Siddharamaiah Mushriff: ಸಿದ್ಧರಾಮಯ್ಯ ಅಮೃತ ಮಹೋತ್ಸವಕ್ಕೆ ವಿಜಯಪುರದಿಂದ 175 ವಾಹನಗಳಲ್ಲಿ ಕಾರ್ಯಕರ್ತರ ಪ್ರಯಾಣ- ಅಬ್ದುಲಹಮೀದ ಮುಶ್ರಿಫ್

ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ವಿಜಯಪುರ ನಗರದಿಂದ 175 ನಾನಾ ವಾಹನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಾವಣಗೆರೆಗೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲಹಮೀದ ಮುಶ್ರಿಫ್ ತಿಳಿಸಿದ್ದಾರೆ. 

ವಿಜಯಪುರ ನಗರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ಧರಾಮಯ್ಯ ಜನಾನುರಾಗಿ ಜನನಾಯಕ.  ಸಕಲ ವರ್ಗಗಳ ಕಲ್ಯಾಣವನ್ನು ಬಯಸಿದ ನೇತಾರರಾಗಿದ್ದಾರೆ.  ಅವರು ವಿಜಯಪುರ ಜಿಲ್ಲೆಗೆ ನೀಡಿದ ಕೊಡುಗೆ ಅನನ್ಯ.  ಕೊಡುಗೆ ನೀಡಿರುವ ಭಾಗ್ಯಗಳ ಸರದಾರ ಸಿದ್ಧರಾಮಯ್ಯ ಅವರ ಜನ್ಮದಿನೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಂಕಲ್ಪ ಮಾಡಿದ್ದೇವೆ.  ಈ ಕಾರ್ಯಕ್ರಮದ ಯಶಸ್ವಿಯಾಗಿ ಕೆಪಿಸಿಸಿ ಪ್ರಚಾರ ಅಧ್ಯಕ್ಷ ಎಂ. ಬಿ. ಪಾಟೀಲ ಹಗಲಿರುಳು ಶ್ರಮಿಸುತ್ತಿದ್ದು, ಈ ಕಾರ್ಯಕ್ರಮದ ಯಶಸ್ವಿಗೆ ನಾವು ಸಹ ಕೈ ಜೋಡಿಸಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ದಾವಣೆಗೆರೆಗೆ ಪ್ರಯಾಣ ಬೆಳೆಸುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಕಡಾಗಲಾವ್, ಅರುಣ್ ಸಿಂಗ್ ಪರದೇಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಬಕ್ಷಿ, ಆರತಿ ಶಾಪುರ್ ಮಾಜಿ ಕಾರ್ಪೋರೇಟರ್ ಗಳಾದ ಶರಣಪ್ಪ ಯಕ್ಕುಂಡಿ, ರಾಜು ಜಾದವ, ಮೈನುದ್ದೀನ್ ಬಿಳಗಿ, ಜಮೀರ್ ಬಂಗಿ, ಅನ್ವರ್ ದ್ರಾಕ್ಷಿ, ಮುಖಂಡರಾದ ರವೀಂದ್ರ ಜಾಧವ, ಧನರಾಜ್ ಎ, ಇರಫಾನ ಶೇಖ, ಹೈದರ್ ನದಾಫ್, ಆಬಿದ್ ಸಂಗಮ್, ಆಸ್ಮಾ ಖಾಲಿಬಾಗ, ಮಂಜುಳಾ ಜಾದವ್, ಮಿರಾಸಾಬ ಮುಲ್ಲಾ, ಫೈರೋಜ್ ಶೇಕ್, ಅಕ್ರಮ ಜಾಗೀರ್ದಾರ್, ಸರ್ದಾರ್ ಪಟೇಲ್, ಮೈನು ಕಾಜಿ, ಅರುಣ್ ಭಜಂತ್ರಿ, ಕನ್ನಾನ್ ಮುಶ್ರೀಫ್, ಅಶೋಕ್ ಜಾದವ್, ಸುಭಾಷ ಜಾದವ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌