ಬಸವ ನಾಡಿನಲ್ಲಿ ಕಂಪಿಸಿದ ಭೂಮಿ- ಜನರಲ್ಲಿ ತಳಮಳ

ವಿಜಯಪುರ: ಬಸವನ ನಾಡು(Basacanadu) ವಿಜಯಪುರ(Vijayapura) ಜಿಲ್ಲೆಯ(District) ಕೆಲವು ಭಾಗಗಳಲ್ಲಿ(Some Srea) ಭೂಮಿ ಕಂಪಿಸಿದ(Earthquake) ಅನುಭವವಾಗಿದೆ.

ಬೆ. 11:21ರ ಸುಮಾರಿಗೆ ವಿಜಯಪುರ ನಗರ, ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ನಾನಾ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆಯಲ್ಲಿದ್ದವರಿಗೂ ಇದು ಅನುಭವಕ್ಕೆ ಬಂದಿದೆ. ವಿಜಯಪುರ ಗ್ರಾಮೀಣ ಭಾಗದ ಜುಮನಾಳ, ಹೊನಗನಹಳ್ಳಿ ಮತ್ತಿತರ ಕಡೆಗಳಲ್ಲಿರುವ ಭೂಕಂಪದ ಅನುಭವವಾಗಿದ್ದು ಜನ ಹೊರಗಡೆ ಬಂದಿದ್ದಾರೆ. ಅಲ್ಲದೇ, ಅಕ್ಕಪಕ್ಕದವರ ಜೊತೆ ತಮ್ಮ‌ ಅನುಭವ ಹಂಚಿಕೊಂಡಿದ್ದಾರೆ.

ಆದರೆ, ಇದು ಭೂಕಂಪನ ಹೌದೋ ಅಥವಾ ಅಲ್ವೋ, ಮತ್ತೇನಾದರೂ ಕಾರಣವಿದೆಯಾ ಎಂಬುದನ್ನು ವಿಜಯಪುರ ಜಿಲ್ಲಾಡಳಿತ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.

Leave a Reply

ಹೊಸ ಪೋಸ್ಟ್‌