MLC Election: ವಿಪ ಚುನಾವಣೆ: ಕೈ ಅಭ್ಯರ್ಥಿಗಳ ಪರ ಸೋಮವಾರ ಎಂ. ಬಿ. ಪಾಟೀಲ‌ ಪ್ರಚಾರ

ವಿಜಯಪುರ: ವಾಯುವ್ಯ(North West) ಶಿಕ್ಷಕರ(Teachers) ಮತ್ತು ಪದವಿಧರ(Graduates) ಕ್ಷೇತ್ರಗಳ(Constituencuez) ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಜೂ. 6ರಂದು ಸೋಮವಾರ ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ.

ನಗರದ ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಲಿರುವ ಅವರು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.

ಸೋಮವಾರ ಬೆ.10ಕ್ಕೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಬೆ.10.30ಕ್ಕೆ ಸಿಕ್ಯಾಬ್ ವಿದ್ಯಾ ಸಂಸ್ಥೆಗಳು, ಬೆ.11.30ಕ್ಕೆ ಪಿಡಿಜೆ ವಿದ್ಯಾ ಸಂಸ್ಥೆಗಳು, ಮ.12ಕ್ಕೆ ಅಂಜುಮನ್ ವಿದ್ಯಾ ಸಂಸ್ಥೆಗಳು, ಮ.12.30ಕ್ಕೆ ದರಬಾರ ವಿದ್ಯಾ ಸಂಸ್ಥೆಗಳು, ಮ.1ಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕ್ಯಾಂಪಸ್ ಹಾಗೂ ಮ.1.30ಗಂ. ಬಂಜಾರಾ ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಿ, ಮತಯಾಚನೆ ಮಾಡಲಿದ್ದಾರೆ.

ಸಂ.4ಕ್ಕೆ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ಶಿಕ್ಷಕ, ಪದವಿಧರ ಸಮಾವೇಶದಲ್ಲಿ ಶಿಕ್ಷಕ, ಪದವಿಧರರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ, ಸಂ. 5ಕ್ಕೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆಯುವ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಂ. ಬಿ. ಪಾಟೀಲ ಅವರ ಕಚೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Leave a Reply

ಹೊಸ ಪೋಸ್ಟ್‌