BJP Mutalik: ಬಿಜೆಪಿ, ಪಿಎಫ್ಐ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ ಮುತಾಲಿಕ್ ಕಾಂಗ್ರೆಸ್ ಹೇಳಿಕೆಗೆ ಬೆಂಬಲ ನೀಡಿದ್ದೇಕೆ ಗೊತ್ತಾ?

ವಿಜಯಪುರ: ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪ ಶೇ. 100 ರಷ್ಟು ಸತ್ಯ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದ್ದಾರೆ.

ವಿಜಯಪುರದಲ್ಲಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೆರೂರು ಕೋಮು ಗಲಭೆ ಸಂಬಂಧ ಬಂಧಿತರಾಗಿರುವ ಆರೋಪಿಗಳನ್ನು ಭೇಟಿ ಮಾಡಿದ ಅವರು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಾಂಗ್ರೆಸ್ಸಿನ ಮುಸ್ಲಿಂ ಓಟ್ ಬ್ಯಾಂಕ್ ಒಡೆಯೋದು ಎಸ್ ಡಿ ಪಿ ಐ ಪ್ಲ್ಯಾನ್ ಆಗಿದೆ.  ಬಿಜೆಪಿಗೆ ಅಧಿಕಾರ ಮುಖ್ಯವಾಗಿದೆ.  ದೇಶದ ಸುರಕ್ಷತೆ ಅದಕ್ಕೆ ಮುಖ್ಯ ಅಲ್ಲ.  ಹಿಂದೂ ಕಾರ್ಯಕರ್ತರ ಸುರಕ್ಷತೆ ಇವರಿಗೆ ಬೇಕಾಗಿಲ್ಲ.  ಎಸ್ ಡಿ ಪಿ ಐ ಮೂಲಕ ಅಧಿಕಾರಕ್ಕೆ ಬಂದು ಮೆರೆಯಬೇಕು ಎಂಬುದು ಬಿಜೆಪಿಯ ಪ್ಲ್ಯಾನ್ ಆಗಿದೆ.  ಮುಂದಿನ ತಿಂಗಳಿನಿಂದ ಎಸ್ ಡಿ ಪಿಐ ಮತ್ತು ಪಿ ಎಫ್ ಐ ಬ್ಯಾನ್ ಮಾಡುವಂತೆ ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬಿಜೆಪಿ ವಿರುದ್ದ ಹರಿಹಾಯ್ದ ಪ್ರಮೋದ ಮತಾಲಿಕ, ಎಸ್ ಡಿ ಪಿಐ ಮತ್ತು ಪಿ ಎಫ್ ಐ  ಕ್ಯಾನ್ಸರ್ ಇದ್ದ ಹಾಗೆ.  ಇವರು ದೇಶದ್ರೋಹಿಗಳು, ಟೆರರಿಸ್ಟ್ಗಳು.  ದೇಶದ ಎಲ್ಲ ರಾಜ್ಯಗಳಿಗೆ ವ್ಯಾಪಿಸಿದ್ದಾರೆ.  ಇವರಿಗೆ ದೇಶ, ಸಂವಿಧಾನ, ನೀತಿ, ನಿಯಮ ಇಲ್ಲ.  ಕುರಾನ್ ಆಧಾರದ ಮೇಲೆ ಈ ಸಂಘಟನೆಗಳು ನಡೆಯುತ್ತವೆ.  ಈ ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಇದೇ ಬಿಜೆಪಿ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಬ್ಯಾನ್ ಮಾಡಲು ಒತ್ತಡ ಹಾಕಿತ್ತು.  ಈ ಬಗ್ಗೆ ದಾಖಲೆ ನನ್ನ ಬಳಿ ಇವೆ.  ಬಿಜೆಪಿಯವರೆ ಕೇಂದ್ರಕ್ಕೆ ಹೋಗಿ ಬ್ಯಾನ್ ಮಾಡಲು ಮನವಿ ಸಲ್ಲಿಸಿದ್ದರು.  ಈಗ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಇವರದೇ ಸರಕಾರ ಇದ್ದಾಗ ಬಾಯಿ ಮುಚ್ಚಿಕೊಂಡಿದ್ದಾರೆ.  ಈಗ ಬ್ಯಾನ್ ಬಗ್ಗೆ ಮಾತಾಡುತ್ತಿಲ್ಲ ಎಂದು ಅವರು ಹರಿಹಾಯ್ದರು.

ಹಿಂದೂಗಳಿಗೆ ರಕ್ಷಣೆ ಇಲ್ಲ

ಹಿಂದೂಗಳ ರಕ್ಷಣೆ ವಿಚಾರದಲ್ಲಿ ರಾಜ್ಯ ಸರಕಾರ ವಿಫಲವಾಗಿದೆ.  ನೂರಕ್ಕೆ ನೂರು ರಾಜ್ಯ ಸರಕಾರ ವಿಫಲವಾಗಿದೆ.  ಹರ್ಷನ ಕೊಲೆ ಬಳಿಕ ಮತ್ತೆ ಐದು ಬಾರಿ ಹಿಂದೂಗಳ ಮೇಲೆ ಹಲ್ಲೆಯಾಗಿದೆ.  ಶಿವಮೊಗ್ಗ ಕೋಟೆ ಹೊಕ್ಕು ಹೊಡೆಯುತ್ತಿದ್ದಾರೆ.  ಶಿವಮೊಗ್ಗ ಮಾಜಿ ಸಿಎಂ, ಹಾಲಿ ಗೃಹ ಮಂತ್ರಿ ಜಿಲ್ಲೆ.  ಅಲ್ಲಿಯೇ ಹೊಕ್ಕು ಹೊಡೆಯುತ್ತಿದ್ದಾರೆ.  ಎಲ್ಲ ಶಾಸಕರು ಬಿಜೆಪಿಯವರು.  ಇದು ಸರಕಾರದ ವಿಫಲತೆ ಅಲ್ಲದೆ ಇನ್ನೇನು.? ಎಂದು ಪ್ರಶ್ನಿಸಿದ ಅವರು, ಹರ್ಷನ ಹಂತಕರು ಜೈಲಿಂದಲೇ ವಿಡಿಯೋ ಕಾಲ್ ಮಾಡಿ ಹೆಂಡ್ತಿ-ಮಕ್ಕಳ ಜೊತೆಗೆ ಮಾತಾಡ್ತಾರೆ.  ಇದು ಎಂಥಹ ವ್ಯವಸ್ಥೆ? ಜೈಲು, ಲಾಡ್ಜಿಂಗ್ ಆಂಡ್ ಬೋರ್ಡಿಂಗ್ ಎಂಬಂತಾಗಿದೆ ಎಂದು ಕಿಡಿ ಕಾರಿದ ಪ್ರಮೋದ ಮುತಾಲಿಕ, ಇದಿರಿಂದ ಹರ್ಷನ ತಾಯಿಗೆ ಹೇಗಾಗಿರಬೇಡ? ಮಗನ ಕೊಲೆ ಮಾಡಿದವರು ಜೈಲಿನಿಂದ ಆನಂದದಿಂದ ಮಾತನಾಡುತ್ತಾರೆ ಎಂದರೆ ಆ ತಾಯಿಗೆ ಹೇಗಾಗಿರಬೇಡ? ಬೆಂಗಳೂರಿನ ಅದೇ ಜೈಲಿನಲ್ಲಿ ಪಾಕಿಸ್ತಾನಿಗಳಿದ್ದಾರೆ.  ಟೆರರಿಸ್ಟ್ ಇದ್ದಾರೆ.  ಮುಸ್ಲಿಂ ಗೂಂಡಾಗಳಿದ್ದಾರೆ. ಅವರು ಪಾಕಿಸ್ತಾನಕ್ಕೆ ಹೀಗೆ ಮಾತನಾಡುತ್ತಿರಬಹುದು? ಇದು ರಾಜ್ಯ ಸರಕಾರದ ವೈಫಲ್ಯ.  ರಾಜ್ಯ ಸರಕಾರ ಎಚ್ಚರಿಕೆಯಿಂದ ಇರಬೇಕು.  ಹೀಗೆ ಆದ್ರೆ ಮುಂದೆ ಸರಕಾರಕ್ಕೆ ಹಿಂದೂ ಸಮಾಜ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ಅವರು ಹೊರ ಹಾಕಿದರು.

ಕೆರೂರು ಕೋಮು ಗಲಭೆ ವಿಚಾರ

ಕೆರೂರು ಕೋಮು ಗಲಭೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೆರೂರು ಘಟನೆಯನ್ನ ಖಂಡಿಸುತ್ತೇನೆ.  ಒಬ್ಬ ಭಟ್ಕಳದ ಮಹಿಳೆ, ಬುರ್ಕಾನಲ್ಲಿ ಚಾಕೂ ತಂದು ಇರಿದಿದ್ದಾಳೆ.  ಭಟ್ಕಳದ ಮೂಲಕ ಇಸ್ಲಾಮಿಕ್ ಮತಾಂಧತೆ ಹರಡುತ್ತಿದೆ ಎಂಬುದಕ್ಕೆ ಈ ಮಹಿಳೆಯ ಕುಕೃತ್ಯ ಸಾಕ್ಷಿಯಾಗಿದೆ.  ಅಷ್ಟೇ ಅಲ್ಲ, ಭಟ್ಕಳದಲ್ಲಿ ಇನ್ನೂ ಇದು ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.  ಹಿಂದೂ ಹುಡುಗಿಯರನ್ನು ಚುಡಾಯಿಸುವುದನ್ನು ತಡೆಯಲು ಹೋದ ಸಂದರ್ಭದಲ್ಲಿ ನಡೆದ ಘಟನೆ ಇದಾಗಿದೆ.  ಹಿಂದೂ ಹುಡುಗಿರಯನ್ನ ಚುಡಾಯಿಸೊದನ್ನ ತಡೆಯಬಾರದಾ? ಹಿಂದೂ ಹುಡುಗಿರಯರು, ಮಹಿಳೆಯರ ರಕ್ಷಣೆ ನಮ್ಮ ಹೊಣೆಯಾಗಿದೆ.  ಹಿಂದೂ ಮಹಿಳೆಯರ ರಕ್ಷಣೆ ನಾವೇ ಮಾಡಬೇಕು.  ಅದು ನಮ್ಮ ಕರ್ತವ್ಯ ಕೂಡ ಆಗಿದೆ.  ಮುಸ್ಲಿಂ ಕಿಡಿಗೇಡಿಗಳ ಪುಂಡಾಟಿಕೆ ಇನ್ನು ಮುಂದೆ ನಡೆಯುವುದಿಲ್ಲ.  ಮುಸ್ಲಿಂರ ಗೂಂಡಾಗಿರಿ ಇನ್ನು ನಡೆಯುವುದಿಲ್ಲ.  ಹಿಂದೂ ಸಮಾಜ ಜಾಗೃತಿಯಾಗಿ ಎಂದ ಅವರು ಹೇಳಿದರು.

ಹುಷಾರಾಗಿರಿ.  ನಿಮ್ಮ ಪಾಡಿಗೆ ನೀವಿರಿ.  ಗಲಭೆ, ಕೊಲೆ, ಹಿಂದೂಗಳನ್ನ ಕೆಣಕೋದು ಇನ್ನು ನಡೆಯುವುದಿಲ್ಲ.  ಇದಕ್ಕೆ ಹಿಂದೂ ಸಮಾಜ ಉತ್ತರ ಕೊಡುತ್ತದೆ.  ಸಂವಿಧಾನದ ಆಧಾರದ ಮೇಲೆ ದೇಶ ನಡೆಯುತ್ತಿದೆ.  ಡಾ. ಬಿ. ಆರ್. ಅಂಬೇಡ್ಕರ ಅವರ ಸಂವಿಧಾನ ಇದೆ.  ಕಂಪ್ಲೆಂಟ್ ಕೊಡಿ.  ಪ್ರಜಾಪ್ರಭುತ್ವದ ಆಧಾರದ ಮೇಲೆ ಧರಣಿ ಮಾಡಿ.  ಚಾಕೂ, ತಲವಾರ್ ಹಿಡಿದು ಬರೋದಕ್ಕೆ ಇದು ತಾಲಿಬಾನ್ ಅಲ್ಲ.  ಇನ್ಮುಂದೆ ನಿಮ್ಮ ಆಟ ನಡೆಯುವುದಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಕಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ವಿಜಯಪುರ ಜಿಲ್ಲಾ ಮುಖಂಡ ನೀಲಕಂಠ ಕಂದಗಲ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌