ಶಾಲೆಗಳು ಪುನಾರಂಭ ಹಿನ್ನೆಲೆ ವಿಜಯಪುರದಲ್ಲಿ ಡಿಸಿ, ಎಸ್ಪಿಯಿಂದ ಪರಿಶೀಲನೆ

ವಿಜಯಪುರ: ವಸ್ತ್ರ ಸಂಹಿತೆ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ್ತು ಸರಕಾರದ ಆದೇಶದ ಹಿನ್ನೆಲೆಯಲ್ಲಿ ಶಾಲೆಗಳು ಪುನಾರಂಭವಾಗಿವೆ.  ಈ ಹಿನ್ನೆಲೆಯಲ್ಲಿ   ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಎಸ್ಪಿ ಎಚ್. ಡಿ. ಆನಂದ ಕುಮಾರ ನಾಮನಾ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.   ವಿಜಯಪುರ ನಗರದಲ್ಲಿರುವ ನಾನಾ ಶಾಲೆಗಳಿಗೆ ಡಿಸಿ ಮತ್ತು ಎಸ್ಪಿ ಭೇಟಿ ನೀಡಿದರೆ, ತಾಲೂಕುಗಳಲ್ಲಿ ತಹಸೀಲ್ದಾರರು ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ವಿಜಯಪುರ ನಗರದಲ್ಲಿ ಪಿ. ಸುನೀಲ ಕುಮಾರ ಮತ್ತು ಎಚ್. […]

ಆನಂದ-ಸುಪ್ರೀಯಾ ಕಿ ವ್ಯಾಲೆಂಟೈನ್ ಪ್ರೇಮ್ ಹಕಾನಿ

ವಿಜಯಪುರ: ಈ ಜೋಡಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವಾಗಲೇ ಪರಸ್ಪರ ಪ್ರೀತಿ ಈಗ 22ನೇ ವರ್ಷದ ವ್ಯಾಲೆಂಟೈನ್ ಡೆ ಸಂಭ್ರಮಿಸುತ್ತಿದೆ.  ಒಬ್ಬರು ಬಸವ ನಾಡು ವಿಜಯಪುರ ಜಿಲ್ಲೆಯವರಾದರೆ ಮತ್ತೋಬ್ಬರು ವಿದ್ಯಾಕಾಶಿ ಧಾರವಾಡ ಜಿಲ್ಲೆಯವರು.  ಒಬ್ಬರ ತಂದೆ ಶಾಲೆಯ ಮುಖ್ಯ ಶಿಕ್ಷಕರಾದರೆ ಮತ್ತೋಬ್ಬರ ತಂದೆ ಪೊಲೀಸ್ ಅಧಿಕಾರಿಯಾಗಿದ್ದವರು.  2000 ನೇ ಇಸವಿಯಲ್ಲಿ ಆರಂಭವಾದ ಇವರ ಪ್ರೀತಿ 2005ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಜೀವನಕ್ಕೆ ಕಾಲಿಡುವಂತೆ ಮಾಡಿತು.  ಮದುವೆಯ ಸಂದರ್ಭದಲ್ಲಿ ಬೇಸರವಾದವರಿಗೂ ಈ ಜೋಡಿಯ ಮೇಲೆ ಪ್ರೀತಿ ಬರುವಂತೆ […]

ಅರುಣಾಶ್ವಿನಿ ಜೋಡಿಗೀಗ 28ನೇ ವ್ಯಾಲೆಂಟೈನ್ ಸಂಭ್ರಮ- ಬಸವತತ್ವ ಪಾಲನೆ ಇವರ ಯಶೋಗಾಥೆಗೆ ಕಾರಣ

ಮಹೇಶ ವಿ. ಶಟಗಾರ ವಿಜಯಪುರ: ವ್ಯಾಲೆಂಟೈನ್ ಡೆ ಪ್ರೇಮಿಗಳ ಪಾಲಿಗೆ ಸಂಭ್ರಮದ ದಿನ. ಈ ದಿನಕ್ಕಾಗಿ ಕಾಯುವ ಪ್ರೇಮಿಗಳಲ್ಲಿ ಪ್ರತಿ ವರ್ಷ ಹೊಸ ಹೊಸ ಜೋಡಿಗಳು ಪ್ರಣಯದ ಹಕ್ಕಿಗಳಾದರೆ, ಈಗಾಗಲೇ ಪ್ರೇಮ ವಿವಾಹವಾದ ದಂಪತಿ ವಿಶಿಷ್ಠ ರೀತಿಯಲ್ಲಿ ಸಂಭ್ರಮಿಸುತ್ತಾರೆ. ವ್ಯಾಲೆಂಟೈನ್ ಜೋಡಿಗಳಲ್ಲಿ ಹಲವಾರು ಜೋಡಿಗಳು ಜೀವನಪೂರ್ತಿ ಜೊತೆಯಾಗಿರದೇ ಬೇರ್ಪಟ್ಟಿರುವ ಉದಾಹರಣೆಗಳೂ ಹಲವಾರು. ಆದರೆ, ಅನೇಕ ಜೋಡಿಗಳು ಪ್ರಥಮ ವ್ಯಾಲೆಂಟೈನ್ ದಿನದಿಂದ ಹಿಡಿದು ಇಂದಿನವರೆಗೂ ಯಶಸ್ವಿ ಸಂಸಾರ ನಡೆಸುತ್ತಿದ್ದಾರೆ. ಮೊದಲ ಆಚರಣೆ ದಿನಗಿಂತಲೀ ಈಗ ಇನ್ನೂ ಹೆಚ್ಚೆಚ್ಚು ತಮ್ಮ […]

ಎಂ ಎಲ್ ಸಿ ಸುನೀಲಗೌಡ ಪಾಟೀಲ ಅವರಿಗೆ ಸನ್ಮಾನ

ವಿಜಯಪುರ: ವಿಧಾನ ಪರಿಷತ್ತಿಗೆ ಸತತ ಎರಡನೇ ಬಾರಿಗೆ ಆಯ್ಕೆಯಾದ ಎಂ ಎಲ್ ಸಿ ಸುನೀಲಗೌಡ ಪಾಟೀಲ ಅವರಿಗೆ ಬಿಜಾಪುರ ಗೌರಿ ಗಣೇಶ ಚಿಟಫಂಡ್ಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ವಿಜಯಪುರದಲ್ಲಿರುವ ಚಿಟಫಂಡ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಸಿಬ್ಬಂದಿ ಸುನೀಲಗೌಡ ಪಾಟೀಲ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಾ. ಮಹಾಂತೇಶ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ, ಅರುಣ ಮಾಚಪ್ಪನವರ, ಮಹಾಂತೇಶ ಜಾಲಗೇರಿ, ಜಗದೀಶ ಕೊಟ್ರಶೆಟ್ಟಿ, ವಾಸುದೇವ ಗಡದಾನಿ, ಸುಪ್ರಿಯಾ ಸಂಬಣ್ಣಿ, ಪುಂಡಲಿಕ ರಾಠೋಡ, ಶಿವಾನಂದ […]

ನಸುಕಿನ ಜಾವ ಮಬ್ಬುಗತ್ತಲಿನಲ್ಲಿ ಆಗಸದಲ್ಲಿ ಬೆಳಕು ಚೆಲ್ಲುತ್ತ ಸಂಚರಿಸಿ ಮರೆಯಾದ ವಸ್ತು- ಎಲ್ಲಿ ಗೊತ್ತಾ?

ವಿಜಯಪುರ: ನಸುಕಿನ ಜಾವ ಆಗಸದಲ್ಲಿ ಕಾಣಿಸಿದ ಬೆಂಕಿಯುಗುಳುತ್ತಿರುವ ವಸ್ತುವೊಂದು ಆತಂಕ ಮೂಡಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಬೆಳಗಿನ ಜಾವ ಯುವಕರಿಬ್ಬರು ತಮ್ಮ ಬೈಕಿನಲ್ಲಿ ತೆರಳುತ್ತಿದ್ದರು.  ಈ ಸಂದರ್ಭದಲ್ಲಿ ಬಾನಂಗಳದಲ್ಲಿ ಬೆಂಕಿಯುಗುಳುತ್ತ ವಿಚಿತ್ರ ವಸ್ತುವೊಂದು ಮುಂದೆ ಸಾಗಿದೆ.  ಈ ದೃಷ್ಯವನ್ನು ಮೊದಲು ನೋಡಿದ ಯುವಕ ಅವಾಕ್ಕಾಗಿದ್ದಾನೆ.  ಅರೇ, ಇದೇನಿದು ಆಕಾಶದಲ್ಲಿ ಏನೋ ಸಂಚಿಸುತ್ತಿದೆಯಲ್ಲ ಎಂದು ಗಾಬರಿ ಕೂಡ ಆಗಿದ್ದಾನೆ.  ಈ ವಿಷಯವನ್ನು ತನ್ನ ಜೊತೆಗಾರನಿಗೂ ತಿಳಿಸಿದ್ದಾನೆ.  ಆಗ ಆತನ ಸ್ನೇಹಿತನೂ ಕೂಡ ಅಚ್ಚರಿಗೊಂಡಿದ್ದಾನೆ.  ಅಲ್ಲದೇ, ಇದೇನಿದು ನಮ್ಮೂರಲ್ಲಿ […]