ವಿಜಯಪುರ ನೂತನ ಡಿಸಿ ಸಂಚರಿಸುತ್ತಿದ್ದ ಕಾರು ಅಪಘಾತ- ಚಾಲಕ ಹೇಳಿದ್ದೇನು ಗೊತ್ತಾ?

Dharawad: ಅಧಿಕಾರ ವಹಿಸಿಕೊಳ್ಳಲು(Assuming Charge) ವಿಜಯಪುರಕ್ಕೆ ಬರುತ್ತಿದ್ದ ನೂತನ ಜಿಲ್ಲಾಧಿಕಾರಿ(New Deputy Commissioner) ವಿಜಯಮಹಾಂತೇಶ ಬಿ. ದಾನಮ್ಮನವರ(Vijayamahantesh B. Danammanavar) ಸಂಚರಿಸುತ್ತಿದ್ದ ಕಾರು ಪಲ್ಟಿಯಾದ(Car Overturned) ಘಟನೆ ಧಾರವಾಡ ಜಿಲ್ಲೆಯ ಯರಿಕೊಪ್ಪ(Dharawad District Tarikoppa) ಬಳಿ ನಡೆದಿದೆ.

ಧಾರವಾಡ ಜಿಲ್ಲೆಯ ಯರಿಕೊಪ್ಪ ಬಳಿ ಅಪಘಾತಕ್ಕೀಡಾಗಿರುವ ಕಾರು

 

ವಿಜಯಪುರ ನೂತನ‌ ಜಿಲ್ಲಾಧಿಕಾರಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಯರಿಕೊಪ್ಪ ಬಳಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

ಈ ಕಾರಿನಲ್ಲಿ ಐಎಎಸ್ ಅಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ, ಅವರ ಪತ್ನಿ ಶ್ವೇತಾ, ಮಕ್ಕಳಾದ ತನ್ವಿ, ವಿಹಾನ ಹಾಗೂ ಪ್ರವಿಣಕುಮಾರ ಪ್ರಯಾಣಿಸುತ್ತಿದ್ದರು. ಎಲ್ಲರನ್ನೂ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯಪುರ ನೂತನ ಜಿಲ್ಲಾಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ

ಸೋಮವಾರ ಸಂಜೆಯಷ್ಟೇ ವಿಜಯಮಹಾಂತೇಶ ಬಿ. ದಾನಮ್ಮನವರ ಅವರ ವರ್ಗಾವಣೆ ಆದೇಶ ಹೊರ ಬಂದಿತ್ತು. ವಿಜಯಪುರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲು ಅವರು ಕುಟುಂಬ ಸಮೇತ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕಾರು ಚಾಲಕ ಬಸವರಾಜ, ನಸುಕಿನ‌ ಜಾವ 4 ಗಂಟೆಯ ಸುಮಾರಿಗೆ ಕಾರು ಓಡಿಸುತ್ತಿದ್ದಾಗ ಲಾರಿಯೊಂದು ಎದರಿಗೆ ಬಂತು. ಆಗ, ಕಾರನ್ನು ಬಲಗಡೆಗೆ ತೆಗೆದುಕೊಂಡೆ. ಇಲ್ಲದಿದ್ದರೆ ಕಾರು ಲಾರಿಗೆ ಢಿಕ್ಕಿ ಹೊಡೆದು ಭಾರಿ ಅನಾಹುತ ಉಂಟಾಗುತ್ತಿತ್ತು. ಕೈಕಾಲುಗಳಿಗೇನಾದರೂ ಆಗಲಿ ಕಡೆಪಕ್ಷ ಜೀವ ಉಳಿದರೆ ಸಾಕು ಎಂದು ಬಲಗಡೆ ಕಾರನ್ನು ತಿರುಗಿಸಿದಾಗ ವಾಹನ ಪಲ್ಟಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌