ಈ ಸಲ ಪಠ್ಯಕ್ರಮ ಸ್ವಲ್ಪ ಮಾಡಿಫೈ ಮಾಡುತ್ತೇವೆ- ಬದಲಾಯಿಸಲ್ಲ ಎಂದ ಶಿಕ್ಷಣ ಸಚಿವ ಬಿ. ಸಿ. ನಾಗೇಶ

ವಿಜಯಪುರ: ಈ ಬಾರಿ ಪಠ್ಯಕ್ರಮದಲ್ಲಿ(Syllabus) ಸ್ವಲ್ಪ ಮಾಡಿಫೈ(Modify) ಮಾಡುತ್ತೇವೆ.  ಬದಲಾವಣೆ ಮಾಡಲ್ಲ(No Change) ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ. ಸಿ. ನಾಗೇಶ(Educaiton Minister B C Nagesh) ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣವನ್ನು ಹೆಚ್ಚಿಸಬೇಕು ಎಂಬ ವಿಚಾರ ಇದೆ.  ಈ ಹಿಂದೆ ಶಾಲೆಗಳಲ್ಲಿ ನೈತಿಕ ಶಿಕ್ಷಣದ ತರಗತಿಗಳು ನಡೆಯುತ್ತಿದ್ದವು.  ರಾಮಾಯಣ, ಮಹಾಭಾರತ, ಮಹಾತ್ಮಾ ಗಾಂಧಿ ಅವರ ಬಗ್ಗೆ ಪಾಠಗಳನ್ನು ಹೇಳಿಕೊಡಲಾಗುತ್ತಿತ್ತು.  ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಸೇರಿಬೇಕು ಅಥವಾ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.  ಈಗಾಗಲೇ ಇದು ಬೇಕು ಎಂದ ಜನ ನಿರ್ಧರಿಸಿದ್ದಾರೆ.  ಒತ್ತಡದ ಬದುಕಿನಲ್ಲಿ ಭಗವದ್ಗೀತೆಯನ್ನು ಯಾವ ರೀತಿ ನೈತಿಕ ಶಿಕ್ಷಣದಲ್ಲಿ ಸೇರಿಬೇಕು? ಅದರಲ್ಲಿ ಏನಿರಬೇಕು ಎಂಬುದನ್ನು ತಜ್ಞರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.

ಅಬ್ದುಲ ಕಲಾಂ ಕೂಡ ಭಗವದ್ಗೀತೆ ಶಕ್ತಿ ತುಂಬಿದೆ ಎಂದು ಹೇಳಿದ್ದಾರೆ.  ಮಹಾತ್ಮಾ ಗಾಂಧಿ ಕೂಡ ಭಗವದ್ಗಿತೆನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.  ಭಗವದ್ಗೀತೆ ಅಷ್ಟೇ, ಬೇರೆ ವಿಚಾರಗಳನ್ನೂ ಸೇರಸಲಾಗುವುದು.  ಭಗವದ್ಗೀತೆ ಧಾರ್ಮಿಕ ವಿಚಾರನೇ ಅಲ್ಲ.  ಮಕ್ಕಳನ್ನು ಆಚೆ ಇಡುವ ಪ್ರಯತ್ನ ಮಾಡಬಾರದು.  ಇದರಲ್ಲಿ ಯಾವುದೇ ಪೂಜೆ ವಿಧಾನವಿಲ್ಲ.  ದೇವರನ್ನು ಹೇಳುವ ಇಲ್ಲ.  ಭಗವದ್ಗೀತೆಯ ಸಾರವನ್ನು ಈಗ ಎಲ್ಲರ ಮನೆಯಲ್ಲಿಯೂ ಹಾಕಿರುತ್ತಾರೆ.  ಅನೇಕ ಮುಸ್ಲಿಮರ ಮನೆಯಲ್ಲಿಯೂ ಹಾಕಿದ್ದಾರೆ.  ಜೀವನಕ್ಕೆ ಬೇಕಾದ ಸಾರ ಅದರಲ್ಲಿದೆ ಎಂದು ಸಚಿವರು ತಿಳಿಸಿದರು.

ರಾಮರಾಜ್ಯ ಎಂದರೆ ದೇವರ ಪೂಜೆ ಮಾಡಬೇಕು ಎಂದರ್ಥವಲ್ಲ

ಈ ನಕಲಿ ಸೆಕ್ಯೂಲರ್ ಗಳು ದೇಶದ ವಿಚಾರದಲ್ಲಿ ಈ ಥರ ವಿವಾದ ಸೃಷ್ಠಿಸಿದ್ದಾರೆ.  ರಾಮರಾಜ್ಯ ಆಗಬೇಕು ಎಂದು ಬಿಜೆಪಿ ಹೇಳಿಲ್ಲ.  ಮಹಾತ್ಮಾ ಗಾಂಧಿ ಹೇಳಿದ್ದಾರೆ.  ರಾಮರಾಜ್ಯದ ಕಲ್ಪನೆ ಎಂದರೇ ಹಿಂದೂ ದೇವರ ಪೂಜೆ ಮಾಡಬೇಕು ಎಂದರ್ಥವಲ್ಲ.  ರಾಮ ಓರ್ವ ಆದರ್ಶ ಪುರುಷ.  ಹೇಗೆ ರಾಜ್ಯವಾಳಬೇಕು ಎಂಬುದನ್ನು ತೋರಿಸಿಕೊಟ್ಟವ.  ರಾಮರಾಜ್ಯದ ಕಲ್ಪನೆಯನ್ನು ಮಹಾತ್ಮಾ ಗಾಂಧಿ ಹೇಳಿದ್ದರು.  ಇತ್ತೀಚಿನ ದಿನಗಳಲ್ಲಿ ನಾವೆಲ್ಲ ಹೇಳುತ್ತೇವೆ.  ಈ ದೇಶದಲ್ಲಿ ಆಡಳಿತ ಹಾಳಾಗಿ ಹೋಗಿದೆ.  ಸ್ವಾರ್ಥಮಯವಾಗಿದೆ ಎಂದು ಹೇಳುತ್ತೇವೆ.  ಈ ದೇಶ ಸರಿ ಹೋಗಬೇಕಾದರೆ ಆಡಳಿತವೂ ಸರಿಯಾಗಿರಬೇಕು.  ಆಡಳಿತ ಸರಿಯಾಗಿರಬೇಕಾದರೆ ಯಾವ ರೀತಿ ಆಡಳಿತ ಬೇಕು ಎಂಬುದಕ್ಕೆ ಮಾದರಿ ಆಡಳಿತ ಇರಬೇಕು.  ಒಳ್ಳೆ ಆಡಳಿತ ಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ

ಕಾಂಗ್ರೆಸ್ಸಿನವರಿಗೆ ಈಗ ಅನುಭವದ ಕೊರತೆ ಇದೆ.  ಸದಾ ಆಡಳಿತ ಪಕ್ಷದಲ್ಲಿದ್ದಿದ್ದ ಆ ಪಕ್ಷದ ನಾಯಕರಿಗೆ ಈಗ ಪ್ರತಿಪಕ್ಷದಲ್ಲಿದ್ದು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ.   ಯಾವುದೇ ವಿಷಯ ಬಹಿರಂಗವಾಗುವ ಮುಂಚೆಯೇ ಅವರು ಮಾತನಾಡುತ್ತಾರೆ.  ಇನ್ನೂ ಪುಸ್ತಕಗಳು ಹೊರ ಬಂದಿಲ್ಲ.  ಆ ಪುಸ್ತಕದ ಬಗ್ಗೆ ನಾವು ಮಾಹಿತಿಯನ್ನೇ ನೀಡಿಲ್ಲ.  ವೋಟ್ ಬ್ಯಾಂಕ್ ರಾಜಕಾರಣ ಅಷ್ಟೇ ಅವರ ಕೆಲಸವಾಗಿದೆ.  ಪುಸ್ತಕಗಳು ಹೊರ ಬಂದ ಮೇಲೆ ಅದರಲ್ಲಿ ತಪ್ಪಿದ್ದರೆ ಹೇಳಲಿ.  ಅದು ಪ್ರತಿಪಕ್ಷದ ಕೆಲಸವೂ ಆಗಿದೆ.  ತಪ್ಪಿದ್ದರೆ ನಾವು ತಿದ್ದಿಕೊಳ್ಳುತ್ತೇವೆ.  ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಬರಗೂರು ರಾಮಚಂದ್ರಪ್ಪ ಪಠ್ಯಕ್ರಮ ಪರಿಷ್ಕರಣೆ ಮಾಡಿದ್ದರು.  ಅದರಲ್ಲಿ ಸರಿಯಾಗಿದ್ದನ್ನು ನಾವು ಒಪ್ಪಿಕೊಂಡಿದ್ದೇವೆ.  ಅದನ್ನು ಬರಗೂರು ರಾಮಚಂದ್ರಪ್ಪ ಮಾಡಿದ್ದರು ಅಥವಾ ಕಾಂಗ್ರೆಸ್ಸಿನವರು ಮಾಡಿದ್ದಾರೆ ಎಂದು ನಾವು ಹೇಳಲಿಲ್ಲ.  ಪಠ್ಯಕ್ರಮದಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಒಂದು ಸಮಿತಿಯನ್ನು ರಚಿಸಿದ್ದೇವೆ ಎಂದು ಸಚಿವ ಬಿ. ಸಿ. ನಾಗೇಶ ಸ್ಪಷ್ಟಪಡಿಸಿದರು.

ಟಿಪ್ಪು ವಿಚಾರ

ಟಿಪ್ಪುವಿನ ವಿಷಯ ಪಠ್ಯದಿಂದ ಕೈ ಬಿಡುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಬಗ್ಗೆ ತುಂಬಾ ಎಕ್ಸ್ಪರ್ಟ್ ಹೇಳೋದು ಏನಂದರೆ ಟಿಪ್ಪುವಿನ ಬಗ್ಗೆ ನೀವು  ಪಠ್ಯದಲ್ಲಿ ಕೊಟ್ಟಿರೋ ರೀತಿ ಸರಿಯಿಲ್ಲ.  ಟಿಪ್ಪುವಿನ ಒಂದು ಮುಖವನ್ನು ತೋರಿಸಿದ್ದೀರಿ.  ಈ ಸಲದ ಪಠ್ಯಕ್ರಮದಲ್ಲಿ ಏನು ಬದಲಾವಣೆ ಆಗಿಲ್ಲ,  ವೈಭವಿಕರಣವನ್ನು ಕಡಿಮೆ ಮಾಡಲಾಗಿದೆ.  ಟಿಪ್ಪಪುವನ್ನು ತೆಗೆದು ಹಾಕಲಾಗಿದೆ ಎಂಬುದೆಲ್ಲ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.

ಹಿಜಾಬ್ ಯಾವಾಗ ಫೇಲ್ಯೂರ್ ಆಯ್ತೋ ಆಗ ಕಾಂಗ್ರೆಸ್ ನವರು ಈ ರೀತಿ ಏನೋ ಒಂದು ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ.  ಅವರಿಗೆ ನಮ್ಮ ವಿರುದ್ಧ ಆರೋಪ ಮಾಡಬೇಕು ಎನ್ನುವುದಕ್ಕಿಂತ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಕೆಲಸ ಮಾಡುತ್ತಾರೆ.  ಚಂದ್ರುವಿನ ಕೊಲೆಯನ್ನು ಹೇಗೆ ರಾಜಕೀಯಕರಣ ಮಾಡಲು ನೋಡಿದರೋ ಎಂಬುದು ಎಲ್ಲರಿಗೂ ಗೊತ್ತಿದೆ.  ಕೊಲೆ ಕೊಲೆನೇ.  ಅದನ್ನು ರಾಜಕಾರಣ ಮಾಡಿದರು.  ಜಮೀರ್ ಅಹ್ಮದಖಾನ್ ಹಿರೋ ಥರ ಮಾತನಾಡಿದರು.  ಆ ಧರ್ಮ ಇತ್ತೀಚಿನ ದಿನಗಳಲ್ಲಿ ಅದರಲ್ಲೂ  ಉತ್ತರ ಪ್ರದೇಶ ಚುನಾವಣೆ ಬಳಿಕ ಕಾಂಗ್ರೆಸ್ ಗೆ ಮುಸ್ಲಿಂ ವೋಟ್ ಬ್ಯಾಂಕ್ ಬಿಜೆಪಿ ಕಡೆಗೆ ಹೋಗ್ಬಿಟ್ಟಿದೆ ಎಂಬ ಆತಂಕ ಶುರವಾಗಿದೆ.  ಉತ್ತರ ಪ್ರದೇಶದಲ್ಲಿ  ಮುಸ್ಲಿಂ ವೋಟ್ ಬ್ಯಾಂಕ್ ಇರುವಲ್ಲಿ ಬಿಜೆಪಿ ಗೆದ್ದಿದೆ‌.  ಈ ಮತಬ್ಯಾಂಕ್ ಬಿಜೆಪಿ ಕಡೆ ಹೋಗಿದೆ ಎಂಬ ಅನುಮಾನ ಶುರುವಾಗಿದೆ.  ಈ ರೀತಿ ಸುಳ್ಳು ಹೇಳುವ ಪ್ರವೃತ್ತಿ ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದರು.

ಟಿಪ್ಪುವನ್ನು ಪಠ್ಯದಿಂದ ತೆಗೆಯಿರಿ ಅಂತ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.  ಸ್ವಾತಂತ್ರ್ಯ ಪೂರ್ವದಲ್ಲಿ ಲಂಡನ್ ಪುಸ್ತಕಗಳಲ್ಲಿರುವ ಆಧಾರದ ಮೇಲೆ ಹೇಳಿದ್ದಾರೆ.  ಅವರು ಬ್ರಿಟೀಷರ ವಿರುದ್ಧ ಹೋರಾಡಿದ್ದು ನಿಜ.  ಆಡಳಿತ ಮಾಡಿದ್ದು ನಿಜ.  ಅದನ್ನು ನಾವು ನಿರಾಕರಿಸುತ್ತಿಲ್ಲ.  ಒಂದು ವೇಳೆ ಪಠ್ಯದಲ್ಲಿ ಇಡುವುದಾದರೆ ಟಿಪ್ಪುವಿನ ಎರಡೂ ಮುಖಗಳನ್ನು ಹಾಕಿ.   ಟಿಪ್ಪು ಹೋರಾಟದ ಬಗ್ಗೆ ಮಾತ್ರ ಹಾಕಲಾಗಿದೆ.  ಟಿಪ್ಪು ಮಡಿಕೇರಿಯಲ್ಲಿ ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯವನ್ನು ಹಾಕಿ.  ಕನ್ನಡ ಭಾಷೆ ತೆಗೆದು ಪರ್ಶಿಯನ್ ಭಾಷೆ ಜಾರಿಗೆ ತರಲು ಮಾಡಿದ ಪ್ರಯತ್ನವನ್ನೂ ಹಾಕಿ.  ಅವನ ಕತ್ತಿಯ ಮೇಲೆ ಏನು ಬರೆದುಕೊಂಡಿದ್ದ ಅದನ್ನು ಹಾಕಿ.  ಅದು ಮಕ್ಕಳಿಗೆ ಗೊತ್ತಾಗಲಿ.  ಒಂದೇ ಸೈಡ್ ನಲ್ಲಿ ಹಾಕಬೇಡಿ ಅಂದಿದ್ದಾರೆ.  ಮುಂದಿನ ಪಠ್ಯ ಪರಿಷ್ಕರಣೆಯಲ್ಲಿ  ಅದನ್ನು ತರುತ್ತೇವೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌