Ration Card E-KYC: ನ್ಯಾಯ ಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಲು ಪಡಿತರ ಚೀಟಿದಾರರಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ

ವಿಜಯಪುರ: ನ್ಯಾಯ ಬೆಲೆ ಅಂಗಡಿಯಲ್ಲಿ(Ration Shop) ಇ-ಕೆವೈಸಿಯನ್ನು(E-KYC) ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ(Deputy Commissioner) ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ(Dr Vijayamahantesh B Danamannavar) ಅವರು ಪಡಿತರ ಚೀಟಿದಾರರಲ್ಲಿ(Card Holders) ಮನವಿ ಮಾಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಸೇರಿದಂತೆ ಒಟ್ಟು 495943 ಪಡಿತರ ಚೀಟಿಗಳಿದ್ದು, ಇವುಗಳ ಪೈಕಿ 393397 ಪಡಿತರ ಚೀಟಿದಾರರು ಮಾತ್ರ ಇಕೆವೈಸಿಯನ್ನು ಮಾಡಿಸಿಕೊಂಡಿದ್ದಾರೆ. ಇನ್ನು 1,02,546 ಪಡಿತರ ಚೀಟಿದಾರರು ಇ-ಕೆವೈಸಿಯನ್ನು ಮಾಡಿಸಿರುವುದಿಲ್ಲ. ಕೆಲವೊಂದು ಪಡಿತರ ಚೀಟಿದಾರರು ಇಕೆವೈಸಿಯನ್ನು ಮಾಡಿಸದೇ ಇದ್ದರು ಸಹ ಅವರು ಪಡಿತರ ಚೀಟಿ ನಿಯೋಜಿಸಿದ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆಯದೇ ಅವರ ವಾಸಿಸುವ ಗ್ರಾಮದಲ್ಲಿ ಅಥವಾ ಮನೆಯ ಸಮೀಪದ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪೋರ್ಟೇಬ್ಲಿಟಿ ಆಧಾರದ ಮೇರೆಗೆ ಪಡೆದಯುತ್ತಿದ್ದಾರೆ. ಇಂತಹ ಪಡಿತರ ಚೀಟಿದಾರರಿಗೆ ಅವರು ಹೊಂದಿರುವ ಪಡಿತರ ಚೀಟಿಯನ್ನು ನಿಯೋಜಿಸಿದ ಮೂಲ ನ್ಯಾಯ ಬೆಲೆ ಅಂಗಡಿಗೆ ಹೋಗಿ ಇಕೆವೈಸಿ ಮಾಡಿಸಲು ತಿಳಿಸಿದರೂ ಸಹಿತ ಇದುವರೆಗೂ ಇಕೆವೈಸಿಯನ್ನು ಮಾಡಿಸಿರುವುದಿಲ್ಲ. ಆದ್ದರಿಂದ ಇಕೆವೈಸಿ ಮಾಡುವುದನ್ನೂ ಸಹ ಈ ತಿಂಗಳಿನಿAದ ಪೋರ್ಟೇಬ್ಲಿಟಿ ನ್ಯಾಯ ಬೆಲೆ ಅಂಗಡಿಯಲ್ಲಿ ಅವಕಾಶವನ್ನು ಕಲ್ಪಿಸಲಾಗಿರುವುದರಿಂದ ಪೋರ್ಟೇಬ್ಲಿಟಿ ಮೂಲಕ ಬೇರೆ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆಯುತ್ತಿರುವ ಪಡಿತರ ಚೀಟಿದಾರರೂ ಸಹಿತ ಅವರ ಸಮೀಪವಿರುವ ನ್ಯಾಯ ಬೆಲೆ ಅಂಗಡಿಯಲ್ಲಿ ಇಕೆವೈಸಿಯನ್ನು ಮಾಡಿಸಿಕೊಳ್ಳಲು ಸೂಚಿಸಿದೆ.

ಇಂಡಿ, ಚಡಚಣ ಹಾಗೂ ತಿಕೋಟ ತಾಲೂಕುಗಳ ಗಡಿ ಪ್ರದೇಶಗಳಲ್ಲಿ ಬರುವ ಕೆಲವೊಂದು ಗ್ರಾಮಗಳಲ್ಲಿನ ಆಧಾರ್ ಕಾರ್ಡುಗಳು ಮರಾಠಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿದ್ದ ಪ್ರಯುಕ್ತ ಅಂತಹವರೂ ಸಹಿತ ಇಕೆವೈಸಿ ಮಾಡಿಸಲು ಸಾಧ್ಯವಾಗಿರುವುದಿಲ್ಲ. ಮರಾಠಿಯಲ್ಲಿರುವ ಆಧಾರ್ ಕಾರ್ಡುಗಳನ್ನು ಕನ್ನಡ ಭಾಷೆಯಲ್ಲಿ ಕೂಡಲೇ ತಿದ್ದುಪಡಿ ಮಾಡಿಸಿಕೊಂಡು ಆಯಾ ನ್ಯಾಯ ಬೆಲೆ ಅಂಗಡಿಯಲ್ಲಿ ಇಕೆವೈಸಿಯನ್ನು ಮಾಡಿಸಿಕೊಳ್ಳಲು ತಿಳಿಸಲಾಗಿದೆ. ಇಕೆವೈಸಿಯನ್ನು ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿಗಳಿಗೆ ಪಡಿತರ ವಸ್ತುಗಳ ಹಂಚಿಕೆ ಸ್ಥಗಿತಗೊಂಡರೆ ಅದಕ್ಕೆ ಆಯಾ ಪಡಿತರ ಚೀಟಿದಾರರೇ ಹೊಣೆಗಾರರಾಗುತ್ತಾರೆಂದು ಎಚ್ಚರಿಕೆ ನೀಡಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Leave a Reply

ಹೊಸ ಪೋಸ್ಟ್‌