ಬೆಂಗಳೂರಿನಲ್ಲಿ ಮಹದೇವಪುರ ಅಬಕಾರಿ ಪೊಲೀಸರ ಧಾಳಿ- ರೂ. 2 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು: ಬೆಂಗಳೂರಿನ(Bengaluru) ಮಹದೇವಪುರ(Mahadevapura) ಅಬಕಾರಿ(Excise) ಇನ್ಸಪೆಕ್ಟರ್(Inspector) ಎ. ಎ. ಮುಜಾವರ ನೇತೃತ್ವದ ತಂಡ(Team) ಅಕ್ರಮವಾಗಿ ಮಾರಾಟಕ್ಕೆ ತರಲಾಗಿದ್ದ ರೂ. 2 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು(Drugs) ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಮಹದೇವಪುರ ಪೊಲೀಸರು ಆರೋಪಿಯನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ

ಅಬಕಾರಿ ಇಲಾಖೆ ಜಂಟಿ ಆಯುಕ್ತ ಜೆ. ಗಿರಿ ಮತ್ತು ಉಪ ಆಯುಕ್ತ ಬಸವರಾಜ ಸಂದಿಗವಾಡ ಮಾರ್ಗದರ್ಶನದಲ್ಲಿ ಈ ಧಾಳಿ ನಡೆದಿದೆ.  ವೈಟಫಿಲ್ಡ್  ಮುಖ್ಯ ರಸ್ತೆಯ ಕಾವೇರಿ ನಗರ ಹೆಬ್ಬಾಗಿಲಿನ ಬಳಿ ಈ ಧಾಳಿ ನಡೆದಿದೆ.  ಕೇರಳದ ಕೋಲಂ ಮೂಲದ ನೋಯಲ್ ಪ್ರಕಶ್ ಎಂಬಾತ ಮಾರಾಟಕ್ಕಾಗಿ 14.40 ಗ್ರಾಂ ಮೆಥಾಫೆಟಾಮೈನ್ ಕ್ರಿಸ್ಟಲ್ ಮೆಥ್(METHAMPHETAMINE CRYSTAL METH ಮತ್ತು 630 ಗ್ರಾಂ ಒಣಗಿದ ಗಾಂಜಾ ಹಾಗೂ ಸೈಕೋ ಟ್ರೋಫಿಕ್  ಸಬಸ್ಟನ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಎನ್ ಡಿ ಪಿ ಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಬಕಾರಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

 

Leave a Reply

ಹೊಸ ಪೋಸ್ಟ್‌