Ganja Seize: ರಾಜಧಾನಿಯಲ್ಲಿ ರೂ. 24 ಲಕ್ಷ ಮೌಲ್ಯದ ಒಣಗಿದ ಹೈಬ್ರಿಡ್ ಗಾಂಜಾ ವಶ- ಓರ್ವನ ಬಂಧನ

ಬೆಂಗಳೂರು: ಬೆಂಗಳೂರಿನ ಮಹದೇವಪುರ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಅಬಕಾರಿ ಜಂಟಿ ಆಯುಕ್ತ ನಾಗೇಶ್ ಎ. ಎಲ್. ಮತ್ತು ಉಪಆಯುಕ್ತ ವೀರಣ್ಣ ಬಾಗೇವಾಡಿ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಇನ್ಸಪೆಕ್ಟರ್ ಎ. ಎ. ಣುಜಾವರ ಮತ್ತು ಸಿಬ್ಬಂದಿ ಬೆಂಗಳೂರಿನಲ್ಲಿ ಬರುವ ವಲಯ 30 ರ ವ್ಯಾಪ್ತಿಯ ಗಂಗಾಶೆಟ್ಟಿ ಕೆರೆ ಹತ್ತಿರ ಅಬಕಾರಿ ದಾಳಿ ನಡೆಸಿದ್ದಾರೆ.

ರೂ. 24 ಮೌಲ್ಯದ ಬೈಬ್ರಿಡ್ ಡ್ರೈ ಗಾಂಜಾ ವಶಪಡಿಸಿಕೊಂಡಿರುವ ಮಹಾದೇವಪುರ ಅಬಕಾರಿ ಪೊಲೀಸರು

ಈ ಸಂದರ್ಭದಲ್ಲಿ ಆಂಧ್ರ ಪ್ರದೇಶದ ವಿಶಾಖ ಪಟ್ಟಣ ಮೂಲದ ಚಟಲಾ ದಿನೇಶ ರೆಡ್ಡಿ ಎಂಬಾತನನ್ನು ಬಂಧಿಸಿ 33 ಕೆಜಿ ಒಣಗಿದ ಹೈಬ್ರಿಡ್ ಗಾಂಜಾ ಮತ್ತು ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ.  ಅಬಕಾರಿ ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾ ಮೌಲ್ಯ ರೂ. 24 ಲಕ್ಷ ಎಂದು ಅಂದಾಜಿಸಲಾಗಿದೆ.

 

ಆರೋಪಿ ವಿರುದ್ಧ ಎನ್ ಡಿ ಪಿ ಎಸ್ ಕಾಯಿದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

 

Leave a Reply

ಹೊಸ ಪೋಸ್ಟ್‌