ಸೇವಾ ನಿವೃತ್ತಿ ಹೊಂದಿದ ಮಲ್ಲಿಕಾರ್ಜುನ ಹೊಂಬಳ ಅವರಿಗೆ ಸ್ನೇಹಿತರಿಂದ ಆತ್ಮೀಯ ಸನ್ಮಾನ

ವಿಜಯಪುರ: ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಸುಮಾರು 30 ವರ್ಷಗಳ ಕಾಲ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಲ್ಲಿಕಾರ್ಜುನ ಹೊಂಬಳ ಅವರಿಗೆ ಸ್ನೇಹಿತರಿಂದ ಆತ್ಮೀಯ ಸನ್ಮಾನ ಸಮಾರಂಭ ನಡೆಯಿತು.

 

ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೋಂಡ ನಾನಾ ಕ್ಷೇತ್ರಗಳ ಗಣ್ಯರು, ಮಲ್ಲಿಕಾರ್ಜುನ ಹೊಂಬಳ ಅವರ ವ್ಯಕ್ತಿತ್ವನ್ನು ಮುಕ್ತಕಂಠದಿಂದ ಕೊಂಡಾಡಿದರು.  ಡಾ. ಧರಿ, ವಿಜುಗೌಡ ಪಾಟೀಲ, ರಾಜಶೇಖರ ಗಚ್ಚಿನಮಠ, ಪ್ರಭುಗೌಡ ಬಿರಾದಾರ ಸೇರಿದಂತೆ ನಾನಾ ಮುಖಂಡರು ಮಾತನಾಡಿ ಮಲ್ಲಿಕಾರ್ಜುನ ಹೊಂಬಳ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹೊಂಬಳ ದಂಪತಿಯನ್ನು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ವಿಜುಗೌಡ ಪಾಟೀಲ, ಪ್ರಕಾಶ ಪಾಟೀಲ, ಸುರೇಶ ಪಾಟೀಲ, ಮಹಾನಂದ ಪಾಟೀಲ, ಡಾ. ಧರಿ, ಆನಂದ ಮಂಗಳವೇಡೆ, ಸಂಕೇತ ಬಗಲಿ, ಚಿದಾನಂದ ಹಿರೇಮಠ, ರಾಜಶೇಖರ ಗಚ್ಚಿನಮಠ ಸಾಯಿಪ್ರಕಾಶ, ಸುರೇಶ ಗಚ್ಚಿನಮಠ, ಸಿದ್ದು ಮಲ್ಲಿಕಾರ್ಜುನಮಠ, ನಟರಾಜ ಪಾಟೀಲ, ಮಲ್ಲಿಕಾರ್ಜುನ ಹೊಂಬಳ ಅವರ ಟೆನಿಕಾಯ್ಟ್ ಸಹಆಟಗಾರರು ಸೇರಿದಂತೆ ನೂರಾರು ಜನ ಸ್ನೇಹಿತರು ಆತ್ಮೀಯವಾಗಿ ಸನ್ಮಾನಿಸಿ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಕೋರಿದರು.

ಸ್ನೇಹಿತರೆಲ್ಲರ ಆತ್ಮೀಯ ಗೌರವ ಕಂಡು ಮಲ್ಲಿಕಾರ್ಜುನ ಹೊಂಬಳ ಮೂಕವಿಸ್ಮಿತರಾಗಿದ್ದು ಕಂಡು ಬಂತು.

Leave a Reply

ಹೊಸ ಪೋಸ್ಟ್‌