ಯುದ್ಧ ಪೀಡಿತ ಉಕ್ರೇನಿನಿಂದ ವಾಪಸ್ಸಾದ ಬಸವ ನಾಡಿನ ಮೆಡಿಕಲ್ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಿದ ಎಂ. ಬಿ. ಪಾಟೀಲ

ವಿಜಯಪುರ: ಮಾಜಿ ಸಚಿವ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ. ಬಿ. ಪಾಟೀಲ(M B Patil) ಇತ್ತೀಚೆಗಷ್ಟೇ ಇಬ್ಬರು ಎಂಬಿಬಿಎಸ್ ಮತ್ತು ಓರ್ವ ಬಿಎಎಂಎಸ್ ವಿದ್ಯಾರ್ಥಿಗಳು(MBBS Students) ಪ್ರವೇಶ ಮತ್ತು ಕೋರ್ಸಿನ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ನೆರವಿನ ಸಹಾಯ ಹಸ್ತ ಚಾಚಿದ್ದರು.  ಈಗ ಇದೇ ಎಂ. ಬಿ. ಪಾಟೀಲ ಮತ್ತೋಂದು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.  ಯುದ್ಧ ಪೀಡಿತ(War Hit) ಉಕ್ರೇನಿನಿಂದ ಮರಳಿರುವ(Ukraine Returned) ವಿಜಯಪುರ ಜಿಲ್ಲೆಯ 16 ಜನ ವೈದ್ಯಕೀಯ ವಿದ್ಯಾರ್ಥಿಗಳಿಗೆ(Medical Students) ನೆರವಿಗೆ ಮುಂದಾಗುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕ ದೂರ ಮಾಡಿದ್ದು, ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಯುದ್ಧಪೀಡಿತ ಉಕ್ರೇನಿನಿಂದ ಸುರಕ್ಷಿತವಾಗಿ ಬಂದಿರುವ ವಿಜಯಪುರದ 17 ಜನ ವೈದ್ಯ ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿಂದ ತಮ್ಮ ಮುಂದಿನ ಶಿಕ್ಷಣದ ಕುರಿತು ಚಿಂತಾಕ್ರಾಂತರಾಗಿದ್ದರು.  ಕೇಂದ್ರ ಮತ್ತು ರಾಜ್ಯ ಸರಕಾರಗಳೂ ಕೂಡ ಈವರೆಗೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಆಂತಕದಲ್ಲಿದ್ದರು.  ಆದರೆ, ಈ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕವನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ನೆರವಿನ ಹಸ್ತ ಚಾಚುವ ಮೂಲಕ ಸಧ್ಯಕ್ಕೆ ದೂರ ಮಾಡಿದ್ದಾರೆ.

ವಿಜಯಪುರದಲ್ಲಿ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಮಾಡಿದ ಪೋಷಕರು

ಈ ಕುರಿತು ಟ್ವೀಟ್ ಮಾಡಿರುವ ಎಂ. ಬಿ. ಪಾಟೀಲ ವಿಜಯಪುರದ ಕೆಲವು ವಿದ್ಯಾರ್ಥಿಗಳು ಯುಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಕಲಿಯಲು ತೆರಳಿದ್ದರು. ಯುದ್ಧದ ಕಾರಣ ವಿಜಯಪುರಕ್ಕೆ ಹಿಂತಿರುಗಬೇಕಾಯಿತು. ಶೈಕ್ಷಣಿಕವಾಗಿ ಅತಂತ್ರವಾಗಿರುವ ಈ ವಿದ್ಯಾರ್ಥಿಗಳಲ್ಲಿ ಹಲವರು ಹಾಗೂ ಅವರ ಪೋಷಕರು ಇಂದು ನನ್ನನ್ನು ಭೇಟಿ ಮಾಡಿ ಮುಂದಿನ ಶಿಕ್ಷಣಕ್ಕೆ ನೆರವಾಗಬೇಕೆಂದು ಮನವಿ ಮಾಡಿದರು.

ಬಿ ಎಲ್ ಡಿ ಇ ಕಾಲೇಜಿನ ಗ್ರಂಥಾಲಯ ಮತ್ತು ಅಗತ್ಯ ತರಗತಿಗಳಿಗೆ ಹಾಜರಾಗಲು ಅನುಕೂಲ ಮಾಡಿಕೊಡುವ ಭರವಸೆಯನ್ನು ನೀಡಿರುವೆ. ಜೊತೆಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯದ ಪ್ರಮಾಣ ಪತ್ರ ಹಾಗೂ ಇನ್ನಿತರೆ ಸಮಸ್ಯೆಗಳ ಕುರಿತು ಕೇಂದ್ರ-ರಾಜ್ಯ ಸರ್ಕಾರದ ಗಮನಕ್ಕೆ ತರುವಂತೆ ಸಲಹೆ ನೀಡಿರುವೆ ಎಂದು ಟ್ವೀಟ್ ನಲ್ಲಿ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಟ್ವೀಟ್

https://twitter.com/MBPatil/status/1511695001956515842?t=lNacH8L0tI2Stoj9QMhS8A&s=08

 

ಉಕ್ರೇನಿಂದ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿ ಬಹುತೇಕ ಒಂದು ತಿಂಗಳು ಕಳೆದಿದ್ದರೂ ಆನಲೈನ್ ಕ್ಲಾಸ್ ಗೆ ಕೂಡ ಹಾಜರಾಗಲು ಸಾಧ್ಯವಾಗದೇ ತೊಂದರೆಯಲ್ಲಿದ್ದರು.  ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ವಿಜಯಪುರದಲ್ಲಿರುವ ವಿಷಯ ತಿಳಿದ ಈ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.  ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಎಲ್ಲರ ಅಹವಾಲನ್ನು ಸಮಚಿತ್ತದಿಂದ ಆಲಿಸಿದ ಎಂ. ಬಿ. ಪಾಟೀಲ, ಪೋಷಕರ ಆತಂಕವನ್ನು ದೂರ ಮಾಡಿದ್ದಾರೆ.

ಪೋಷಕರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಿದ ಎಂ. ಬಿ. ಪಾಟೀಲ ಅವರು, ನೀವೆಲ್ಲ ನಮ್ಮವರು.  ನಿಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು.  ಅಲ್ಲದೇ, ಸಧ್ಯಕ್ಕೆ ತಾವೇ ಅಧ್ಯಕ್ಷರಾಗಿರುವ ಬಿ ಎಲ್ ಡಿ ಇ ಸಂಸ್ಥೆಯ ವೈದ್ಯಕೀಯ ಕಾಲೇಜಿನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಗ್ರಂಥಾಲಯ ಮತ್ತು ಅಗತ್ಯ ತರಗತಿಗಳಿಗೆ ಹಾಜರಾಗಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.  ಅಷ್ಟೇ ಅಲ್ಲ, ಈ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾಗಿರುವ ಪ್ರಮಾಣ ಪತ್ರ ಮತ್ತು ಇನ್ನಿತರ ತಾಂತ್ರಿಕ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರಗಳ ಗಮನಕ್ಕೆ ತರುವಂತೆ ಸಲಹೆ ನೀಡಿದರು.

ಅಷ್ಟೇ ಅಲ್ಲ, ಪೋಷಕರ ಸಮ್ಮುಖದಲ್ಲಿಯೇ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಪ್ರಾಚಾರ್ಯರಿಗೆ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಸೌಲಭ್ಯ ಒದಗಿಸಿ ಎಂ ಬಿ ಬಿ ಎಸ್ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಸೂಚನೆ ನೀಡಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿ ಅಮನ ಮಮದಾಪುರ ತಂದೆ ಧರ್ಮರಾಯ ಮಮದಾಪುರ ಎಂ. ಬಿ. ಪಾಟೀಲ ಅವರು ನಮಗೆಲ್ಲ ಈ ಸಂಕಷ್ಟದ ಸಮಯದಲ್ಲಿ ಆಪದ್ಭಾಂಧವರಾಗಿದ್ದಾರೆ.  ನಮ್ಮ ಮಕ್ಕಳು ಡಾಕ್ಟರ್ ಆಗಬೇಕೆಂಬ ಕನಸಿಗೆ ಉಂಟಾಗಿದ್ದ ಅಡ್ಡಿಯನ್ನು ಸಧ್ಯಕ್ಕೆ ನಿವಾರಿಸಿದ್ದಾರೆ.  ಎಲ್ಲ ಪೋಷಕರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ನಮ್ಮ ಮಕ್ಕಳ ಎಂ ಬಿ ಬಿ ಎಸ್ ಕೋರ್ಸಿನ ಬಗ್ಗೆ ಇತರ ತಾಂತ್ರಿಕ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡುತ್ತೇವೆ.  ಎಂ. ಬಿ. ಪಾಟೀಲ ಅವರ ಸಹಾಯ ನಮ್ಮ ಮಕ್ಕಳ ಭವಿಷ್ಯಕ್ಕೆ ಬೆಳಕಾಗುವಂತೆ ಮಾಡಿದೆ.  ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಕ್ರೇನಿನಿಂದ ಮರಳಿರುವ ಒಟ್ಟು 17 ಜನ ವಿದ್ಯಾರ್ಥಿಗಳಲ್ಲಿ 14 ಜನ ವಿದ್ಯಾರ್ಥಿಗಳಾದ ಅಮನ ಮಮದಾಪುರ, ರೋಹನ ಪಾಟೀಲ, ವೈಭವಿ ದಯಾನಂದ ಕರ್ಣೆ. ಸಿದ್ಧು ಪೂಜಾರಿ, ಹರ್ಷ ನ್ಯಾಮಗೊಂಡ, ಕಾರ್ತಿಕ ವಸ್ತ್ರದ, ಸೃಷ್ಠಿ ನಾಯಿಕ, ಕಾರ್ತಿಕ ಇಟ್ಟಂಗಿಹಾಳ, ಜಯಕಾರ್ತಿಕಾ ಬಿ. ಅವಟಿ, ಸುಚಿತ್ರಾ ಕವಡಿಮಟ್ಟಿ, ಪ್ರೀತಿ ನಾಡಗೌಡ, ಪೂಜಾ ರಮೇಶ ಲೋಣಿ ಶ್ರದ್ಧಾ ನಾಯಕರ ಮತ್ತು ಪೋಷಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌