ಶಿವಣಗಿಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅಧ್ಯಕ್ಷತೆಯ ಶ್ರೀ ಸೌಹಾರ್ದ ಸಹಕಾರಿ ನಿಯಮಿತದ ನಾಲ್ಕನೇ ಶಾಖೆ ಆರಂಭ

ವಿಜಯಪುರ: ಮಾಜಿ ಸಚಿವ(Former Minister) ಅಪ್ಪು ಪಟ್ಟಣಶೆಟ್ಟಿ(Appu Pattanashetty) ಆಧ್ಯಕ್ಷರಾಗಿರುವ (Chairman) ವಿಜಯಪುರದ(Vijayaprua) ಶ್ರೀ ಸೌಹಾರ್ದ(Shree Souharda) ನಿಯಮಿತದ 4ನೇ ಶಾಖೆ ವಿಜಯಪುರ ತಾಲೂಕಿನ ಶಿವಣಗಿ(Shivanagi) ಗ್ರಾಮದಲ್ಲಿ ಆರಂಭವಾಗಿದೆ. 

ಈ ಶಾಖೆಯನ್ನು ಬಂಥನಾಳದ ಡಾ. ವೃಷಭಲಿಂಗೇಶ್ವರ ಶಿವಯೋಗಿಗಳು ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ಈ ಶಾಖೆಯಿಂದ ಕಷ್ಠದಲ್ಲಿರುವ ರೈತ, ಕೂಲಿ ಕಾರ್ಮಿಕರ ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂದು ಆಶೀರ್ವಚನ ನೀಡಿದರು.

ಮಾಜಿ ಸಚಿವ ಮತ್ತು ಬ್ಯಾಂಕಿನ ಅಧ್ಯಕ್ಷ ಅಪ್ಪಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಈ ಶಾಖೆಯ ಆರಂಭದಿಂದ ಯುವಕರಿಗೆ ಉದ್ಯೋಗ ಸಿಗಲಿದೆ.  ಅಲ್ಲದೇ, ಗ್ರಾಮದೊಂದಿಗೆ ತಾವು ಹಳೆಯ ಸಂಬಂಧ ಬೊಂದಿದ್ದು, ಜನಸಂಪರ್ಕ ಇರುವುದರಿಂದ ಇಲ್ಲಿನ ಜನರಿಗೆ ಅನುಕೂಲವಾಗಲು ಈ ಶಾಖೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕ ಶಂಕರಗೌಡ ಪಾಟೀಲ(ಯರನಾಳ) ಮಾತನಾಡಿ, ಈಗಾಗಲೇ ಕೆಲವು ಶಾಖೆಗಳು ಪ್ರಾರಂಭವಾಗಿ ಒಳ್ಳೆಯ ಕಾರ್ಯ ನಿರ್ವಹಿಸುತ್ತಿದ್ದು ಜನರ ಅಪೇಕ್ಷೆಯಂತೆ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಶಾಖೆUಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರಾದ ಮಡಿವಾಳಪ್ಪ(ಅಪ್ಪು) ಸಜ್ಜನ, ವೀರುಪಾಕ್ಷಿ ಹಣುಮಶೆಟ್ಟಿ, ಸಿದ್ದು ಮಲ್ಲಿಕಾರ್ಜುನಮಠ,  ರಮೇಶ ರೇಶ್ಮಿ, ಸಂತೋಷ ಜಾಧವ, ಅಮರ ನಾಗಠಾಣ, ವೈಜಿನಾಥ ಭೋಗಶೆಟ್ಟಿ, ಶಿವಾನಂದ ಬಿರಾದಾರ, ಶಿವಣಗಿ ಗ್ರಾಮದ ಹಿರಿಯರಾದ ಬಸವರಾಜ ಜೋಗೂರ, ಜಿ. ಎಸ್. ಹಂಚಿನಾಳ, ಬೀರಪ್ಪ ಮ್ಯಾಗೇರಿ, ಶಿವಪದ್ಮ ಕುಚನೂರ, ಯಲ್ಲಪ್ಪ ಪೂಜಾರಿ, ಚಿದಾನಂದ ಹಳ್ಳಿ, ಶಿವಯ್ಯ ಹಿರೇಮಠ, ರಾಜು ಬಿಜ್ಜರಗಿ, ಇಲಿಯಾಸ ಬಗಲಿ, ಬಾಲಚಂದ್ರ ರೆಡ್ಡಿ, ರಾಮಲಿಂಗ ರೆಡ್ಡಿ, ಬಸಗೋಂಡ ಕೋರಿ ಮತ್ತು ಹಡಗಲಿ ಕಗ್ಗೋಡ ಕುಮುಟಗಿ, ಹೊನ್ನುಟಗಿ, ಕವಲಗಿ, ಆಹೇರಿ, ಅಂಕಲಗಿ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌