ADGP Alokkumar: ಎಡಿಜಿಪಿ ಅಲೋಕ್ ಕುಮಾರ ಜು. 19 ಚಡಚಣ, ಜು. 20 ರಂದು ವಿಜಯಪುರ ಪ್ರವಾಸ, ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ವಿಜಯಪುರ: ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ ಅವರು ಜು. 19 ಮತ್ತು 20 ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದು, ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳಲಿದ್ದಾರೆ. 

ಜು. 19 ರಂದು ಸಂಜೆ 6ಕ್ಕೆ ಚಡಚಣ ಪೊಲೀಸ್ ಠಾಣೆಗೆ ಭೇಟಿ ನೀಡಲಿರುವ ಅವರು ಸಾರ್ವಜನಿಕರ ಕುಂದು ಕೊರತೆ ಆಲಿಸಿ ಅಹವಾಲು ಸ್ವೀಕಾರ ಮಾಡಲಿದ್ದಾರೆ.

ಜು. 20 ರಂದು ಬೆ. 8ಕ್ಕೆ ವಿಜಯಪುರ ಜಿಲ್ಲಾ ಪೊಲೀಸ್, ಕವಾಯತು ಮೈದಾನದಲ್ಲಿ ಪೊಲೀಸ್ ಕವಾಯತು ಪರಿವೀಕ್ಷಣೆ ಮಾಡಲಿದ್ದಾರೆ.  ಅಲ್ಲದೇ, ಬೆ. 11ಕ್ಕೆ ಜಿಲ್ಲಾ ಪೊಲೀಸ್ ಚಿಂತನ ಹಾಲ್‍ದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಅಹವಾಲು ಸ್ವೀಕರಿಸಲಿದ್ದಾರೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ಕಚೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Leave a Reply

ಹೊಸ ಪೋಸ್ಟ್‌