Badminton Tournament: ಉದಯಶ್ರೀ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಬ್ಯಾಡ್ಮಿಂಟನ್ ಟೂರ್ನಿ- ವಿಜೇತರಿಗೆ ಬಹುಮಾನ ವಿತರಣೆ

ವಿಜಯಪುರ: ನಗರದ ಉದಯಶ್ರೀ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಕ್ರೀಡಾಪಟುಗಳಿಗಾಗಿ ಆಹ್ವಾನಿತ ಬ್ಯಾಡ್ಮಿಂಟನ್ ಟೂರ್ನಿ ನಡೆಯಿತು.

ವಿಜಯಪುರ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ದಿ. ಶ್ರೀ ಪ್ರಭುದೇವ ಗಡಶೆಟ್ಟಿ ಇವರ ಸ್ಮರಣಾರ್ಥ ಈ ಟೂರ್ನಿ ಆಯೋಜಿಸಲಾಗಿತ್ತು. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 78 ಸ್ಪರ್ಧಿಗಳು ಇದರಲ್ಲಿ ಪಾಲ್ಗೊಂಡರು. ‌ ವಿಜಯಪುರ‌ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷ ವೀರೇಂದ್ರ ಪಾಟೀಲ ಪಂದ್ಯಾವಳಿ ಉದ್ಘಾಟಿಸಿದರು.

ಬ್ಯಾಡ್ಮಿಂಟನ್ ಪಂದ್ಯಾವಳಿಯ ವಿಜೇತ ಕ್ರೀಡಾಪಟಗಳೊಂದಿಗೆ ಸಂಘಟಕರು

ಈ ಟೂರ್ನಾಮೆಂಟಿನಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ‌ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಈ ಣಂದರ್ಭದಲ್ಲಿ ಟೂರ್ನಿಯ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ವಿಜಯಪುರ ಬ್ಯಾಡ್ಮಿಂಟನ್ ಕ್ಲಬ್ ನ ಅಧ್ಯಕ್ಷ ಶಿವಕುಮಾರ ಗಡಶೆಟ್ಟಿ ಕೃತಜ್ಞತೆ ಸಲ್ಲಿಸಿದರು.

ಟೂರ್ನಿಯ ವಿಜೇತರು

15 ವರ್ಷದೊಳಗಿನ‌ ಬಾಲಕರ ವಿಭಾಗ

1. ಆದಿತ್ಯ(ಮುಧೋಳ)- ಪ್ರಥಮ
2. ಶುಭಂ (ವಿಜಯಪುರ)- ದ್ವಿತೀಯ

15 ವರ್ಷದೊಳಗಿನ‌ ಬಾಲಕಿಯರ ವಿಭಾಗ

1. ಪ್ರತೀಕಾ(ವಿಜಯಪುರ)- ಪ್ರಥಮ,

2. ಮಾನ್ಯತಾ(ವಿಜಯಪುರ)- ದ್ವಿತೀಯ.

ಪುರುಷರ ಡಬಲ್ಸ್ ವಿಭಾಗ

1. ಈಶ್ವರ್ ಮತ್ತು ಮಂಜುನಾಥ್ ಹೊನಮಟ್ಟಿ(ವಿಜಯಪುರ)- ಪ್ರಥಮ,

2. ವಿರುಪಾಕ್ಷ ಮತ್ತು ಇರ್ಫಾನಖಾನ (ಬಾಗಲಕೋಟೆ)- ದ್ವಿತೀಯ.

ಉತ್ತಮ ಆಟಗಾರ ಪ್ರಶಸ್ತಿ

ಆದಿತ್ಯ ಸಾವಳಗಿ ಮತ್ತು ವೇದಾಂತ ಜಾಧವ(ವಿಜಯಪುರ).

Leave a Reply

ಹೊಸ ಪೋಸ್ಟ್‌