ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು- ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ ನಲಪಾಡ

ವಿಜಯಪುರ: ಯುವ(Youth) ಕಾಂಗ್ರೆಸ್(Congress) ರಾಜ್ಯಾಧ್ಯಕ್ಷ(State President) ಮೊಹಮ್ಮದ ನಲಪಾಡ(Mohammad Nalapad) ಕೇಂದ್ರ ಮತ್ತು ರಾಜ್ಯ ಸರಕಾರಗಳ(Union and State Governments) ವಿರುದ್ಧ ಹರಿ ಹಾಯ್ದಿದ್ದಾರೆ. 

ವಿಜಯಪುರದಲ್ಲಿ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳಿದ ಮೊಹಮ್ಮದ ನಲಪಾಡ ದೇವರ ದರ್ಶನ ಪಡೆದರು

ಗುಮ್ಮಟ ನಗರಿ ವಿಜಯಪುರದಲ್ಲಿ ಗ್ರಾಮ ದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ
ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಯುವಕನ ಕೊಲೆಯ ವಿಚಾರ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು.  ಮುಖ್ಯಮಂತ್ರಿ ಮತ್ತು ಅರಗ ಜ್ಞಾನೇಂದ್ರ ಅವರು ಅರ್ಧ ಜ್ಞಾನ ಇರೋರು.  ಇದು ತುಂಬಾ ದೊಡ್ಡ ತಪ್ಪು.  ಇಡೀ ಜ್ಞಾನ ಇದ್ದಿದ್ದರೆ ಅವರು ಅಂಥ ಮಾತು ಹೇಳುತ್ತಿರಲಿಲ್ಲ.  ಜ್ಞಾನಾನೇ ಇಲ್ಲದಿದ್ದರೆ ಪರವಾಗಿರಲಿಲ್ಲ.  ಅವರ ಹತ್ತಿರ ಅರ್ಧ ಜ್ಞಾನ ಇದೆ ಎಂದು ಹರಿ ಹಾಯ್ದರು.

ಹಿಜಾಬ್, ಜಲಾಲ್ ವಿಷಯಗಳು ಚರ್ಚೆಯಲ್ಲಿರುವ ಈ ಸಂದರ್ಭದಲ್ಲಿ ಇಂಥ ಹೇಳಿಕೆ ನೀಡಿದ್ದು ಬೇಜವಾಬ್ದಾರಿಯಿಂದ ಕೂಡಿದೆ.  ಹೋಂ ಮಿನಿಸ್ಟರ್ ಆಗಿರಲು ಅವರಿಗೆ ನೈತಿಕತೆಯಿಲ್ಲ.  ಅವರು ರಾಜೀನಾಮೆ ನೀಡಬೇಕು.  ಗೃಹ ಸಚಿವರ ವಿರುದ್ಧ ದೂರು ನೀಡಿದ್ದರೂ ಇನ್ನೂ ದಾಖಲಿಸಿಕೊಂಡಿಲ್ಲ.  ಕೋರ್ಟ್ ಮುಖಾಂತರ ದೂರು ದಾಖಲಿಸುತ್ತೇವೆ.  ಸಚಿವರ ವಿರುದ್ಧ ಎಫ್ ಐ ಆರ್ ದಾಖಲು ಆಗಲೇಬೇಕು.  ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಮೊಹಮ್ಮದ ನಲಪಾಡ ತಿಳಿಸಿದರು.

ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟಿಲ್ಲ.  ನಾಯಕರ ಮಧ್ಯೆ ಸಿಎಂ ಕುರ್ಚಿಗಾಗಿ ಕಚ್ಚಾಟವಿದೆ ಎಂಬುದಕ್ಕೆ ಉತ್ತರಿಸಿದ ಅವರು, ನಾನು ಯುವ ಕಾಂಗ್ರೆಸ್ ಆಧ್ಯಕ್ಷ,  ಪ್ಲ್ಯಾಗ್ ಕಟ್ಟೋದು, ಪಕ್ಷ ಕಟ್ಟೋದು ನನ್ನ ಕೆಲಸ.  ಪ್ಲ್ಯಾಗ್ ಬಗ್ಗೆ ಪಕ್ಷದ ಬಗ್ಗೆ ಜನರ ಬಗ್ಗೆ ಗೊತ್ತು,  ದೊಡ್ಡ ಲೀಡರ್ಸ್ ಬಗ್ಗೆ ಗೊತ್ತಿಲ್ಲ ಎಂದು ಮಾರ್ಮಿಮಕವಾಗಿ ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಹರಿಹಾಯ್ದ ಅವರು, ಜನ ಸಾಮಾನ್ಯರ ಪಾಕೆಟ್ ನಿಂದ ಹಣ ಹೊಡೆದು ಖಾಸಗಿ ಕಂಪನಿಗಳಿಗೆ ಕೇಂದ್ರ ಸರಕಾರ ಕೊಡುತ್ತಿದೆ.  ಇದನ್ನು ಖಂಡಿಸಲು ರಾಜ್ಯದ ಯುವಕರು ಒಂದಾಗಬೇಕು ಎಂದು ಹೇಳಿದರು.

ಬೆಲೆ ಏರಿಕೆ ವಿರುದ್ಧ ಜಿಲ್ಲಾ ಕೇಂದ್ರದಿಂದ ಹಿಡಿದು ಬ್ಲಾಕ್ ಮಟ್ಟದವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ ಅವರು, ಒಂದು ಧರ್ಮದವರ ಜೊತೆ ವ್ಯವಹಾರ ನಡೆಸಬಾರದು ಎಂದು ಆರಂಭವಾಗಿರುವ ಅಭಿಯಾನದ ಕುರಿತು ಪ್ರತಿಕ್ರಿಯೆ ನೀಡಿದರು.  ನಾನೋಬ್ಬ ಮುಸಲ್ಮಾನನಾಗಿ ಮೊದಲು ದೇವಸ್ಥಾನಕ್ಕೆ ಬಂದಿದ್ದೇನೆ.  ನಾವೆಲ್ಲ ಭಾರತೀಯರು.  ನಾವೆಲ್ಲ ಒಂದು.  ನಾವೆಲ್ಲ ಜೊತೆಗಿರಬೇಕು.  ಕುರಾನ್, ಬೈಬಲ್, ಭಗವದ್ಗೀತೆ, ನಮ್ಮ ಸಂವಿಧಾನ.  ಬೆಲೆಯೇರಿಕೆ ವೈಫಲ್ಯ ಮುಚ್ಚಲು ಬಿಜೆಪಿ ಕೋಮುವಾದ ಹರಡುತ್ತಿದೆ.  ಆದರೆ, ಬಿಜೆಪಿಯವರ ಕೋಮುವಾದ ಯಶಸ್ವಿಯಾಗಲ್ಲ ಎಂದು ಹೇಳಿದರು.

ಬಳಿಕ ಮೊಹಮ್ಮದ ನಲಪಾಡ ಅವರು, ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೆಲೆ ಏರಿಕೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌