World Environment Day: ಕೋಟಿ ವೃಕ್ಷ ಅಭಿಯಾನದಡಿ 2000ಕ್ಕೂ ಹೆಚ್ಚು ಹಣ್ಣುಗಳ ಸಸಿ ವಿತರಣೆ

ವಿಜಯಪುರ: ಪರಿಸರ(Environment) ರಕ್ಷಣೆಯು(Protection) ನಮ್ಮೆಲ್ಲರ ಹೊಣೆ(Everyone Responisbility).  ಪ್ರತಿವರ್ಷ ಹೆಚ್ಚೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಸ್ವಸ್ಥ ಸಮಾಜ ಮತ್ತ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂದು ಬಿ ಎಲ್ ಡಿ‌ ಇ ಸಂಸ್ಥೆಯ ನಿರ್ದೇಶಕ(BLDEA Director) ಸಂಗು ಸಜ್ಜನ(Sangu Sajjan) ಹೇಳಿದರು.

ನಗರದ ಬಿ ಎಲ್ ಡಿ‌ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದಲ್ಲಿ ಕೋಟಿ ವೃಕ್ಷ ಅಭಿಯಾನದ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೃಕ್ಷ ಅಭಿಯಾನ ಪ್ರತಿಷ್ಠಾನದ ನಿರ್ದೇಶಕ ಡಿ. ಎಸ್. ಗುಡ್ಡೋಡಗಿ ಮಾತನಾಡಿ, ಯುವಕರು ಪ್ರತಿ ವರ್ಷ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಸಿ ನೆಡುವ ಮೂಲಕ ನಾಡನ್ನು ಹಸಿರಾಗಿ ಮಾಡಬೇಕು.  ಅಲ್ಲದೇ,‌ ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ‌ ಕುರಿತು ತಿಳುವಳಿಕೆ ನೀಡಬೇಕು‌ ಎಂದು ಹೇಳಿದರು.

ಕೋಟಿ ವೃಕ್ಷ ಅಭಿಯಾನದಡಿ ವಿಶ್ವ ಪರಿಸರ ದಿನ ಆಚರಿಸಲಾಯಿತು

 

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ‌ ಅಯ್. ಎಸ್. ಕಾಳಪ್ಪನವರ, ಎಸ್. ಎ. ಪಾಟೀಲ, ಸಂಜಯ ಪಾಟೀಲ, ಭಾಸ್ಕರ ಜೋಶಿ, ಎನ್ ಸಿ ಸಿ ವಿದ್ಯಾರ್ಥಿಗಳು ಹಾಗೂ ಬಿ ಎಲ್ ಡಿ ಇ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ ಈ ಕಾರ್ಯಕ್ರಮ ಸಂಘಟಿಸಿದ್ದರು.

ಡಾ. ವಿ. ಡಿ. ಐಹೊಳಿ ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ. ಎಸ್. ಮದಭಾವಿ ವಂದಿಸಿದರು.

ಈ ಸಂದರ್ಭದಲ್ಲಿ 2000ಕ್ಕೂ ಹೆಚ್ಚು ಹಣ್ಣಿನ ಸಸಿಗಳನ್ನು ವಿತರಣೆ ಮಾಡಲಾಯಿತು.

Leave a Reply

ಹೊಸ ಪೋಸ್ಟ್‌