ಉಕ್ರೇನಿನಿಂದ ಬೆಂಗಳೂರಿಗೆ ಬಂದ ಬಸವ ನಾಡಿನ ವಿವಿಧಾ ಮಲ್ಲಿಕಾರ್ಜುನಮಠ

ಬೆಂಗಳೂರು: ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ್ದ ಬಸವ ನಾಡು ವಿಜಯಪುರದ ವಿದ್ಯಾರ್ಥಿನಿ ವಿವಿಧಾ ಮಲ್ಲಿಕಾರ್ಜುನಮಠ ಬೆಂಗಳೂರು ತಲುಪಿದ್ದಾರೆ.

ಯುದ್ಧ ಪೀಡಿತ ಪೂರ್ವ ಉಕ್ರೇನಿನ ಖಾರ್ಕಿವನಲ್ಲಿ ಬಂಕರ್ ನಲ್ಲಿ ರಕ್ಷಣೆ ಪಡೆದಿದ್ದ ವಿವಿಧಾ ಮಲ್ಲಿಕಾರ್ಜುನಮಠ ಪೊಲಂಡ ಮೂಲಕ ರವಿವಾರ ನವದೆಹಲಿಗೆ ಆಗಮಿಸಿದ್ದರು.

ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ ವಿವಿಧಾ ಮಲ್ಲಿಕಾರ್ಜುನಮಠ ಅವರನ್ನು ತಂದೆ ಅಲ್ಲನಪ್ರಭು ಮಲ್ಲಿಕಾರ್ಜುನಮಠ, ತಾಯಿ ಭುವನೇಶ್ವರಿ, ತಮ್ಮ ಜೈವಿಹಾನ, ಸೋದರ ಮಾವ ಬಸವರಾಜ ಮೇಲಿನಮಠ ಮುಂತಾದವರು ಸ್ವಾಗತಿಸಿ ಬರಮಾಡಿಕೊಂಡರು.

ಮಗಳ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮನದಿಂದ ತಾಯಿ ಭುವನೇಶ್ವರಿ ಮತ್ತು ತಂದೆ ಅಲ್ಲಮಪ್ರಭು ಮತ್ತೀತರರ ಮೊಗದಲ್ಲಿ ಮಂದಹಾಸ ಮೂಡಿತ್ತು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಮಠ ಕುಟುಂಬದ ಸ್ನೇಹಿತರಾದ ರಾಜಕುಮಾರ ಎಸ್. ಕುಮಾನಿ ಮತ್ತು ಸೋಮು ಸೂಳಿಬಾವಿ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದು, ವಿದ್ತಾರ್ಥಿನಿ ವಿವಿಧಾ ಮಲ್ಲಿಕಾರ್ಜುನಮಠಗೆ ಸ್ವಾಗತಿಸಿ ಶುಭ ಕೋರಿದರು.

ವಿವಿಧಾ ಮಲ್ಲಿಕಾರ್ಜುನಮಠ ಗೆ ಹಾರ ಹಾಕಿ ಸ್ವಾಗತಿಸಿ ಪೋಷಕರು ಸಂಭ್ರಮಿಸಿದರು.

Leave a Reply

ಹೊಸ ಪೋಸ್ಟ್‌