ಏ. 28 ರಂದು ಇಂಡಿಯಲ್ಲಿ ಸಿರಿಧಾನ್ಯಗಳ ಜಿಲ್ಲಾ ಸಮಾವೇಶ- ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ

ವಿಜಯಪುರ: ಏ. 28(April 28) ರಂದು ವಿಜಯಪುರ(Vijayapura) ಜಿಲ್ಲೆಯ(District) ಇಂಡಿಯಲ್ಲಿ(Indi) ಸಿರಿಧಾನ್ಯಗಳ ಜಿಲ್ಲಾ ಸಮಾವೇಶ(Millets District Conference) ನಡೆಸಲು ನಿರ್ಧರಿಸಲಾಗಿದೆ. 

ವಿಜಯಪುರದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಣಿ ಮತ್ತು ಸಿರಿಧಾನ್ಯಗಳ ಜಿಲ್ಲಾ ಸಮಾವೇಶ ಕುರಿತು ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿಜಯಪುರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ನಡೆಯಿತು

ಏ. 28 ರಂದು ಇಂಡಿಯಲ್ಲಿ ನಡೆಯಲಿರುವ ಸಿರಿಧಾನ್ಯಗಳ ಜಿಲ್ಲಾ ಸಮಾವೇಶಕ್ಕೂ ಮುನ್ನು ಎತ್ತಿನ ಬಂಡಿ ಮೆರವಣಿಗೆ ಮಾಡಲು ನಿರ್ಧರಿಸಲಾಯಿತು.  ಎಲ್ಲ ಪದಾಧಿಕಾರಿಗಳು ಎಲ್ಲ ಗ್ರಾಮ ಪಂಚಾಯಿತಿ ರೈತ ಪ್ರಹರಿಗಳನ್ನು ಹಾಗೂ ಪ್ರಗತಿಪರ ರೈತನ್ನು ಕರೆದುಕೊಂಡು ಬರಲು ಸೂಚನೆ ನೀಡಲಾಯಿತು.

ಈ ಸಭೆಯಲ್ಲಿ ಈ ಸಭೆಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರವಿಕಾಂತ ಬಗಲಿ, ಲಿಂಬೆ ಅಭಿವೃದ್ಧಇ ನಿಮಗದ ಅಧ್ಯಕ್ಷ ಅಶೋಕ ಅಲ್ಲಾಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಧು ಪಾಟೀಲ, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಆಳದ ರಮೇಶ ಶಾಹಪೇಟಿ, ಸಿದ್ದು ಬುಳ್ಳಾ, ರೈತ ಮೋರ್ಚಾ ಉಪಾಧ್ಯಕ್ಷ ಸಿದ್ದಗೊಂಡ ಬಿರಾದಾರ, ಬಿಜೆಪಿ ಮುಖಂಡರಾದ ಕುಮಾರ ಗಡಗಿ, ಬಸವರಾಜ ಕಲ್ಲೂರ, ಒಂಬತ್ತು ಮಂಡಲ ಅದ್ಯಕ್ಷರು. ಪ್ರಧಆನ ಕಾರ್ಯದರ್ಶಿಗಳು, ಜಿಲ್ಲಾ ಮತ್ತು ಮಂಡಲಗಳ ಪದಾಧಿಕಾರಿಗಳು ಭಾಗವಹಿಸಿದ್ದರು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌