BJP Appointment: ಬಿಜೆಪಿ ಜಿಲ್ಲಾ ವಕ್ತಾರರಾಗಿ ಸುರೇಶ ಬಿರಾದಾರ, ಜಿಲ್ಲಾ ಉಪಾಧ್ಯಕ್ಷರಾಗಿ ರಾಜಶೇಖರ ಪೂಜಾರ ನೇಮಕ

ವಿಜಯಪುರ: ವಿಜಯಪುರ ಜಿಲ್ಲಾ ಬಿಜೆಪಿ ವಕ್ತಾರರನ್ನಾಗಿ ಹಿರಿಯ ಮುಖಂಡ ಸುರೇಶ ಬಿರಾದಾರ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ನೇಮಕ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸುರೇಶ ಬಿರಾದಾರ ಅವರಿಗೆ ಜಿಲ್ಲಾ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರಾಜಶೇಖರ ಪೂಜಾರ ನೇಮಕ ಈ ಮಧ್ಯೆ, ರಾಜಶೇಖರ ಪೂಜಾರ ಅವರನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರ್. ಎಸ್. ಪಾಟೀಲ ಕೂಚಬಾಳ ಮಾಹಿತಿ ನೀಡಿದ್ದಾರೆ. ಉಭಯ ನಾಯಕರು […]

Doni Flood: ಬಸವ ನಾಡಿನ ತಾಳಿಕೋಟೆ ಭಾಗದಲ್ಲಿ ಮುಂದುವರೆದ ಡೋಣಿ ನದಿ ಪ್ರವಾಹ- ದೇವಸ್ಥಾನ ಜಲಾವೃತ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಡೋಣಿ ನದಿ ಪ್ರವಾಹ ಮಾತ್ರ ತಾಳಿಕೋಟೆ ಮತ್ತು ದೇವರ ಹಿಪ್ಪರಗಿ ತಾಲೂಕಿನಲ್ಲಿ ಇನ್ನೂ ಮುಂದುವರೆದಿದೆ.  ತಾಳಿಕೋಟೆ ಪಟ್ಟಣದ ಹೊರವಲಯದಲ್ಲಿರುವ ಡೋಣಿ ನದಿಯ ಬಳಿ ಹಳೆಯ ಸೇತುವೆ ಇನ್ನೂ ಜಲಾವೃತವಾಗಿದ್ದು, ಸೇತುವೆಯ ಮೇಲೆ ಏಳೆಂಟು ಅಡಿ ನೀರು ಹರಿಯುತ್ತಿದೆ.  ರಾಜ್ಯ ಹೆದ್ದಾರಿ ಸಂಖ್ಯೆ 61ರಲ್ಲಿ ಬರುವ ಈ ರಸ್ತೆಯಲ್ಲಿ ಸೇತುವೆ ಮುಳುಗಡೆಯಾಗಿರುವುದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್ ಆಗಿದೆ.  ಇದರಿಂದಾಗಿ ವಿಜಯಪುರ ತಾಳಿಕೋಟೆ ಹಾಗೂ ಇತರ […]

Govt MBP: ಪ್ರವಾಹ ಪರಿಹಾರ ಹಂಚಿಕೆ- ವಿಜಯಪುರ ಜಿಲ್ಲೆಯ ಕಡೆಗಣನೆ- ಹೋರಾಟದ ಎಚ್ಚರಿಕೆ ನೀಡಿದ ಎಂ. ಬಿ. ಪಾಟೀಲ

ವಿಜಯಪುರ: ರಾಜ್ಯದಲ್ಲಿ ಅತೀವೃಷ್ಛಿಯಿಂದಾಗಿ ಜನ, ಜಾನುವಾರು, ಬೆಳೆ ಮತ್ತು ಆಸ್ತಿಪಾಸ್ತಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾನಾ ಜಿಲ್ಲೆಗಳಿಗೆ ಪರಿಹಾರ ಬಿಡುಗಡೆ ಮಾಡಿದೆ.  ಆದರೆ, ಅನುದಾನ ಹಂಚಿಕೆಯಲ್ಲಿ ವಿಜಯಪುರ ಜಿಲ್ಲೆಯನ್ನು ಕೈಬಿಟ್ಟಿರುವುದಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅತೀವೃಷ್ಠಿಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಯೂ ಹಾನಿಯಾಗಿದೆ.  ರಾಜ್ಯ ಸರಕಾರ ಈಗ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ರೂ. 200 ಕೋ. ಹಣವನ್ನು ನಾನಾ […]