸಿದರು.

ಹೈದರಾಬಾದಿನಿಂದ ಬಂದ ಒಂದು ತಂಡ ಉಡುಪಿಯಲ್ಲಿ ಸಭೆ ಮಾಡಿ ಹಿಜಾಬ್ ಹೋರಾಟಕ್ಕೆ ಬೆಂಬಲ ನೀಡಿದೆ.  ಸಿಎಎ, ರೈತ ಹೋರಾಟಗಳಲ್ಲಿಯೂ ಇದು ವ್ಯವಸ್ಥಿತಯವಾಗಿ ನಡೆದಿತ್ತು.  ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತ ನೋಡಲಾರದೇ ಮುಂದಿನ ಚುನಾವಣೆಯಲ್ಲಿ ದೇಶ ಒಡೆಯುವ ಕೆಲಸವನ್ನು ಈಗ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮುಸ್ಲಿಮರ ವಿರುದ್ದ ಹರಿಹಾಯ್ದ ಯತ್ನಾಳ

ಮುಸ್ಲಿಮರ ವಿರುದ್ಧ ಆಗಾಗ ಹರಿಹಾಯುತ್ತಿರುವ ಯತ್ನಾಳ ಈಗ ಮತ್ತೆ ವಾಗ್ದಾಳಿ ನಡೆಸಿದ್ದಾರೆ.  ಮುಸ್ಲಿಮರಿಗೆ ನಾವು ದೇಶ ಭಕ್ತಿಯನ್ನು ನಾವು ಕಲಿಸಲಿಲ್ಲ.  ಕಾಶ್ಮೀರಕ್ಕೆ 370 ಅಡಿ ವಿಶೇಷ ಸ್ಥಾನಮಾನ ನೀಡುವ ಮೂಲಕ ಈ ಹಿಂದೆ ಪ್ರಧಾನಿಯಾಗಿದ್ದ ಜವಾಹರಲಾಲ ನೆಹರು ದೊಡ್ಡ ತಪ್ಪು ಮಾಡಿದ್ದಾರೆ.  ಅಲ್ಪಸಸಂಖ್ಯಾತರ ಆಯೋಗ, ಇಲಾಖೆ, ವಕ್ಫ ಬೋರ್ಡ್, ಪ್ರತೇಕ ನಿಧಿ ನೀಡಿದ್ದು ತಪ್ಪು.  ಇದೆಲ್ಲ ನೀಡಿದ ಪರಿಣಾಮ ಅವರು ದೇಶದ ಸಂವಿಧಾನ ಒಪ್ಪುತ್ತಿಲ್ಲ.  ಸಂವಿಧಾನ ಒಪ್ಪಲ್ಲ ಎಂಬ ಕಾರಣ ಅವರಿಗೆ ದೇಶದಲ್ಲಿ ಇರಲು ನೈತಿಕತೆ ಇಲ್ಲ.  ಅಂಬೇಡ್ಕರ್ ಬರೆದ ಸಂವಿಧಾನವನ್ನು ಅಪಮಾನ ಮಾಡಿದವರಿಗೆ ದೇಶದಲ್ಲಿ ಇರೋ ಅವಶ್ಯಕತೆಯಿಲ್ಲ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

ನ್ಯಾಯಾಲಯಗಳೂ ಕೂಡ ಇಂಥ ಸೂಕ್ಷ್ಮ ವಿಚಾರಗಳ ಕುರಿತು ಶೀಘ್ರವಾಗಿ ತೀರ್ಪು ಪ್ರಕಟಿಸಬೇಕು.  ನ್ಯಾಯಾಲಯದ ಆದೇಶದಂತೆ ಎಲ್ಲರೂ ನಡೆಯಬೇಕು.  ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಅವರು, ಹೈಕೋರ್ಟ್ ತೀರ್ಪು ಬರುವವರೆಗೆ ಕಾಲೇಜುಗಳಿಗೆ ಒಂದು ವಾರ ರಜೆ ನೀಡಬೇಕು.  ಇಲ್ಲದಿದ್ದರೆ ಕೆಲವರು ಸಂಘರ್ಷ ನಡೆಸುವ ಉದ್ದೇಶ ಹೊಂದಿರುತ್ತಾರೆ.

ಭಾರತದಲ್ಲಿ ಮುಸ್ಲಿಮರು ಅತೀ ಸುರಕ್ಷಿತವಾಗಿದ್ದಾರೆ

ಜಗತ್ತಿನಲ್ಲಿ ಮುಸ್ಲಿಮರು ಅತೀ ಸುರಕ್ಷಿತವಾಗಿರುವುದು ಭಾರತದಲ್ಲಿ ಮಾತ್ರ.  ಆಸ್ಟ್ರೇಲಿಯಾ, ಜರ್ಮನ್, ಲಂಡನ್, ಅಮೇರಿಕ ಎಲ್ಲಿ ನೋಡಿದರೂ ಅವರು ಗದ್ದಲ ಎಬ್ಬಿಸುತ್ತಿದ್ದಾರೆ.  ಅವರು ಜಗತ್ತಿಗೆ ಭಾರವಾಗಿದ್ದಾರೆ.  ಯಾವ ದೇಶದಲ್ಲಿ ಶಾಂತಿಯುತವಾಗಿದ್ದಾರೆ? ಪಾಕಿಸ್ತಾನದಲ್ಲಿಯೂ ಸುರಕ್ಷಿತವಾಗಿಲ್ಲ.  ಇಂಥ ಸಂಸ್ಕೃತಿಯನ್ನು ಕಡೆಗಣಿಸಬೇಕಾದರೆ ಕಠಿಣ ಕಾನೂನು ತರಬೇಕು.  ಮುಂದಿನ ಲೋಕಸಭೆಯಲ್ಲಿ ಸಮಾನ ನಾಗರಿಕ ಸಂಹಿತೆ ತರಬೇಕು.  ಒಂದೇ ಮದುವೆ, ಎರಡೇ ಮಕ್ಕಳು ನೀತಿಯನ್ನು ಜಾರಿ ಮಾಡಬೇಕು.  ಈ ದೇಶದ ಕಾನೂನಿಗೆ ಗೌರವ ನೀಡಬೇಕು ಎಂಬ ಭಾವನೆ ಬರಬೇಕು.  ಸೈನಿಕರ ಮೇಲೆ ಕಲ್ಲು ತೂರಾಟ, ಉಡುಪಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಯಿತು.  ಹಿಂದಿನ ಮುಖ್ಯಮಂತ್ರಿ ಗೋಲಿಬಾರಿನಲ್ಲಿ ಸಾವಿಗೀಡಾದವರಿಗೆ ರೂ. 10 ಲಕ್ಷ ಪರಿಹಾರ ನೀಡಿದ್ದರು.  ಇದನ್ನು ನಾನು ವಿರೋಧಿಸಿದ್ದೆ ಎಂದು ಯತ್ನಾಳ ಹೇಳಿದರು.

ಕಠಿಣ ಕಾನೂನು ತಂದರೆ ಎಲ್ಲರೂ ಪಾಲನೇ ಮಾಡಲೇಬೇಕು.  ವಿದೇಶಗಳಲ್ಲಿ ಅಲ್ಲಿನ ಕಾನೂನು ಪಾಲಿಸದಿದ್ದರೆ ದೇಶ ಬಿಡು ಎಂದು ಅಲ್ಲಿನ ಪ್ರಧಾನಿ ಹೇಳಿದ್ದಾರೆ.  ಅದೇ ರೀತಿ ಇಲ್ಲಿನ ಕಾನೂನನ್ನು ಎಲ್ಲರೂ ಪಾಲಿಸಲೇಬೇಕು.  ಇರದಿದ್ದರೆ, ನಾವು ಶಾಂತಿಯಿಂದ ಇರಲು ಸಾಧ್ಯವಿಲ್ಲ.  ಹಿಂದೂ ಸಮಾಜ ಎಂದೂ ಯಾರ ಮೇಲೂ ಆಕ್ರಮಣ ಮಾಡಿಲ್ಲ.  ನಮ್ಮ ಮೇಲೆಯೇ ಆಕ್ರಮಣಗಳಾಗಿವೆ.  ಅಫಘಾನಿಸ್ತಾನ ಇತಿಹಾಸ ತೆಗೆದು ನೋಡಿದರೆ ನಾವೇ ಎಲ್ಲವನ್ನೂ ಕಳೆದುಕೊಂಡು ಬಂದಿದ್ದೇವೆ.  ಇನ್ನೋಂದು ಶೇ. 50 ಇವರು ಆಡಳಿತ ನಡೆಸಿದರೆ ಹಿಂದುಗಳು ಜೀವನ ನಡೆಸಲು ಸಾಧ್ವವಿಲ್ಲ ಎಂದು ಯತ್ನಾಳ ಎಚ್ಚರಿಕೆ ನೀಡಿದರು.

ಹಿಜಾಬ್, ಕೇಸರಿ ಶಾಲು ಮಧ್ಯೆ ನೀಲಿ ಶಾಲು ವಿಚಾರ

ಹಿಜಾಬ್ ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಬಳಸುವ ಮೂಲಕ ಪ್ರತಿಭಟನೆಗೆ ಇಳಿದಿರುವ ಮಧ್ಯೆಯೇ ಹಲವು ಯುವಕರು ನೀಲಿ ಶಾಲ್ ಉಪಯೋಗಿಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ಮತ್ತು ದಲಿತರಲ್ಲಿ ಭಿನ್ನಾಬಿಪ್ರಾಯ ಉಂಟು ಮಾಡಲು ಈ ಪ್ರಯತ್ನ ನಡೆದಿದೆ.  ಹಲವಾರು ನೋವುಗಳನ್ನು ಮರೆತು ದೇಶಕ್ಕೆ ಉತ್ತಮ ಸಂವಿಧಾನವನ್ನು ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್ ನೀಡಿದ್ದಾರೆ.  ಕೆಲವು ರೋಲ್ ಕಾಲ್ ಲೀಡರ್ ಗಳು ದಲಿತರಿಗೆ ಮತ್ತು ಹಿಂದೂ ಸಮಾಜಕ್ಕೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ಧಾರೆ.  ಕೆಲವು ಮುಸ್ಲೀಂ ನಾಯಕರು ಈ ಕೆಲಸ ಮಾಡುತ್ತಿದ್ದಾರೆ ಎಂದು ಯತ್ನಾಳ ಆರೋಪಿಸಿದರು.

Leave a Reply

ಹೊಸ ಪೋಸ್ಟ್‌