Shivabasava Jayatni: ಶಿವಬಸವ ಜಯಂತಿ ಅಂಗವಾಗಿ ಬಸವ ನಾಡಿನಲ್ಲಿ ಶೋಭಾಯಾತ್ರೆ- ಬಿಜೆಪಿ ಸೇರಿ ನಾನಾ ಮುಖಂಡರು ಭಾಗಿ

ವಿಜಯಪುರ: ಶಿವಬಸವ ಜಯಂತಿ(Shiva Basava Jayanti) ಅಂಗವಾಗಿ ಬಸವ ನಾಡು(Basava Nadu) ವಿಜಯಪುರ ನಗರದಲ್ಲಿ(Vijayapura City) ಶೋಭಾಯಾತ್ರೆ(Shobha Yatre) ನಡೆಯಿತು.  ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ತಿಲಕ ಚೌಕಿನಿಂದ(Tilak Chowk) ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. 

ಈ ಮೆರವಣಿಗೆಯಲ್ಲಿ ಬಸವೇಶ್ವರ ಮತ್ತು ಶಿವಾಜಿ ಮಹಾರಾಜರ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು.

ವಿಜಯಪುರ ನಗರದಲ್ಲಿ ಶಿವಬಸವ ಜಯಂತಿ ಅಂಗವಾಗಿ ಶೋಭಾಯಾತ್ರೆ ನಡೆಯಿತು

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, ಪ್ರಕಾಶ ಅಕ್ಕಲಕೋಟ, ಭೀಮಾಶಂಖರ ಹದನೂರ, ಗೋಪಾಲ ಘಟಕಾಂಬಳೆ, ನ್ಯಾಯವಾದಿ ನಾಗರಾಜ ಲಂಬು, ವಿಜಯ ಜೋಶಿ, ಸಿದ್ದು ಮಲ್ಲಿಕಾರ್ಜುನ ಮಠ, ಜಗದೀಶ ಮುಚ್ಚಂಡಿ, ಸಂತೋಷ ಕವಾಲ್ದಾರ, ಸತೀಶ ಪಾಟೀಲ, ವಿಜು ಕೋಹಳ್ಳಿ, ಚಂದ್ರು ಉಮರ್ಜಿ, ರಾಜು ಗಚ್ಚಿನಮಠ, ಕಲ್ಲುಗೌಡ ಹರನಾಳ, ಮಹೇಶ ಜಾಧವ, ಅಂಬಾದಾಶ ಕುಲಕರ್ಣಿ, ಶಂಕರ ಕುಂಬಾರ, ಪ್ರಕಾಶ ಮಿರ್ಜಿ, ರಾಜು ಬಿರಾದಾರ, ಶಿವಾಜಿ ಪಾಟೀಲ ಸೇರಿದಂತೆ ಸಹಸ್ರಾರು ಯುವಕರು ಪಾಲ್ಗೊಂಡಿದ್ದರು.

Leave a Reply

ಹೊಸ ಪೋಸ್ಟ್‌