Yatnal Visit: ವಿಜಯಪುರ ನಗರದ ಆಶ್ರಮ ರಸ್ತೆಯ ಬಳಿ ಕಲ್ಲಿನ ಖಣಿ ರಸ್ತೆ ಅಗಲೀಕರಣ ಸ್ಥಳ ವೀಕ್ಷಿಸಿದ ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಜೂನ್ 28ರಂದು ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯೊಂದರ ಸ್ಥಳ ವೀಕ್ಷಣೆ ನಡೆಸಿದರು.

ವಿಜಯಪುರ ನಗರದ ಆದರ್ಶ ನಗರ ಬಳಿ ಇರುವ ಕಲ್ಲಿನ ಖಣಿ ಪ್ರದೇಶವನ್ನು ಶಾಸಕ ಯತ್ನಾಳ ವೀಕ್ಷಿಸಿದರು

ಈ ವೇಳೆ ಮಾತನಾಡಿದ ಶಾಸಕರು, ಲೋಕೋಪಯೋಗಿ ಇಲಾಖೆಯಿಂದ 450 ಲಕ್ಷ ರೂ.ಮಂಜೂರಿಯಾದ, ಆದರ್ಶ ನಗರದ ಶ್ರೀ ಸಿದ್ದೇಶ್ವರ ಬ್ಯಾಂಕ್ ಎದುರಿನ ಕಲ್ಲಿನ ಖಣಿ ತುಂಬಿಸಿ ರಸ್ತೆ ಅಗಲೀಕರಣ ಮಾಡುವ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆದಿದ್ದು, ಸದರಿ ಕಾಮಗಾರಿ ಕುರಿತು ಮತ್ತು ಅಲ್ಲಿಂದ ಹೊಸ ಸಂಚಾರ ಮಾರ್ಗ ರಚನೆ ಕುರಿತು ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮಣ ಜಾದವ, ನಾಡಗೌಡ, ನಾಗರಿಕರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಆರ್.ಕೆ.ಮುಜುಮದಾರ, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

Leave a Reply

ಹೊಸ ಪೋಸ್ಟ್‌