ವಿಜಯಪುರ: ಭಾರತದ (Indian) ಪ್ರತಿಷ್ಠಿತ(Prestigious) ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ISRO) ಸಾಧನೆ, ಕಾರ್ಯಚಟುವಟಿಕೆಗಳ ಕುರಿತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ(KPCC general secretary) ಕಾಂತಾ ನಾಯಕ(Kanta Naik) ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ.
![](https://basavanadu.com/wp-content/uploads/2022/05/IMG-20220509-WA0019-300x171.jpg)
ವಿಜಯಪುರ ಜಿಲ್ಲೆಯ ವಿಜಯಪುರದ ಕನ್ನೂರ ಗ್ರಾಮದಲ್ಲಿರುವ ಶಾಂತಿ ಕುಟೀರದಲ್ಲಿ ನಡೆಯುತ್ತಿರುವ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು.
ಇಸ್ರೊ ಸಂಸ್ಥೆಯ ಉಪಗ್ರಹ ಉಡಾವಣೆ ಕಾರ್ಯವೈಖರಿ , ಸಾಮಾನ್ಯ ಜ್ಞಾನ, ಸಮಯದ ಸದುಪಯೋಗಳ ಕುರಿತು ಕಾಂತಾ ನಾಯಕ ಮಾತನಾಡಿದರು.
ಈ ಸಂದರ್ಭದಲ್ಲಿ ಕೃಷ್ಣ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.