Achievers Award: ಬಸವ ನಾಡಿನ ಶಿವಾಜಿಗೆ ದಿನಪತ್ರಿಕೆಯ ವತಿಯಿಂದ ಸಾಧಕರ ಪ್ರಶಸ್ತಿ ಪ್ರಧಾನ

ಬೆಂಗಳೂರು: ಬಸವ ನಾಡಿನ(Basava Nadu) ಸಾಧಕ(Achiever) ಶೈಕ್ಷಣಿಕ ರಂಗದಲ್ಲಿ(Education Section) ಅವರದೇ ಆದ ಸಾಧನೆ ಮಾಡಿರುವ ವಿಜಯಪುರ(Vijayapura) ನಗರದ ಶಿವಾಜಿ ಗಾಯಕವಾಡ(Shivaji Gayakawad) ಅವರಿಗೆ ದೈನಿಕವೊಂದು ಸಾಧಕರ ಪ್ರಶಸ್ತಿ ನೀಡಿ ಗೌರವಿಸಿದೆ. 

ಶಿವಾಜಿ ಗಾಯಕವಾಡ ಅವರಿಗೆ ಶುಭ ಕೋರಿದ ಕಂದಾಯ ಸಚಿವ ಆರ್. ಅಶೋಕ

ರಾಜ್ಯದ ಕನ್ನಡ ದೈನಿಕ ವಿಜಯ ಕರ್ನಾಟಕ ದಿನಪತ್ರಿಕೆಯ ಉತ್ತರ ಕರ್ನಾಟಕದ ಸಾಧಕರ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಲ್ಲಿ ನಡೆಯಿತು.  ಪಂಚತಾರಾ ಹೋಟೆಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ ಈ ಪ್ರಶಸ್ತಿ ಪ್ರಧಾನ ಮಾಡಿದರು.

ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ  ಅವರನ್ನು ಉತ್ತರ ಕರ್ನಾಟಕದಿಂದ ಆಯ್ಕೆ ಮಾಡಲಾಗಿತ್ತು.  ನಟಿ ಸೋನುಗೌಡ, ಸಂಪಾದಕರಾದ ಸುದರ್ಶನ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌