Journalism Award: ಡಾ. ಓಂಕಾರಗೌಡ ಕಾಕಡೆ ಸೇರಿ 10 ಜನರಿಗೆ ಅವರಿಗೆ ಎಸ್‌ಪಿಎನ್‌ಎಂಎ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ

ವಿಜಯಪುರ: ಬೆಂಗಳೂರಿನ ಪ್ರತಿಷ್ಛಿತ ಸೆಂಟ್ ಪೌಲ್ಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವನಹ ವಿಭಾಗ ಮಾಧ್ಯಮ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರಗೌಡ ಕಾಕಡೆ ಅವರಿಗೆ ಮಾಧ್ಯಮ ಪ್ರಶಸ್ತಿ ಘೋಷಣೆ ಮಾಡಿದೆ.

ಡಾ. ಓಂಕಾರಗೌಡ ಕಾಕಡೆ ಅವರ ಜೊತೆಗೆ ಹಿರಿಯ ಪತ್ರಕರ್ತರಾದ ಡಾ. ಎ. ಎನ್. ಯಲ್ಲಪ್ಪ ರೆಡ್ಡಿ, ವಿಶ್ವೇಶ್ವರ ಭಟ್, ಡಾ. ಬಿ. ಕೆ. ರವಿ ಸೇರಿದಂತೆ 10 ಜನರಿಗೆ ಪ್ರಶಸ್ತಿ ಘೋಷಣೆ ಮಾಡಿದೆ.  ಸೆಂಟ್ ಪೌಲ್ ಕಾಲೇಜು 1914ರಿಂದ ಜನಸೇವೆಯಲ್ಲಿ ತೊಡಗಿದ್ದು, ಇದೇ ಮೊದಲ ಬಾರಿಗೆ ಮಾಧ್ಯಮ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಘೋಷಣೆ ಮಾಡಿದೆ.

Leave a Reply

ಹೊಸ ಪೋಸ್ಟ್‌