ಬಸವಣ್ಣನ ತವರಿನಲ್ಲಿ ರಾಜ್ಯಮಟ್ಟದ ಜಯಂತಿ ಆಚರಿಸಿ- ಸರಕಾರಕ್ಕೆ ಎಂ ಎಲ್ ಸಿ ಪ್ರಕಾಶ ರಾಠೋಡ ಒತ್ತಾಯ- ಸರಕಾರ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಭಕ್ತಿಭಂಡಾರಿ ಶ್ರೀ ಬಸವೇಶ್ವರ(Basaveshwar) ರಾಜ್ಯ ಮಟ್ಟದ(State Level) ಜಯಂತಿ(Jayatni) ಕಾರ್ಯಕ್ರಮವನ್ನು(Programme) ಅವರ ತವರು(Birth Place) ವಿಜಯಪುರದಲ್ಲಿ(Vijayapura) ಆಚರಿಸಬೇಕು ಎಂದು ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಸರಕಾರವನ್ನು ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಈ ಕುರಿತು ವಿಧಾನ ಪರಿಷತ್ತಿನಲ್ಲಿ ಶೂನ್ಯವೇಳೆಯಲ್ಲಿ ಪ್ರಕಾಶ ರಾಠೋಡ ಆಗ್ರಹಿಸಿದರು.  ಈ ಕುರಿತು ಪ್ರತಿಕ್ರಿಯೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ ಕುಮಾರ, ಅಣ್ಣ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ರಾಜ್ಯ ಮಟ್ಟದ ಅಣ್ಣ ಬಸವಣ್ಣನವರ ಜಯಂತೋತ್ಸವ ಆಚರಣೆಗೆ ಸರಕಾರ ಆಸಕ್ತಿ ಹೊಂದಿದೆ.  ಈ ಬಗ್ಗೆ  ಜಿಲ್ಲಾಡಳಿತ ಸಿದ್ದತೆ ಮಾಡಿ ಪ್ರಸ್ತಾವನೆ ಸಲ್ಲಿಸಿದರೆ ಪರಿಗಣಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ ಕುಮಾರ

ಜಗಜ್ಯೋತಿ  ಬಸವೇಶ್ವರರು ಸಾಮಾಜಿಕ ಪಿಡುಗು, ತಾರತಮ್ಯ ಹಾಗೂ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು.  ಮನುಕುಲದ ಒಳಿತಿಗಾಗಿ 1500ಕ್ಕೂ ಹೆಚ್ಚು ವಚನಗಳನ್ನು ನೀಡಿದ ಮಹಾನ್ ಮಾನವತಾವಾದಿ. ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್‌ ಅವರು ವಿಶ್ವಗುರು ಬಸವಣ್ಣನವರ ಭಾವಚಿತ್ರವುಳ್ಳ ರೂ. 5 ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ.  ಭಾರತದ ನಾಣ್ಯದ ಮೇಲೆ ಭಾವಚಿತ್ರ ಹೊಂದಿರುವ ಮೊದಲ ಕನ್ನಡಿಗ ಬಸವಣ್ಣನವರು.  ಅಲ್ಲದೇ, 2003 ರಲ್ಲಿ ದೆಹಲಿಯ ಪಾರ್ಲಿಮೆಂಟಿನಲ್ಲಿ ಬಸವಣ್ಣನವರ ಅಶ್ವಾರೂಢ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.  ಕೇಂದ್ರ ಅಂಚೆ ಇಲಾಖೆ 1967 ರಲ್ಲಿ 15 ಪೈಸೆ ಮತ್ತು 1997 ರಲ್ಲಿ ರೂ. 2 ಮುಖಬೆಲೆಯ ಅಂಚೆ ಚೀಟಿಯನ್ನು ಮುದ್ರಿಸಿದೆ.  ಎಸ್. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಸರಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕು ಎಂದು ಆದೇಶ ಹೊರಡಿಸಿದ್ದಾರೆ ಎಂದು ಪ್ರಕಾಶ ರಾಠೋಡ ಹೇಳಿದರು.

ಜಗತ್ತಿಗೆ ಪ್ರಥಮ ಪಾರ್ಲಿಮೆಂಟ್ ರೂಪಿಸಿ, ಏಕತೆ, ಮಾನವೀಯತೆ, ಸಮಾನತೆಯ ತತ್ವಗಳನ್ನು ಸಾರಿದ ಮಹಾನ್ ಚೇತನ ಬಸವಣ್ಣನ ಜನ್ಮಸ್ಥಳದಲ್ಲಿ ಜಯಂತಿ ಆಚರಣೆಯಾದರೆ ಅರ್ಥಪೂರ್ಣವಾಗಲಿದೆ.  ಈ ಭಾಗದ ಜನತೆಯ ಹಲವಾರು ವರ್ಷಗಳ ಬೇಡಿಕೆಗಳಿಗೆ ಸರಕಾರ ಸ್ಪಂದಿಸಬೇಕು.  ಬಸವಣ್ಣ ಸಾಮಾಜಿಕ ಪರಿವರ್ತನೆಯ ಹರಿಕಾರ, ಉದಾತ್ತ ತತ್ವಗಳನ್ನು ಸುರಿದ ಅವರ ಬದುಕೇ ಬಂದು ಸಮಾನತೆಯ ದಿವ್ಯ ಸಂದೇಶ.  ಈ ಅಣ್ಣ ಬಸವಣ್ಣನವರ ವಿಚಾರಗಳು ಜಾಗತಿಕವಾಗಿ ಇನ್ನೂ ಪ್ರಚಾರವಾಗಬೇಕಿದೆ.  ಅದಕ್ಕೆ ಪೂರಕವಾಗಿ ಅರ್ಥಪೂರ್ಣವಾಗಿ ಜಯಂತೋತ್ಸವವನ್ನು ಆಚರಿಸಬೇಕು.  ಅವರ ವಚನ, ತತ್ರಗಳ ಕುರಿತು ಚಿಂತನ, ಮಂಥನ ನಡೆಯಬೇಕು. ಕಾಯಕ, ದಾಸೋಹ, ಪ್ರಜಾಪ್ರಭುತ್ವ, ಪರಿಕಲ್ಪನೆ ಹೀಗೆ ಅಣ್ಣ ಬಸವಣ್ಣ ಅವರ ಕೊಡುಗೆಯನ್ನು ಸಾರುವ ಕೆಲಸ ನಿರಂತರವಾಗಿ ನಡೆಯಬೇಕು.  ಕನಸಾಗಿರುವ ಬಸವೇಶ್ವರ ಜಯಂತೋತ್ಸವವನ್ನು ಬಸವನ ಬಾಗೇವಾಡಿಯಲ್ಲಿಯೇ ನಡೆಸಬೇಕು ಎಂಬ ವಿಚಾರವನ್ನು ನಾನು ಬಸವನ ಬಾಗೇವಾಡಿ ತಾಲೂಕಿನ ಮಗನಾಗಿ ಪ್ರಸ್ತಾಪಿಸುತ್ತಿರುವುದಾಗಿ ಪ್ರಕಾಶ ರಾಠೋಡ ತಿಳಿಸಿದರು.

Leave a Reply

ಹೊಸ ಪೋಸ್ಟ್‌