Handicap Unique Card: ಬಸವನ ಬಾಗೇವಾಡಿಯಲ್ಲಿ 2ನೇ ದಿನ 174 ಜನರಿಗೆ ಗುರುತಿನ ಚೀಟಿ ವಿತರಣೆ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ(Basavana Bagewadi) ತಾಲೂಕಾಸ್ಪತ್ರೆಯಲ್ಲಿ(Taluku Hospital) ನಡೆದ ವಿಕಲ ಚೇತನರಿಗೆ(Handicap) ವಿಶಿಷ್ಠ ಗುರುತಿನ ಚೀಟಿ(Unique Identity Card) ನೀಡುವ ಶಿಬಿರದಲ್ಲಿ 174 ಜನ ವಿಕಲಚೇತನರು ತಪಾಸಣೆಗೊಳಪಟ್ಟು(Check Up) ಸೌಲಭ್ಯ ಪಡೆದರು. ಶ್ರವಣದೋಷವುಳ್ಳ ವಿಕಲಚೇತನರನ್ನು ಹೊರತುಪಡಿಸಿ ಇನ್ನುಳಿದ ದೈಹಿಕ, ಬೌದ್ಧಿಕ ವಿಕಲತೆ, ಮಾನಸಿಕ ಅಸ್ವಸ್ಥರು, ದೃಷ್ಟಿ ದೋಷವುಳ್ಳ ವಿಕಲಚೇತನರು ವಿಶೇಷ ತಪಾಸಣೆಗೊಳಪಟ್ಟು ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ಪಡೆದರು. ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ […]

Staff Retired: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 49 ಜನ ಸಿಬ್ಬಂದಿ ವಯೋನಿವೃತ್ತಿ: ಬೀಳ್ಕೊಡುಗೆ ಸಮಾರಂಭ

ವಿಜಯಪುರ:  ಕಲ್ಯಾಣ(Kalyan) ಕರ್ನಾಟಕ(Karnataka) ರಸ್ತೆ(Road) ಸಾರಿಗೆ(Transport) ನಿಗಮ(Corporation) ವಿಜಯಪುರ ವಿಭಾಗದ ವಿವಿಧ ಘಟಕಗಳಿಂದ ಒಟ್ಟು 49 ಜನ ಸಿಬ್ಬಂದಿಯು ವಯೋ ನಿವೃತ್ತಿ ಹೊಂದಿದರು. ಅಲ್ತಾಫಅಹ್ಮದ್ ಮೊಹಮ್ಮದಗೌಸ ಜಹಾಗೀರದಾರ, ಯುನೂಸ್ ಹುಸೇನಬಾಷಾ ರಿಸಾಲದಾರ, ಬಸೀರಅಹಮದ್ ಕಾಸೀಮಸಾಬ ಮುರಾಳ, ತುಕಾರಾಮ ಸಿದ್ಲೆಪ್ಪ ಮಮದಾಪೂರ, ಯಮನಪ್ಪಾ ಲಚ್ಚಪ್ಪಾ ತಳವಾರ, ಶ್ರೀಶೈಲ ಸಿದ್ದಪ್ಪಾ ಕಮ್ಮಾರ, ರವೀಂದ್ರ ದುಂಡಪ್ಪ ಶಾಪೇಟಿ, ಬಾಬು ಗುಜ್ಜು ರಾಠೋಡ, ಅಶೋಕ ಶಂಕರರಾವ್ ಲಾಟ್ನೆ, ಸಿದ್ರಾಮಯ್ಯಾ ಮಹಾದೇವಯ್ಯಾ ಮಠ, ಶಿವಣ್ಣಾ ಹಾವಪ್ಪ ಹದರಿ, ನಿಂಗಪ್ಪಾ ಚನ್ನಮಲ್ಲಪ್ಪ ಕಾಗವಾಡ, ಶ್ರೀಶೈಲ ಭೋಜಪ್ಪಾ […]

Ration Card E-KYC: ನ್ಯಾಯ ಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಲು ಪಡಿತರ ಚೀಟಿದಾರರಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ

ವಿಜಯಪುರ: ನ್ಯಾಯ ಬೆಲೆ ಅಂಗಡಿಯಲ್ಲಿ(Ration Shop) ಇ-ಕೆವೈಸಿಯನ್ನು(E-KYC) ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ(Deputy Commissioner) ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ(Dr Vijayamahantesh B Danamannavar) ಅವರು ಪಡಿತರ ಚೀಟಿದಾರರಲ್ಲಿ(Card Holders) ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಸೇರಿದಂತೆ ಒಟ್ಟು 495943 ಪಡಿತರ ಚೀಟಿಗಳಿದ್ದು, ಇವುಗಳ ಪೈಕಿ 393397 ಪಡಿತರ ಚೀಟಿದಾರರು ಮಾತ್ರ ಇಕೆವೈಸಿಯನ್ನು ಮಾಡಿಸಿಕೊಂಡಿದ್ದಾರೆ. ಇನ್ನು 1,02,546 ಪಡಿತರ ಚೀಟಿದಾರರು ಇ-ಕೆವೈಸಿಯನ್ನು ಮಾಡಿಸಿರುವುದಿಲ್ಲ. ಕೆಲವೊಂದು ಪಡಿತರ ಚೀಟಿದಾರರು […]

ZP CEO: ದೇವರ ಹಿಪ್ಪರಗಿ ತಾಲೂಕಿನಲ್ಲಿ ಸಿಇಓ ರಾಹುಲ್ ಶೀಂಧೆ ಪ್ರವಾಸ- ಮಣೂರ, ಕೆರೂಟಗಿ, ಕೊಂಡಗೂಳಿ ಗ್ರಾ. ಪಂ. ಗಳಿಗೆ ಭೇಟಿ- ನಾನಾ ಕಾಮಗಾರಿ ಪರಿಶೀಲನೆ

ವಿಜಯಪುರ: ಜಿಲ್ಲಾ ಪಂಚಾಯತಿಯ(Zilla Panchayat) ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ(Chief Executive Officer) ರಾಹುಲ ಶಿಂಧೆ(Rahul Shindhe) ಅವರು ಜೂನ್ 2ರಂದು ಗ್ರಾಮೀಣ ಭಾಗದಲ್ಲಿ ಪ್ರವಾಸ ಕಾರ್ಯಕ್ರಮಗಳನ್ನು(Rural Tour Programmes) ಮುಂದುವರೆಸಿ ದೇವರಹಿಪ್ಪರಗಿ ತಾಲೂಕಿನ ಮಣೂರ, ಕೆರುಟಗಿ ಮತ್ತು ಕೊಂಡಗೂಳಿ ಗ್ರಾಮ ಪಂಚಾಯಿತಿಗಳಿಗೆ(Gram Panchayats) ಭೇಟಿ ನೀಡಿದರು. ಮಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಳದಲ್ಲಿದ್ದ 61 […]