Agnipath Oppose: ಗುಮ್ಮಟ ನಗರಿಯಲ್ಲಿ‌ ಕೈ ಕಾರ್ಯಕರ್ತರ ಪ್ರತಿಭಟನೆ

ವಿಜಯಪುರ: ದೇಶ ಕಾಯುವ ಯೋಧರನ್ನು ಕೇಂದ್ರ ಸರಕಾರ ಬಿಜೆಪಿ ಗುತ್ತಿಗೆ ಕಾರ್ಮಿಕರನ್ನಾಗಿ ಮಾಡಲು ಹೊರಟಿದೆ ಎಂದು ಆರೋಪಿಸಿ ಅಗ್ನಿಪಥ ಯೋಜನೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಗುಮ್ಮಟ ನಗರಿ ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ್ ನೇತೃತ್ವದಲ್ಲಿ ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯಪುರ ನಗರದ ಡಾ. ಬಿ. ಆರ್. ಅಂಬೇಡ್ಕರ ಚೌಕಿನಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್‌ಹಮೀದ ಮುಶ್ರೀಫ್, ಕೇಂದ್ರದ ಬಿಜೆಪಿ […]

Temple Clean: ಸ್ವಾಮೀಜಿ ನೇತೃತ್ವ, ಯುವಕರ, ಭಕ್ತರ ಸಹಭಾಗಿತ್ವ- ಸ್ವಚ್ಛವಾಯಿತು ಕೃಷ್ಣಾ ತೀರದ ಚಂದ್ರಭಾಗಾ ಗುಡಿಯ ಪರಿಸರ

ವಿಜಯಪುರ: ಮೈಲಿಗೆ ತೊಳೆಯುವ ಹೆಸರಿನಲ್ಲಿ ಭಕ್ತರು ನದಿ ತೀರಕ್ಕೆ ತೆರಳಿ, ತಾವು ಧರಿಸಿದ ಮತ್ತು ಈ ಹಿಂದೆ ತ್ಯಜಿಸಿದ ಬಟ್ಟೆ‌ ಮತ್ತೀತರ ವಸ್ತುಗಳನ್ನು ಹೊಳೆ ನೀರಿಗೆ ಎಸೆಯುವುದು ಹೆಚ್ಚಾಗುತ್ತಿದೆ. ತಾವು ಪವಿತ್ರರಾಗುವ ಹೆಸರಿನಲ್ಲಿ ಭಕ್ತರು ನದಿಗಳನ್ನು ಮಲೀನಗೊಳಸುವುದು ನದಿ ತೀರದ ಗ್ರಾಮಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲೂ ನದಿ ತೀರದಿಂದ ದೇವಸ್ಥಾನಗಳು ಅಣತಿ ದೂರದಲ್ಲಿದ್ದರೆ ಸಾಕು ತ್ಯಾಜ್ಯಗಳನ್ನು ನೀರಿಗೆ ಎಸೆಯುವ ಕಾರ್ಯ ಹೆಚ್ಚಾಗಿಯೇ ನಡೆಯುತ್ತದೆ. ಇದೇ ರೀತಿ ಉತ್ತರ ಕರ್ನಾಟಕದ ಜೀವ ನದಿ ಕೃಷ್ಣಾ ತೀರದಲ್ಲಿ ಹರಡಿದ್ದ […]