New DySP: ಸಿದ್ಧೇಶ್ವರ ವಿಜಯಪುರ ನೂತನ ಡಿವೈಎಸ್ಪಿ

ವಿಜಯಪುರ: ಸಿದ್ಧೇಶ್ವರ ಅವರನ್ನು ವಿಜಯಪುರ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಸಿದ್ಧೇಶ್ವರ ಅವರು ಈ ಮುಂಚೆ ವಿಜಯಪುರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಸಿಂದಗಿ ಸಿಪಿಐ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ವಿಜಯಪುರ ನೂತನ ಡಿವೈಎಸ್ಪಿ ಸಿದ್ಧೇಶ್ವರ

ಈವರೆಗೆ ಸಿದ್ಧೇಶ್ವರ ಅವರು ಬೆಂಗಳೂರಿನಲ್ಲಿ ಲೋಕಾಯುಕ್ತ ಕಚೇರಿಯಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಈಗ ವಿಜಯಪುರ ಡಿವೈಎಸ್ಪಿಯಾಗಿ ಸರಕಾರ ವರ್ಗಾವಣೆ ಮಾಡಿದೆ.

ಸಿದ್ಧೇಶ್ವರ ಅವರ ಲೋಕಾಯುಕ್ತ ನಿವೃತ್ತ ಎಸ್ಪಿ ಕಾಶೀನಾಥ ತಳಕೇರಿ ಅವರ ಅಳಿಯರಾಗಿದ್ದಾರೆ. ಅಲ್ಲದೇ, ಯುವ ಉದ್ಯಮಿ ಸಂತೋಷ ತಳಕೇರಿ ಅವರ ಮಾವನಾಗಿದ್ದಾರೆ.

ಈವರೆಗೆ ವಿಜಯಪುರ ಡಿವೈಎಸ್ಪಿಯಾಗಿಸ್ದ ಲಕ್ಷ್ನಿನಾರಾಯಣ ಕೆ. ಸಿ. ಅವರನ್ನು ಸರಕಾರ ಸಿಐಡಿಗೆ ವರ್ಗಾವಣೆ ಮಾಡಿದೆ.

ಲೋಕಾಯುಕ್ತ ಡಿವೈಎಸ್ಪಿ ಸೇವೆಯಿಂದ ಬಿಡುಗಡೆಯಾದ ಬಳಿಕ ಸಿದ್ಧೇಶ್ವರ ಅವರು ವಿಜಯಪುರ ಡಿವೈಎಸ್ಪಿ ಯಾಗಿ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿದೆ.

Leave a Reply

ಹೊಸ ಪೋಸ್ಟ್‌