Fishery Training: ಭೂತ್ನಾಳ ಬಳಿ ವೈಜ್ಞಾನಿಕ ಮೀನು ಕೃಷಿ ತರಬೇತಿ, ಮೀನು ಮರಿಗಳ ವಿತರಣೆ ಕಾರ್ಯಕ್ರಮ

ವಿಜಯಪುರ: ರಾಷ್ಟ್ರೀಯ ಮತ್ಸ್ಯ ಕೃಷಿಕರ ದಿನಾಚರಣೆ ಅಂಗವಾಗಿ ವಿಜಯಪುರ ನಗರದ ಹೊರ ವಲಯದಲ್ಲಿ ಭೂತ್ನಾಳ ಕೆರೆಯ ಬಳಿ ಇರುವ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ವೈಜ್ಞಾನಿಕ ಮೀನು ಕೃಷಿ ತರಬೇತಿ ಮತ್ತು ಮೀನು ಮರಿಗಳ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಇರ್ಫಾನ್ ಬಂಗಿ ಮಾತನಾಡಿ, ಮೀನು ಕೃಷಿ ಅತ್ಯಂತ ಲಾಭದಾಯಕವಾಗಿದೆ.  ಸ್ಥಳೀಯವಾಗಿ ದೊರೆಯುವ ನೀರಿನ ಸೌಲಭ್ಯಗಳನ್ನು ಬಳಸಿಕೊಂಡು ಇತ್ತೀಚೆಗೆ ಬಂದಿರುವ ನವೀನ ತಂತ್ರಜ್ಞಾನಗಳಾದ ಬಯಾಫ್ಲಾಕ್ ಮತ್ತು ಆರ್ಎಎಸ್ ಮೂಲಕ […]