ಹಿರೆಬೇವನೂರು ಸಕ್ಕರೆ ಕಾರ್ಖಾನೆ ದಿವಾಳಿ- ಬಾಕಿ ಹಣ ಪಡೆಯಬೇಕಾದವರು ಬೆಳಗಾವಿ ಕಚೇರಿ ಸಂಪರ್ಕಿಸಲು ಸೂಚನೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಇಂಡಿ ತಾಲೂಕಿನ ಹಿರೆಬೇವನೂರ(Hirebevanur) ಜ್ಞಾನಯೋಗಿ(Jnanayogi) ಶ್ರೀ ಶಿವಕುಮಾರ ಸ್ವಾಮೀಜಿ(Shivakumar Swamiji) ಸಕ್ಕರೆ ಕಾರ್ಖಾನೆ(Sugar Factory) ದಿವಾಳಿಯಾಗಿದೆ(Bankruptcy) ಎಂದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಕಂಪನಿಯ ನ್ಯಾಯಾಧೀಕರಣ ಮಾ. 7 ರಂದು ಆದೇಶ ಹೊರಡಿಸಿದೆ.

File Photo: ಹಿರೆಬೇವನೂರು ಸಕ್ಕರೆ ಕಾರ್ಖಾನೆ

ಈ ಕುರಿತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಧ್ಯಮ ಪ್ರಕಟಣೆ ನೀಡಿದ್ದು, ಹಿರೇಬೇವನೂರು ಶ್ರೀ ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆಯಿಂದ ಬಾಕಿ ಹಣ ಪಡೆಯಬೇಕಿರುವ ರೈತರು, ವ್ಯಾಪಾರಸ್ಥರು, ಕಾರ್ಖಾನೆಯ ಕಾರ್ಮಿಕರು, ಸಾಲ ನೀಡಿದ ಬ್ಯಾಂಕಿನವರು ಹಾಗೂ ಕಬ್ಬು ಕಟಾವು ಸಾಗಾಣಿಕೆ ಗುತ್ತಿಗೆದಾರರು ಕೂಡಲೇ ತಮ್ಮ ಬಾಕಿ ಹಣ ಪಡೆಯಲು ಸೂಚನೆ ನೀಡಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ಹಣ ಬಾಕಿ ಪಡೆಯಬೇಕಾದವರು ಕೂಡಲೇ ಬೆಳಗಾವಿಯಲ್ಲಿರುವ ಪವಿತ್ರಾ ವ್ಯಾಸ (ಮೊಬೈಲ್ ನಂ 9739459525), ಇಂಟೆರಿಮ್ ರಿಸೊಲ್ಯೂಷನ್ ಪ್ರೋಫೆಷನಲ್ ಸಿಸಿಬಿ 52, 3 ನೇ ಮಹಡಿ, ಶಿವಾಜಿ ಗಾರ್ಡನ್ ಎದುರಿಗೆ, ಡಾ: ಎಸ್‌ಪಿಎಂ ರೋಡ್, ಖಡೇ ಬಾಝಾರ, ಶಹಾಪೂರ. ಬೆಳಗಾವಿ-590003 ಇವರಿಗೆ ಅಗತ್ಯ ದಾಖಲಾತಿಗಳನ್ನು ಒದಗಿಸಿ ನಿಯಮಾನುಸಾರ ಬಾಕಿ ಹಣ ಪಡೆದುಕೊಳ್ಳಬೇಕು ಎೞದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌