ವಿಜಯಪುರ ನಗರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಅಬ್ದುಲ್ ಹಮೀದ್ ಮುಶ್ರಿಫ್ ಚಾಲನೆ

ವಿಜಯಪುರ: ವಿಜಯಪುರ ನಗರ ಮತಕ್ಷೇತ್ರದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಚಾನೆ ನೀಡಿದ್ದಾರೆ.

ವಿಜಯಪುರ ನಗರದ ವಾರ್ಡ್ ಸಂಖ್ಯೆ 14ರಲ್ಲಿ ನಡೆದ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಅವರು, ವಿಜಯಪುರ ನಗರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪಕ್ಷವನ್ನು ಬಲಪಡಿಸಲು ಶ್ರಮಿಸಬೇಕು ಎಂದು ಹೇಳಿದರು.

ಮಹಿಳೆಯರನ್ನು ಈ ಅಭಿಯಾನದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ.  ಬ್ಲಾಕ್ ಮಟ್ಟದಿಂದ ಹಿಡಿದು ವಿಧಾನಸಭೆ, ವಿಧಆನ ಪರಿಷತ್ ಹಾಗೂ ಸಂಸತ್ ಚುನಾವಣೆಗಳಲ್ಲೂ ಅವರಿಗೆ ಸ್ಥಾನ ಕಲ್ಪಿಸುವ ದೊಡ್ಡ ಕನಸು ಕಾಂಗ್ರೆಸ್ ನಾಯಕರದ್ದಾಗಿದೆ.  ಮಹಿಳಾ ಮತದಾರರ ಮನವೊಲಿಕೆ ಮಾಡಿ ಪಕ್ಷಕ್ಕೆ ಕರೆತರುವ ದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅವರು ಹೇಳಿದರು.

ಪಕ್ಷದಲ್ಲಿನ ನಿಮ್ಮ ಸ್ಥಾನಮಾನಗಳು ಈ ಅಭಿಯಾನದಲ್ಲಿ ನೀವೆಷ್ಟು ಸಕ್ರಿಯರಾಗಿರುತ್ತೀರಿ ಎಂಬುದರ ಮೇಲೆ ನಿರ್ಧಾರವಾಗಲಿದೆ.  ಉತ್ತಮವಾಗಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೆ ನಿರೀಕ್ಷಿತ ಸ್ಥಾನಗಳನ್ನು ನೀಡಲಾಗುವುದು.  ಹೀಗಾಗಿ ಈ ಅಭಿಯಾನವನ್ನು ಯಾರೂ ಕೂಡ ಹಗುರವಾಗಿ ಸ್ವೀಕರಿಸಬಾರದು.  ನವ ಭಾರತ ನಿರ್ಮಾಣಕ್ಕಾಗಿ ನಾವೆಲ್ಲಾ ಹೆಗಲು ಕೊಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ, ಕೆ, ಶಿವಕುಮಾರ ಹೇಳಿರುವ ಮಾತನ್ನು ಎಲ್ಲರೂ ಪಾಲಿಸಬೇಕು ಎೞದು ಅಬ್ದುಲ್ ಹಮೀದ ಮುಶ್ರಿಫ್ ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪುರ, ನಗರಸಭೆ ಮಾಜಿ ಸದಸ್ಯ ಶರಣಪ್ಪ ಎಕ್ಕುಂಡಿ, ಕಾಂಗ್ರೆಸ್ ಮುಖಂಡರಾದ ಆಬಿದ ಸಂಗಮ, ಖಾದರ ಖಾದೀಮ, ಮಂಜುಳಾ ಯಾದವ, ಲತೀಫ ಕಲಾದಗಿ, ಕಲ್ಲಪ್ಪ ಪಾರಶೆಟ್ಟಿ, ಹಸನ ಕಲಾದಗಿ, ಕಾಶಿಮ ಕಲಾದಗಿ, ಉಸ್ಮಾನ ಕಲಾದಗಿ, ಯಾಸೀನ ನಾಟಿಕರ, ಅಶೋಕ ಕಮತಗಿ, ಮೈಬೂಬ ಬಾಗವಾನ, ಕೈಯುಮ ಉಕ್ಕಲಿ, ಸ್ವಾಲೆಹಾ ಸಂಗಮ, ಅಕ್ಕಲಕೋಟ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌