ಸಚಿವ ಈಶ್ವರಪ್ಪ ರಾಜಿನಾಮೆಗೆ ಆಗ್ರಹಿಸಿ ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ವಿಜಯಪುರ: ಸಚಿವ ಕೆ. ಎಸ್. ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯಪುರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ನಗರದ ಡಾ. ಬಿ..ಆರ್. ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು. ಬಳಿಕ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಸಚಿವ ಈಶ್ವರಪ್ಪ ರಾಷ್ಟ್ರಧ್ವಜದ ಕುರಿತು ಮಾತನಾಡಿದ್ದು […]

ಮಾತು ಕೇಳಿಸದ ಸ್ವಪ್ನಾಳ ಬಾಳಿಗೆ ಬೆಳಕಾದ ವಿನಾಯಕ- ಮುಗ್ದಜೋಡಿಯ ದಾಂಪತ್ಯ ಜೀವನದ ಕನಸು ನನಸಾಗಿಸಿದ ಪೋಷಕರು

ಮಹೇಶ ವಿ. ಶಟಗಾರ ವಿಜಯಪುರ(Vijayapura): ಅಲ್ಲಿ ಸಂತಸದ ಕ್ಷಣಗಳು ಕಣ್ತುಂಬುವಂತಿದ್ದವು.  ಸ್ವಪ್ನಾ(Sapna) ಅಷ್ಟೇ ಅಲ್ಲ ವಿನಾಯಕ(Vinayak) ಅವರ ಪೋಷಕರ(Parents) ಕಣ್ಣುಗಳಲ್ಲೂ ಆನಂದಭಾಷ್ಪ(Happiness) ಸುರಿಯುತ್ತಿದ್ದವು.  ಈ ಘಟನೆಗೆ ಸಾಕ್ಷಿಯಾಗಿದ್ದು ಬಸವ ನಾಡು ವಿಜಯಪುರ. ಅಲ್ಲಿಗೆ ಬಂದಿದ್ದ ಅತಿಥಿಗಳೂ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದರು.  ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಖುದ್ದಾಗಿ ಇಡೀ ಕಾರ್ಯಕ್ರಮ ಮುಗಿಯುವ ವರೆಗೆ ಸ್ಥಳದಲ್ಲಿಯೇ ಇದ್ದು ಶುಭ ಹಾರೈಸಿದರು. ಇದು ಯುವತಿ ಸ್ವಪ್ನಾ ವಿನಾಯಕನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶುಭ ಘಳಿಗೆಯ […]

ಬತ್ತಿರುವ ಭೀಮಾನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಭೀಮಾತೀರದ ರೈತರ ಒತ್ತಾಯ

ಮಹೇಶ ವಿ. ಶಟಗಾರ ವಿಜಯಪುರ: ಒಣಗಿ ಹೋಗಿರುವ ಭೂಮಿ.  ಅಲ್ಲಲ್ಲಿ ಸೀಳಿದಂತೆ ಕಾಣುವ ಮಣ್ಣಿನ ದೃಶ್ಯಗಳು.  ಇವು ಯಾವುದೇ ಕೆರೆ ಅಥವಾ ಭಾವಿಯದಲ್ಲ.  ಇಲ್ಲಿಗೆ ಬಂದರೆ ಸಾಕು ಸಾಲು ಸಾಲಾಗಿ ಅಗೆಯಲಾಗಿರುವ ಕುಣಿಗಳು ಅಂದರೆ ಸಣ್ಣ ಸಣ್ಣ ಖಡ್ಡಾಗಳು ಕಾಣಿಸುತ್ತವೆ.  ಆ ಕುಣಿಗಳಲ್ಲಿ ಇಳಿಬಿಟ್ಟಿರುವ ಪೈಪುಗಳು, ಅವುಗಳ ಅಣತಿ ದೂರದಲ್ಲಿರುವ ಪಂಪಸೆಟ್ ಗಳು ಇಲ್ಲಿನ ಸಧ್ಯದ ಪರಿಸ್ಥಿತಿಯನ್ನು ತೆರೆದಿಡುತ್ತಿವೆ. ಮೇಲ್ಗಡೆ ಸೂರ್ಯನ ಪ್ರಖರ ಬಿಸಿಲು, ಕುಣಿಯ ಒಳಗೆ ಕಾಣುವ ಅಲ್ಪಸ್ವಲ್ಪ ನೀರು.  ಆ ನೀರನ್ನೇ ವಿದ್ಯುತ್ ಬಂದಾಗ […]