Gold Cash Car Theft: ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆ

ವಿಜಯಪುರ ಗುಮ್ಮಟನಗರಿ ವಿಜಯಪುರದಲ್ಲಿ ಕಳ್ಳರು ಖತರ್ನಾಕ್ ಕಳ್ಳತನ ನಡೆಸಿದ್ದಾರೆ. ಕೇವಲ ನಗನಾಣ್ಯ ದೋಚಿದ್ದಷ್ಟೇ ಅಲ್ಲದೆ ಕಾರನ್ನೂ ಕೂಡ ಕದ್ದು ಪರಾರಿಯಾಗಿದ್ದಾರೆ.

ವಿಜಯಪುರ ನಗರದ ಮಲ್ಲಿಕಾರ್ಜುನ ನಗರದಲ್ಲಿ ಹಾಗೂ ಶ್ರೀನಗರದಲ್ಲಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ. ನಸುಕಿನ ಜಾವ ಮನೆಗೆ ನುಗ್ಗಿರುವ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ.

ಕಳ್ಳತನವಾದ ಮನೆ

ಮೊದಲ ಘಟನೆಯಲ್ಲಿ ವಿಜಯಪುರ ನಗರದ ಮಲ್ಲಿಕಾರ್ಜುನ ನಗರದಲ್ಲಿರುವ ಎಂಜಿನಿಯರ್ ಮಲ್ಲನಗೌಡ ಬಿರಾದಾರ ಎಂಬುವರ ಮನೆಯಲ್ಲಿ ಬಾರಿ ಕಳ್ಳತನ ನಡೆಸಿದ್ದಾರೆ. ಇವರ ಮನೆಯಲ್ಲಿ ಅವರ ಪತ್ನಿ ಗೀತಾ ಬಿರಾದಾರ ಮಾತ್ರ ವಾಸವಾಗಿದ್ದರು. ಮಲ್ಲನಗೌಡ ಬಿರಾದಾರ ಕೆಲಸ ನಿಮಿತ್ಯ ಬೇರೆ ಊರಿಗೆ ತೆರಳಿದ್ದರು. ಇವರ ಮಕ್ಕಳಿಬ್ಬರು ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿನಲ್ಲಿದ್ದಾರೆ.‌

ಸೋಮವಾರ ರಾತ್ರಿ ಮಲ್ಲಗೌಡ ಬಿರಾದಾರ ಅವರ ಪತ್ನಿ ಗೀತಾ ಬಿರಾದಾರ ಒಬ್ಬರೇ ಮನೆಯಲ್ಲಿ ಇದ್ದರು. ಈ ಮನೆಗೆ ನಸುಕಿನ ನುಗ್ಗಿದ ಕಳ್ಳರು, ತಮ್ಮ ಕೈಚಳಕ ತೋರಿಸಿರುವ ಘಟನೆ ಬೆಳಿಗ್ಗೆ ಬಯಲಾಗಿದೆ.‌‌ ಎಂದಿನಂತೆ ಬೆಳಗ್ಗೆ ಬೆಳಿಗ್ಗೆ ಎದ್ದ ಗೀತಾ ಬಿರಾದಾರ ಬೆಡ್ ರೂಂ ನಿಂದ ಬಾಗಿಲು ತೆರೆಯಲು ಹೋದಾಗ ಈ ಘಟನೆ ಗೊತ್ತಾಗಿದೆ.

ಗೀತಾ ಬಿರಾದಾರ ರಾತ್ರಿ ಬಾಗಿಲನ್ನು ಮುಚ್ಚಿರಲಿಲ್ಲ. ಇದರಿಂದ ಅನುಮಾನ ಬಾಗಿಲನ್ನು ತೆರೆಯಲು ಹೋದಾಗ ಅದು ಓಪನ್ ಆಗಿಲ್ಲ. ಆ ಬಾಗಿಲದ ಕೊಂಡಿಯನ್ನು ಹೊರಗಿನಿಂದ ಕಟ್ಟಿರುವುದು ಬೆಳಕಿಗೆ ಬಂದಿದೆ. ಕಿಟಕಿಯಲ್ಲಿ ನೋಡಿದಾಗ ಬಾಗಿಲನ್ನು ತೆರೆಯಲು ಬಾರದಂತೆ ಹೊರಗಡೆ, ಸೀರೆಯಿಂದ ಬಿಗಿಯಾಗಿ ಕಟ್ಟಿರುವುದನ್ನು ಮೋಡಿದ್ದಾರೆ. ‌ನಂತರ ಅವರು ತಮ್ಮ ತಂದೆಯಾದ ಶಂಕರಗೌಡ ಮೂಲಿಮನಿ ಅವರಿಗೆ ಕರೆ ಮಾಡಿ ಕಳ್ಳತನದ ಮಾಹಿತಿಯನ್ನು ನೀಡಿದ್ದಾರೆ. ಬಳಿಕ ಗೀತಾ ಬಿರಾದಾರ ಪಕ್ಕದ ಮತ್ತೋಂದು ಬಾಗಿಲಿನಿಂದ ಬಾಗಿಲಿನಿಂದ ಹೋಗಿ ಮನೆ ಮುಖ್ಯದ್ವಾರವನ್ನು ತೆರೆದಿದ್ದಾರೆ. ‌

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೀತಾ ಬಿರಾದಾರ, ಸೋಮವಾರ ರಾತ್ರಿ ಮನೆಯಲ್ಲಿ ನಾನೊಬ್ಬಳೇ ಇದ್ದೆ. ಬೆಳಗ್ಗೆ ಈ ಘಟನೆ ನಡೆದಿರುವುದು ಗೊತ್ತಾಗಿದೆ. ಕಳ್ಳರು ನನೆಯಲ್ಲಿದ್ದ 125 ಗ್ರಾಂ ಚಿನ್ನಾಭರಣ, ರೂ. 1 ಲಕ್ಷ ನಗದು ಕಳ್ಳತನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಮನೆ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್ ಕಾರನ್ನು ಕೂಡ ಕದ್ದುಕೊಂಡು ಪರಾರಿಯಾಗಿದ್ದಾರೆ. ಮನೆಯೊಳಗೆ ಟೇಬಲ್ ಮೇಲೆ ಕಾರಿನ ಕೀ ಯನ್ನು ಇಡಲಾಗಿತ್ತು. ಕಳ್ಳರು ಕಿಟಕಿಯಿಂದ ಬಾಗಿಲು ತೆರೆದಾಗ ಟೇಬಲ್ ಮೇಲೆ ಇದ್ದ ಕಾರಿನ ಕೀ ಕೆಳಗೆ ಬಿದ್ದಿದೆ.‌‌ ಅದನ್ನು ಎತ್ತಿಕೊಂಡು ಕಾರು ಸಮೇತ ಪರಾರಿಯಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಎರಡನೇ ಪ್ರಕರಣದಲ್ಲಿ ವಿಜಯಪುರ ನಗರದ ಶ್ರೀನಗರದಲ್ಲಿಯೂ ಕೂಡ ಕಳ್ಳತನ ನಡೆದಿದೆ. ಶ್ರೀನಗರದಲ್ಲಿರುವ ಡಾ. ಜಿ. ಎಂ. ಚೌಗುಲೆ ಎಂಬುವರ ಮನೆಗೆ ನುಗ್ಗಿದ ಕಳ್ಳರು ತಮ್ಮ ಕೈಗೆ ತೋರಿಸಿದ್ದಾರೆ. ಕಿಟಕಿಯ ಗ್ರಿಲ್ ಮುರಿದ ಕಳ್ಳರು ಒಳಗೆ ಬಂದು 20 ಗ್ರಾಂ ಚಿನ್ನಾಭರಣ ಮತ್ತು ನಗದು ಕದ್ದು ಪರಾರಿಯಾಗಿದ್ದಾರೆ.

ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆ

ಈ ಕಳ್ಳರ ಓಡಾಟ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಮಾಹಿತಿ ಪಡೆದಿರುವ ವಿಜಯಪುರ ನಗರದ ಆದರ್ಶ ನಗರ ಠಾಣೆ ಪೊಲೀಸರು ಕಳ್ಳರ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ.

ವಿಜಯಪುರ ನಗರದ ಆದರ್ಶ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

ಹೊಸ ಪೋಸ್ಟ್‌