ವಿಜಯಪುರ ಡಿಸಿ ವರ್ಗಾವಣೆ- ವಿಜಯಮಹಾಂತೇಶ ಬಿ. ದಾನಮ್ಮನವರು ನೂತನ ಜಿಲ್ಲಾಧಿಕಾರಿ

ವಿಜಯಪುರ: ವಿಜಯಪುರ(Vijayapura) ಜಿಲ್ಲಾಧಿಕಾರಿ(Deputy Commissioner) ಪಿ. ಸುನೀಲ ಕುಮಾರ(P Sunil Kumar) ಅವರನ್ನು ವರ್ಗಾವಣೆ(Transfer) ಮಾಡಿ ಸರಕಾರ ಆದೇಶ(Government Ordered) ಹೊರಡಿಸಿದೆ.

2013ನೇ ಬ್ಯಾಚಿನ ಐಎಎಸ್ ಅಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ ಅವರನ್ನು ವಿಜಯಪುರದ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ವಿಜಯಪುರ ಹಾಲಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ಪಿ. ಸುನೀಲ ಕುಮಾರ ಕಳೆದ 2020ರ ಆಗಷ್ಟ್ ನಲ್ಲಿ ಕೊರೊನಾ ಉತ್ತುಂಗದಲ್ಲಿದ್ದಾಗ ವಿಜಯಪುರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಪಿ. ಸುನೀಲ ಕುಮಾರ ತಮ್ಮ ಮಾತಿಗಿಂತಲೂ ಕೃತಿಯ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿದ್ದರು.  ಅಲ್ಲದೇ, ಕೊರೊನಾ ಹಾಗೂ ಪ್ರವಾಹವನ್ನು ಸಮರ್ಥವಾಗಿ ನಿಭಾಯಿಸಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದರು.  ಯಾವುದೇ ಕೆಲಸವಿದ್ದರೂ ತಕ್ಷಣ ಸ್ಪಂದಿಸುತ್ತಿದ್ದ ಅವರ ಸರಳತೆ ಮತ್ತು ಕೆಲಸದ ಶೈಲಿ ಜನರಷ್ಟೇ ಅಲ್ಲ, ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಗಿತ್ತು.

ಒಂದು ವರ್ಷ ಎಂಟು ತಿಂಗಳವರೆಗೆ ವಿಜಯಪುರದಲ್ಲಿ ಸೇವೆ ಸಲ್ಲಿಸಿರುವ ಪೊಮ್ಮಳ ಸುನೀಲ ಕುಮಾರ ಅವರನ್ನು ರಾಜ್ಯ ಸರಕಾರ ಈಗ ವರ್ಗಾವಣೆ ಮಾಡಿದೆ.  ಅದರೆ, ಅವರಿಗೆ ಸರಕಾರ ಯಾವುದೇ ಹುದ್ದೆಯನ್ನು ತೋರಿಸಿಲ್ಲ.

Leave a Reply

ಹೊಸ ಪೋಸ್ಟ್‌