BJP Yatnal: ನನನ್ನು ಬಿಜೆಪಿಯಿಂದ ಉಚ್ಛಾಟಿಸಲು, ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ- ಎದುರಾಳಿಗಳ ವಿರುದ್ಧ ಯತ್ನಾಳ ಗುಡುಗು

ವಿಜಯಪುರ: ನನ್ನನ್ನು ಬಿಜೆಪಿಯಿಂದ(BJP) ಉಚ್ಚಾಟಿಸಲು(Expelled), ಟಿಕೆಟ್ ತಪ್ಪಿಸಲು(Ticket) ಯಾರಿಂದಲೂ ಸಾಧ್ಯವಿಲ್ಲ(Not Possible) ಎಂದು ವಿಜಯನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಗುಡುಗಿದ್ದಾರೆ.

ವಿಜಯಪುರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ನಾನು ಜನರ ಪ್ರತಿನಿಧಿ. ಅವರ ಪರ ಧ್ವನಿ ಎತ್ತುತ್ತೇನೆ. ಅದು ಪಕ್ಷ ವಿರೋಧಿಯಲ್ಲ. ತಮ್ಮ ವಿರೋಧಿಗಳು ಆಗಾಗ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಲೇ ಇರುತ್ತಾರೆ. ನನ್ನನ್ನು ಇಂದು ಹೊರಗೆ ಹಾಕುತ್ತಾರೆ. ನಾಳೆ ಹೊರಗೆ ಹಾಕುತ್ತಾರೆ.‌‌ ನನಗೆ ಟಿಕೆಟ್ ಸಿಗುತ್ತದೆ ನಿನಗೆ ಟಿಕೆಟ್ ಸಿಗುತ್ತದೆ ಎಂದು ಕನಸು ಕಾಣುತ್ತಲೇ ಇರುತ್ತಾರೆ. ನಾನು ಜನರ ಪ್ರತಿನಿಧಿ. ನನಗೆ ದೇಶ ಮೊದಲು. ನಾನು ಜನರ ಧ್ವನಿ ಎತ್ತುತ್ತೇನೆ. ನಾನು ಏನೇ ಮಾತಾಡಿದರೂ ಪಕ್ಷದವರು ಹೊರಗೆ ಹಾಕಲ್ಲ. ನನಗೆ ಟಿಕೆಟ್ ಸಿಗುತ್ತದೆ ಎಂದುಕೊಳ್ಳುವವರ ಕನಸು ನನಸಾಗುವುದಿಲ್ಲ. ನನಗೆ ಟಿಕೆಟ್ ತಪ್ಪುತ್ತದೆ ಎಂದು ಯಾರದಾದರೂ ತಲೆಯಲ್ಲಿದ್ದರೆ ಅವರ ಸುಮ್ಮನೆ ಕುಳಿತುಕೊಳ್ಳುವುದು ಒಳಿತು. ಅವರಾರಿಗೂ ಟಿಕೆಟ್ ಸಿಗುವುದಿಲ್ಲ. ನನ್ನ ವಿರುದ್ಧ ಜಾತಿ ಲೆಕ್ಕಾಚಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು‌ ಕಣಕ್ಕೆ ಇಳಿಸಲು ವಿರೋಧಿಗಳು ಪ್ರಯತ್ನ ನಡೆಸಿದ್ದಾರೆ. ಆದರೆ, ಅವರಿಂದ ನನ್ನ ವಿರುದ್ಧ ಏನೂ ಮಾಡಲು ಸಾಧ್ಯವಿಲ್ಲ. ಅವರು ಎಚ್ಚರದಿಂದ ಇರಬೇಕು. ಯಾರು ಏನೇ ಮಾಡಿದರೂ ಟಿಕೆಟ್ ನನಗೆ ಸಿಗುತ್ತದೆ. ನನ್ನನ್ನು ಹೊರ ಹಾಕುವುದು ಸುಲಭವಲ್ಲ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

ನಾನು ಯಾರಿಗೂ ಬ್ಲಾಕಮೇಲ್ ಮಾಡಿಲ್ಲ. ಬ್ಲಾಕಮೇಲ್ ಮಾಡುವವರು ರಾಜಕಾರಣದಲ್ಲಿ ಬಹಳ ದಿನ ಮುಂದುವರೆಯಲಿಲ್ಲ. ನಾನು ಜನರಪರ ದನಿ ಎತ್ತುತ್ತೇನೆ. ಸಚಿವ ಸ್ಥಾನ ನೀಡದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ನನ್ನ ಬಗ್ಗೆ ಮಾತನಾಡಿ ಯಾರು ಏನೇ ಬರೆದರೂ ವ್ಯತ್ಯಾಸವಾಗುವುದಿಲ್ಲ. ಹೈಕಮಾಂಡಿನವರು ಎಲ್ಲವನ್ನೂ ಕೂಲಂಕಷವಾಗಿ ಪರಿಗಣಿಸುತ್ತಾರೆ. ಆದರೂ ಮಾಧ್ಯಮಗಳು ನನ್ನ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಯಾಕೆ ಉಚ್ಚಾಟನೆ ಮಾಡುವುದಿಲ್ಲ? ಎಂದೆಲ್ಲ ತೋರಿಸುತ್ತಾರೆ. ಅದರಿಂದ ನನಗೇನೂ ಹಾನಿಯಾಗುವುದಿಲ್ಲ ಎಂದು ಶಾಸಕರು ಹೇಳಿದರು.

ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವಿರೋಧಿಗಳು ಒತ್ತಾಯಿಸಿದ್ದರು.  ಆದರೆ, ರಾಷ್ಟ್ರೀಯ ನಾಯಕರು ಉಚ್ಛಾಟನೆ ಬೇಡ.  ಗಾಗೆ ಮಾಡಿದರೆ ಅವರು ಮತ್ತಷ್ಟು ವ್ಯಘ್ರರಾಗುತ್ತಾರೆ.  ಅದರ ಬದಲು ಸುಮ್ಮನಿದ್ದರೆ ನಿಯಂತ್ರಣದಲ್ಲಿಡಬಹುದು ಎಂದು ಹೇಳಿದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ, ಪತ್ರಕರ್ತರ ಕ್ಷೇಮಾಭಿವೃದ್ಧಿ ಹಾಗೂ ಪ್ರತಿಭಾ ಪುರಸ್ಕಾರಕ್ಕಾಗಿ ವೈಯಕ್ತಿಕವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರೂ. 5 ಲಕ್ಷ ಹಣ ನೀಡುತ್ತೇನೆ. ಅದನ್ನು ಸಂಘದ ಬೆಳವಣಿಗೆ, ಪತ್ರಕರ್ತರ ಕ್ಷೇಮಾಭೀವೃದ್ಧಿ ಸೇರಿದಂತೆ ಇನ್ನುಳಿದ ಕಾರ್ಯಗಳಿಗೆ ಬಳಸಿಕೋಳ್ಳುವಂತೆ ಅವರು ಸಲಹೆ ನೀಡಿದರು.

ವಿಜಯಪುರ ಜಿಲ್ಲೆಯಿಂದ ಪ್ರತಿನಿಧಿಸುವ ನನ್ನಂಥ ಜನಪ್ರತಿನಿಧಿಗಳಿಂದ ನಾನಾ ರೀತಿಯಲ್ಲಿ ಸಹಾಯ ಧನವನ್ನು ಪಡೆದು ಸಂಘದ ಕಾರ್ಯಕ್ಕೆ ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಬಳಸಿಕೊಳ್ಳಬೇಕು. ಪತ್ರಿಕಾ ಭವನವನ್ನು ಹೈಟೆಕ್ ಭವನವನ್ನಾಗಿ ರೂಪಿಸಲು ಅಗತ್ಯ‌ ಕ್ರಮ ಕೈಗೊಳ್ಳಲಾಗುವುದು. ಪತ್ರಕರ್ತರಿಗೆ ನಿವೇಶನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಒಬ್ಬ ಒಳ್ಳೆಯ ವ್ಯಕ್ತಿಗಳು ಸಂಘದ ನೇತೃತ್ವ ವಹಿಸಿದರೆ ಸಂಘದ ಉದ್ಧಾರವಾಗುತ್ತದೆ. ನಾನು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮಾಧ್ಯಮಗಳೇ ಕಾರಣ. ವೈಯುಕ್ತಿಕವಾದ ಮಾನಹಾನಿಯಾಗುವ ಸುದ್ದಿಗಳು ಬೇಡ. ಆದರೆ, ತಪ್ಪು ಮಾಡಿದಾಗ ರಾಜಕೀಯ ಪಕ್ಷಗಳಿಗೆ ಮಾಧ್ಯಮಗಳ ಭಯ ಇರಲೇಬೇಕು ಎಂದು ಬಸನಗೌಡ ಪಾಟೀಲ‌ ಯತ್ನಾಳ ಅವರು ಹೇಳಿದರು.

Leave a Reply

ಹೊಸ ಪೋಸ್ಟ್‌