PU Sports: ಕೆರೂರಿನಲ್ಲಿ ಚಡಚಣ ತಾಲೂಕು ಪಿಯು ಕಾಲೇಜುಗಳ ಕ್ರೀಡಾಕೂಟ- ಅಭಿನವ ದೇವಾನಂದ ಚವ್ಹಾಣ ಚಾಲನೆ

ವಿಜಯಪುರ: ಚಡಚಣ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದ ಉಧ್ಘಾಟನೆ ಕಾರ್ಯಕ್ರಮ ಕೆರೂರಿನಲ್ಲಿ ನಡೆಯಿತು.

ಕೆರೂರಿನಲ್ಲಿ ಚಡಚಣ ತಾಲೂಕು ಪಿಯು ಕಾಲೇಜುಗಳ ಕ್ರೀಡಾಕೂಟದ ಉದ್ಘಾಟನೆ ಸಮಾರಂಭ ನಡೆಯಿತು

ಕೆರೂರ ಗ್ರಾಮದ ಶ್ರೀ.ಭೈರವನಾಥ ಶಿಕ್ಷಣ ಸಂಸ್ಥೆ ಆವರಣದಲ್ಲಿ ವಿಜಯಪುರ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶ್ರೀ ಭೈರವನಾಥ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಕ್ರೀಡಾಕೂಟವನ್ನು ಯುವ ನಾಯಕ ಮತ್ತು ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಅವರ ಪುತ್ರ ಅಭಿನವ ದೇವಾನಂದ ಚವ್ಹಾಣ ಉದ್ಘಾಟಿಸಿದರು.

ಶ್ರೀ.ಮಾಳಿಂಗರಾಯ ಮಹಾರಾಜರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಶ್ರೀ ಮಹಾಂತಯ್ಯ ಹಿರೇಮಠ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾದೇವ ಸಾಹುಕಾರ ಭೀ. ಭೈರಗೊಂಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಎಸ್. ಎನ್. ಬಗಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಹಾದಿಮನಿ, ಎಸ್. ಡಿ. ಚವ್ಹಾಣ, ಚಂದ್ರಶೇಖರ ಹೊಸಮನಿ, ಎನ್. ಆರ್. ಉಟಗಿ, ಡಿ. ಜಿ ತಿಕೋಟ ಹಾಗೂ ಗ್ರಾಮದ ಹಿರಿಯರು, ಮುಖಂಡರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌