Rajyasabga Election: ರಾಜ್ಯಸಭೆ ಚುನಾವಣೆ- ಮತದಾನ ಮಾಡಿದ ಸಿಎಂ ಬೊಮ್ಮಾಯಿ

ವಿಜಯಪುರ: ರಾಜ್ಯ ವಿಧಾನ ಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಈ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಹಕ್ಕು ಚಲಾಯಿಸಿದರು.

ರಾಜ್ಯ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆ ಇದಾಗಿದೆ. ವಿಧಾನ ಸಭೆಯಲ್ಲಿರುವ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಹಕ್ಕು ಚಲಾಯಿಸಿದರು.

ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕನ್ನಡ ಚಿತ್ರನಟ ಜಗ್ಹೇಶ ಮತ್ತು ಲೆಹೆರ್ ಸಿಂಗ್ ಸ್ಪರ್ಧಿಸಿದ್ದಾರೆ.

ಕಾಂಗ್ರೆಸ್ ಕೇಂದ್ರ ಮಾಜಿ ಸಚಿವ :ಜೈರಾಂ ರಮೇಶ ಮತ್ತು ಮನ್ಸೂರ್ ಅಲಿಖಾನ್ ಅವರಿಗೆ ಟಿಕೆಟ್ ನೀಡಿದೆ.  ಜೆಡಿಎಸ್ ಉದ್ಯಮಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕನ್ನಡ ಚಿತ್ರಟನ ಜಗ್ಗೇಶ, ಕೇಂದ್ರ ಮಾಜಿ ಸಚಿವ ಜೈರಾಂ ರಮೇಶ ಮೊದಲ ಮೂರು ಸ್ಥಾನಗಳಲ್ಲಿ ಗೆಲ್ಲುವುದು ಖಚಿತವಾಗಿದೆ.  ಆದರೆ, ನಾಲ್ಕನೇ ಸ್ಥಾನಕ್ಕೆ ಲೆಹರ್ ಸಿಂಗ್(ಬಿಜೆಪಿ), ಮನ್ಸೂರ್ ಅಲಿಖಾನ್(ಕಾಂಗ್ರೆಸ್) ಮತ್ತು ಉದ್ಯಮಿ ಕುಪೇಂದ್ರ ರೆಡ್ಡಿ(ಜೆಡಿಎಸ್) ಮಧ್ಯೆ ಹಣಾಹಣಿ ನಡೆಯುತ್ತಿದೆ.

Leave a Reply

ಹೊಸ ಪೋಸ್ಟ್‌