Voting Percentage: ಎಂ ಎಲ್ ಸಿ ಚುನಾವಣೆ: ಬಸವ ನಾಡಿನಲ್ಲಿ ಶಿಕ್ಷಕರ ಮತಕ್ಷೇತ್ರಕ್ಕೆ ಶೇ.80.15, ಪದವೀಧರ ಮತಕ್ಷೇತ್ರಕ್ಕೆ ಶೇ.62.36ರಷ್ಟು ಮತದಾನ

ವಿಜಯಪುರ: ವಿಧಾನ ಪರಿಷತ ವಾಯುವ್ಯ ಶಿಕ್ಷಕ ಮತ್ತು ಪದವೀಧರರ ಮತಕ್ಷೇತ್ರಗಳಿಗೆ ನಡೆದ ಚುನಾವಣೆ ವಿಜಯಪುರ ಜಿಲ್ಲಾದ್ಯಂತ ಶಾಂತಿಯುತವಾಗಿ ಮುಕ್ತಾಯವಾಗಿದೆ.  ಶಿಕ್ಷಕರ ಕ್ಷೇತ್ರಕ್ಕೆ ಶೇ.80.15ರಷ್ಟು ಮತ್ತು ಪದವೀಧರ ಕ್ಷೇತ್ರಕ್ಕೆ ಶೇ. 62.36 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ. ಬೆಳಿಗ್ಗೆ ನಿಧಾನವಾಗಿ ಆರಂಭವಾದ ಮತದಾನ ಸಂಜೆಯ ವೇಳೆಗೆ ಬಿರುಸು ಪಡೆಯಿತು.  ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಬೆಳಗಿನ 8 ರಿಂದ 10 ಗಂಟೆವರೆಗೆ ಶೇ.11.36ರಷ್ಟು, […]

Kumani Honour: 49ನೇ ವಯಸ್ಸಿನಲ್ಲಿ ಸರಕಾರಿ ನೌಕರಿ ಗಿಟ್ಟಿಸಿದ ಕುಮಾನಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ನಗರದ ಜಲನಗರ ನಿವಾಸಿ ಮತ್ತು ಗುತ್ತಿಗೆದಾರರಾಗಿದ್ದ ರಾಜಕುಮಾರ ಸಿದ್ರಾಮಪ್ಪ ಕುಮಾನಿ ಅವರು ಈಗ 49ನೇ ವಯಸ್ಸಿನಲ್ಲಿ ಸರಕಾರಿ ನೌಕರಿ ಗಿಟ್ಟಿಸಿದ್ದಾರೆ.   2007ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ಬರೆದಿದ್ದ ಅವರು ಪಾಸಾಗಿದ್ದರೂ, ಅಂದಿನ ಆಡಳಿತ ಮಾಡಿದ ತಪ್ಪಿನಿಂದಾಗಿ ನೌಕರಿಯಿಂದ ವಂಚಿತರಾಗಿದ್ದರು.  ಈ ಹಿನ್ನೆಲೆಯಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಅವರು ನೌಕರಿ ಪಡೆಯಲು ಹೋರಾಟ ನಡೆಸಿದ್ದರು.  2021ರಲ್ಲಿ ಹೈಕೋರ್ಟ್ ಈ ಪ್ರಕರಣ ಇತ್ಯರ್ಥಗೊಳಿಸಿ ಅಂದಿನ ಆಡಳಿತ ಮಾಡಿದ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜಕುಮಾರ ಸಿದ್ರಾಮಪ್ಪ ಕುಮಾನಿ ಸೇರಿದಂತೆ […]

MLC Voting: ಬಸವ ನಾಡಿನಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ- ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಎಂ ಎಲ್ ಸಿ

ವಿಜಯಪುರ: ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ಮತದಾನ ಬಿಸಿಲೇರುತ್ತಿದ್ದಂತೆ ವೇಗ ಪಡೆದುಕೊಂಡಿದೆ. ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ವಿಜಯಪುರ ನಗರದಲ್ಲಿರುವ ಸರಕಾರಿ‌ ಬಾಲಕರ ಪ್ರೌಢ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 120 ರಲ್ಲಿ ಮತ ಚಲಾಯಿಸಿದ್ದಾರೆ. ಬೆಳಿಗ್ಗೆ ಮತಗಟ್ಟೆಗೆ ಆಗಮಿಸಿದ ಅವರು ಪಾಳಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮತಗಟ್ಟೆಯಿಂದ ಹೊರ ಬಂದ ಅವರು ಮತ ಹಾಕಿರುವ ಕುರುಹಾಗಿ ತಮ್ಮ ಬೆರಳಿಗೆ ಹಾಕಲಾಗಿರು ಶಾಹಿಯ ಗುರುತನ್ನು […]

Siddhasiri GB: ಸಿದ್ಧಸಿರಿ ಸೌಹಾರ್ದ 16 ವರ್ಷಗಳಲ್ಲಿ ರೂ. 1500 ಕೋಟಿ ಠೇವಣಿ ಪೂರೈಸಿದ ಹೆಮ್ಮೆ- ಯತ್ನಾಳ

ವಿಜಯಪುರ: ರಾಜ್ಯದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಹೆಸರು ಮಾಡಿರುವ ಸಿದ್ಧಸಿರಿ ಸೌಹಾರ್ದ 2023 ಕ್ಕೆ ಮಿಶನ್ ರೂ. 3000 ಕೋ. ಠೇವಣಿ ಪೂರೈಸಬೇಕು ಎೞದು ಸಿಬ್ಬಂದಿಗಳಿಗೆ ಶಾಸಕ ಮತ್ತು ಸೌಹಾರ್ದದ ಅಧ್ಯಕ್ಷ ಬಸನಗಡೌ ಪಾಟೀಲ ಯತ್ನಾಳ ಸೂಚನೆ ನೀಡಿದ್ದಾರೆ.  ವಿಜಯಪುರದಲ್ಲಿ ನಡೆದ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದ 2021-22ನೇ ವರ್ಷದ 16ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಈ ವರ್ಷದ ಅವಧಿಯಲ್ಲಿ ರೂ. 6.66 ಕೋ. ಲಾಭ ಗಳಿಸಿ, ಸಹಕಾರಿಯ ಸದಸ್ಯರಿಗೆ ಶೇ […]

MLC Election: ಬಸವ ನಾಡಿನಲ್ಲಿ ಮಂದಗತಿಯಲ್ಲಿ ಶಾಂತಿಯುತವಾಗಿ ಸಾಗಿರುವ ಮತದಾನ- ಡಿಸಿ, ಎಸ್ಪಿ ಪರಿಶೀಲನೆ

ವಿಜಯಪುರ: ವಿಧಾನ‌ ಪರಿಷತ್ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮತದಾನ ಆರಂಭವಾಗಿದೆ. ಮತದಾರರು ನಿಧಾನವಾಗಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದು ಮತದಾನ ಮಂದಗತಿಯಲ್ಲಿ ಸಾಗಿದೆ‌. ವಿಜಯಪುರ ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 8 ರಿಂದ ಆರಂಭವಾಗಿರುವ ಮತದಾನ ಸಂಜೆ 05 ಗಂಟೆಯ ವರೆಗೆ ನಡೆಯಲಿದೆ. ಮತ ಎಣಿಕೆ ಕಾರ್ಯವು ಬೆಳಗಾವಿಯ ಕ್ಲಬ್‌ ರೋಡ್‌‌ ನಲ್ಲಿರುವ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಜೂನ್ 15 ರಂದು ನಡೆಯಲಿದೆ. […]