ಎಂ ಎಲ್ ಸಿ ಸುನೀಲಗೌಡ ಪಾಟೀಲ ಅವರಿಗೆ ಸನ್ಮಾನ

ವಿಜಯಪುರ: ವಿಧಾನ ಪರಿಷತ್ತಿಗೆ ಸತತ ಎರಡನೇ ಬಾರಿಗೆ ಆಯ್ಕೆಯಾದ ಎಂ ಎಲ್ ಸಿ ಸುನೀಲಗೌಡ ಪಾಟೀಲ ಅವರಿಗೆ ಬಿಜಾಪುರ ಗೌರಿ ಗಣೇಶ ಚಿಟಫಂಡ್ಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿಜಯಪುರದಲ್ಲಿರುವ ಚಿಟಫಂಡ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಸಿಬ್ಬಂದಿ ಸುನೀಲಗೌಡ ಪಾಟೀಲ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಡಾ. ಮಹಾಂತೇಶ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ, ಅರುಣ ಮಾಚಪ್ಪನವರ, ಮಹಾಂತೇಶ ಜಾಲಗೇರಿ, ಜಗದೀಶ ಕೊಟ್ರಶೆಟ್ಟಿ, ವಾಸುದೇವ ಗಡದಾನಿ, ಸುಪ್ರಿಯಾ ಸಂಬಣ್ಣಿ, ಪುಂಡಲಿಕ ರಾಠೋಡ, ಶಿವಾನಂದ ರಬಿನಾಳ, ನಾಗರಾಜ, ಸಂತೋಷ, ಮಹಾಂತೇಶ ಬೆಳಮಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌